Lakshmi Nivasa: ಕನ್ನಡ ಕಿರುತೆರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರ ಮನಸ್ಸನ್ನ ಗೆದ್ದು ಬಹಳ ಬೇಗ ಟಾಪ್ ಸೀರಿಯಲ್ ಆಗಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಕಿರುತೆರೆಯ ಪ್ರೇಕ್ಷಕರ ಅಚ್ಚು ಮೆಚ್ಚಿನ ಸೀರಿಯಲ್ ಗಳಲ್ಲಿ ಒಂದಾಗಿದೆ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರವು ವಿಶೇಷವಾಗಿದ್ದು ಸಿದ್ಧೇಗೌಡ್ರ ಪಾತ್ರ ಎಲ್ಲರ ವಿಶೇಷ ಗಮನವನ್ನು ಸೆಳೆದಿದೆ ಮತ್ತು ಜನಪ್ರಿಯತೆಯನ್ನು ಸಹಾ ಪಡೆದುಕೊಂಡಿದೆ. ಅದ್ರಲ್ಲೂ ಭಾವನಾ ಪ್ರೀತಿಯಲ್ಲಿ ಬಿದ್ದಿರೋ ಸಿದ್ಧೇಗೌಡ್ರ ಪಡ್ತಿರೋ ಪಾಡು ಎಲ್ಲರ ಗಮನವನ್ನ ಸೆಳೆದಿದೆ.
ಭಾವನಾ (Bhavana) ಮದುವೆ ಆಗ್ತಿಲ್ಲ ಅನ್ನೋದು ಅವರ ಅಪ್ಪ ಅಮ್ಮನ ಯೋಚನೆಗೆ ಕಾರಣವಾಗಿದೆ. ಮಗಳಿಗಾಗಿ ಒಳ್ಳೆ ಹುಡುಗನನ್ನ ನೋಡಿ ಮದುವೆ ಮಾಡಬೇಕು ಅನ್ನೋದು ಅವರ ಆಸೆ, ಕನಸು. ಆದರೆ ಭಾವನಾ ತನಗೆ ಮದುವೆಯೇ ಬೇಡ ಅಂತ ನಿರ್ಧಾರವನ್ನು ಮಾಡಿದ್ದಾಳೆ. ಇನ್ನೊಂದು ಕಡೆ ಸಿದ್ಧೇಗೌಡ್ರ ಮನಸ್ಸು ಭಾವನಾ ಕಡೆಗೆ ವಾಲಿದೆ. ಭಾವನಾನೇ ಮದುವೆ ಆಗಬೇಕು ಅನ್ನೋದು ಅವರ ಆಸೆಯಾಗಿದೆ.
![](https://news9kannada.com/wp-content/uploads/2024/05/images-2024-05-01T201507.280-jpeg.webp)
ಹೇಗಾದ್ರು ಮಾಡಿ ಭಾವನಾ ಮನಸ್ಸನ್ನ ಗೆಲ್ಲ ಬೇಕು ಅಂತ ಸಿದ್ಧೇಗೌಡ್ರು ಪ್ರಯತ್ನ ಮಾಡುವಾಗಲೇ ಇದನ್ನೆಲ್ಲಾ ಗಮನಿಸಿರೋ ಭಾವನಾ ಆಫೀಸ್ ಗೆ ಬಂದ ಸಿದ್ಧೇಗೌಡ್ರನ್ನ ನೋಡಿ ಕೋಪ ಮಾಡ್ಕೊಂಡು , ಪಕ್ಕಕ್ಕೆ ಕರ್ಕೊಂಡು ಹೋಗಿ ಕ್ಲಾಸ್ ತಗೊಂಡಿದ್ದಾಳೆ, ಸಿದ್ಧೇಗೌಡ್ರು ನಿಮ್ಮನ್ನ ನೋಡೋಕೆ ಬರ್ಲಿಲ್ಲ ಅಂದ್ರೂ ಆ ಮಾತನ್ನ ನಂಬೋದಕ್ಕೆ ಭಾವನಾ ಮಾತ್ರ ಸಿದ್ಧ ಇಲ್ಲ.
ಸಿದ್ಧೇಗೌಡ್ರು (Siddegowdru) ತನ್ನ ಹಿಂದೆ ಹಿಂದೇನೇ ಸುತ್ತುತ್ತಾ ಇದ್ದಾರೆ ಅನ್ನೋದು ಭಾವನಾ ಕೋಪಕ್ಕೆ ಮುಖ್ಯ ಕಾರಣವಾಗಿದೆ. ವಾಹಿನಿ ಶೇರ್ ಮಾಡಿದ ಪ್ರೊಮೋ ನೋಡಿದ ಮೇಲಂತೂ ಸಿದ್ಧೇಗೌಡ್ರ ಅಭಿಮಾನಿಗಳು ಅವರಿಗೆ ತಮ್ಮ ಕಡೆಯಿಂದ ಸಲಹೆಗಳನ್ನು ನೀಡೋಕೆ ಮುಂದಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಕಾಮೆಂಟ್ ಗಳನ್ನು ಮಾಡೋ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
![](https://news9kannada.com/wp-content/uploads/2024/05/20240501_201403-1024x576.webp)
ನಿಜವಾದ ಪ್ರೀತಿಗೆ ಬೆಲೆ ಸಿಗಲ್ಲಮ್ಮಾ, ಸಿದ್ದು ಬೆಸ್ಟ್, ಸಿದ್ಧೇಗೌಡ್ರೆ ಸ್ವಲ್ಪ ದಿನ ಭಾವನಾ ಹಿಂದೆ ಹೋಗೋದನ್ನ ನಿಲ್ಸಿ, ಆಗ ಭಾವನಾಗೂ ಗೊತ್ತಾಗುತ್ತೆ ನಿಮ್ಮ ಮೇಲೆ ಅವಳಿಗೂ ಲವ್ ಆಗಿದೆ ಅಂತ. ಭಾವನಾ ಮೇಡಂ ನೀವು ಹೇಳಿದ್ರೆ ಅಂತ ಸಿದ್ಧೇಗೌಡ್ರು ನಿಮ್ಮ ಹಿಂದೆ ಬರೋದು ನಿಲ್ಸೋ ಚಾನ್ಸೇ ಇಲ್ಲ. ಬರಬೇಡಿ ಅಂತ ಹೇಳೋಕೆ ನೀವ್ಯಾರು? ಅದು ಸಿದ್ಧೇಗೌಡ್ರ ಇಷ್ಟ ಹೀಗೆ ನೆಟ್ಟಿಗರು ನಾನಾ ಕಾಮೆಂಟ್ ಗಳನ್ನ ಮಾಡ್ತಾ ಇದ್ದಾರೆ.