Lakshmi Nivasa: ವೆಂಕಿಯ ಇಂತಹ ಪರಿಸ್ಥಿತಿಗೆ ಕಾರಣವೇ ಜಯಂತ್; ಲಕ್ಷ್ಮೀ ನಿವಾಸ ಸೀರಿಯಲ್ ನ ಟ್ವಿಸ್ಟ್, ಪ್ರೇಕ್ಷಕರು ಥ್ರಿಲ್

Written by Soma Shekar

Published on:

---Join Our Channel---

Lakshmi Nivasa: ಕನ್ನಡ ಕಿರುತೆರೆಯಲ್ಲಿ ಮನರಂಜನೆಯ ಮೂಲ ಎಂದರೆ ಅವು ಸೀರಿಯಲ್ ಗಳು ಅನ್ನೋದ್ರಲ್ಲಿ ಅನುಮಾನವೇ ಬೇಡ. ಸಾಕಷ್ಟು ಸೀರಿಯಲ್ ಗಳು ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದ್ದರೂ ಕೂಡಾ ಕೆಲವು ಸೀರಿಯಲ್ ಗಳು (Serials) ಮಾತ್ರ ಟಾಪ್ ಸೀರಿಯಲ್ ಗಳಾಗಿ, ಟಿ ಆರ್ ಪಿ ವಿಚಾರದಲ್ಲಿ ಸದ್ದು ಮಾಡುತ್ತಾ ಜನರ ಅಭಿಮಾನ ಸೀರಿಯಲ್ ಗಳಾಗಿರುತ್ತವೆ. ಅಂತಹ ಸೀರಿಯಲ್ ಗಳಲ್ಲಿ ಒಂದು ಲಕ್ಷ್ಮೀ ನಿವಾಸ ಸೀರಿಯಲ್ ಆಗಿದೆ. ಆರಂಭವಾದ ಕೆಲವೇ ದಿನಗಳಲ್ಲಿ ಅಪಾರವಾದ ಜನಪ್ರಿಯತೆ ಪಡೆದಿದೆ ಹಾಗೂ ಸೀರಿಯಲ್ ನ ಕಥೆ ಜನರ ಮನಸ್ಸಿಗೆ ಹತ್ತಿರವಾಗಿದೆ.

ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನ ಹೊಸ ಹೊಸ ಟ್ವಿಸ್ಟ್ ಗಳು ಸಿಕ್ಕಾಪಟ್ಟೆ ಕುತೂಹಲವನ್ನು ಮೂಡಿಸುತ್ತಿದೆ. ಜಾಹ್ನವಿಯ ಜೋಡಿಯಾದ ಜಯಂತ್ ಸೈಕೋ ಎಂದು ತಿಳಿದಾಗ ಪ್ರೇಕ್ಷಕರು ಶಾಕ್ ಆಗಿದ್ರು, ಇನ್ನೊಂದು ಕಡೆ ಭಾವನಾ ಮತ್ತು ಸಿದ್ಧೇಗೌಡ್ರ ನಡುವಿನ ಕಥೆ ಮನರಂಜನೆ ನೀಡ್ತಾ ಇದೆ. ಇದೆಲ್ಲವುಗಳ ನಡುವೆ ಈಗ ಮತ್ತೊಂದು ಹೊಸ ಟ್ವಿಸ್ಟ್ ಎದುರಾಗಿದೆ. ಅದೇ ಜಯಂತ್ ಮತ್ತು ವೆಂಕಿ ನಡುವಿನ ಲಿಂಕ್ ಏನು ಅನ್ನೋದು.

ಸೋಶಿಯಲ್ ಮೀಡಿಯಾದಲ್ಲಂತೂ ಇದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೀತಾ ಇವೆ. ಯುಗಾದಿ ಹಬ್ಬಕ್ಕೆ ಜಾಹ್ನವಿ ಮನೆಗೆ ಬಂದಂತಹ ಜಯಂತ್ (Jayanth) ಗೆ ಕೆಲವೊಂದು ವಿಚಾರಗಳು ತಿಳಿದ ಮೇಲೆ ತನ್ನ ಫ್ಲಾಷ್ ಬ್ಯಾಕ್ ನೆನಪಾಗ್ತಿದೆ. ತಾನು ಆಶ್ರಮದಲ್ಲಿ ಬೆಳೆದ ದಿನಗಳು ನೆನಪಾಗಿದ್ದು ಅಲ್ಲಿ ವೆಂಕಿ ಪಾತ್ರವು ಸಹಾ ಇದೆ ಅನ್ನೋದೇ ಸಿಕ್ಕಾಪಟ್ಟೆ ರೋಚಕ ವಾದಂತಹ ಟ್ವಿಸ್ಟ್ ಆಗಿದ್ದು, ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

ಇದನ್ನ ನೋಡಿದ ಮೇಲೆ ನೆಟ್ಟಿಗರಂತೂ ತಮ್ಮದೇ ರೀತಿಯಲ್ಲಿ ಕಥೆಯನ್ನು ವ್ಯಾಖ್ಯಾನ ಮಾಡ್ತಾ ಇದ್ದಾರೆ. ಒಂದಷ್ಟು ಜನರಂತೂ ವೆಂಕಿ (Venki) ಕಿವುಡ ಮತ್ತು ಮೂಗನಾಗಿರೋದೇ ಬಾಲ್ಯದಲ್ಲಿ ನಡೆದಿರೋ ಘಟನೆಯಿಂದ ಮತ್ತೆ ಅದಕ್ಕೆ ಕಾರಣ ಈ ಜಯಂತ್ ಆಗಿರ್ತಾನೆ ಅಂತ ಹೇಳ್ತಿದ್ದಾರೆ. ಅದೇ ವೇಳೆ ಇನ್ನೂ ಕೆಲವರು ಜಯಂತ್ ಆಶ್ರಮದಿಂದ ಹೊರಗೆ ಬಂದಿದ್ದು ಹೇಗೆ? ಇಷ್ಟು ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿದ್ದು ಹೇಗೆ? ಅದಕ್ಕೂ ಏನೋ ಕಥೆ ಇದೆ ಅಂತ ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ.

Leave a Comment