Tollywood Actor: ಗುಂಟೂರು ಕಾರಂ ಸಿನಿಮಾ ಮಾಡೋದೇ ಕಷ್ಟ ಆಯ್ತು; ಅಸಮಾಧಾನ ಹೊರ ಹಾಕಿದ ನಟ

Written by Soma Shekar

Published on:

---Join Our Channel---

Tollywood Actor: ಟಾಲಿವುಡ್ ನಲ್ಲಿ (Tollywood Actor) ಅತಡು, ಖಲೇಜಾದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಕಾಂಬಿನೇಷನ್ ಎಂದರೆ ಅದು ನಟ ಮಹೇಶ್ ಬಾಬು (Mahesh Babu) ಮತ್ತು ನಿರ್ದೇಶಕ ತ್ರಿವಿಕ್ರಮ್ (Trivikram) ಕಾಂಬಿನೇಷನ್. ಈ ಕಾಂಬಿನೇಷನ್ ನಲ್ಲಿ ಗುಂಟೂರು ಕಾರಂ ಸಿನಿಮಾ ಘೋಷಣೆ ಆದಾಗ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದು ಮಾತ್ರವೇ ಅಲ್ಲದೇ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು, ಸಿನಿಮಾ ಬಿಡುಗಡೆಗಾಗಿ ಕಾದಿದ್ದರು. ಆದರೆ ಸಿನಿಮಾ ಬಿಡುಗಡೆ ನಂತರ ಎಲ್ಲರ ನಿರೀಕ್ಷೆಗಳನ್ನು ನಿಜ ಮಾಡುವಲ್ಲಿ ಸಿನಿಮಾ ಸೋತಿತು ಹಾಗೂ ಸಾಧಾರಣ ಗೆಲುವನ್ನು ಮಾತ್ರವೇ ದಾಖಲಿಸಿತು.

ಗುಂಟೂರು ಕಾರಂ (Guntur Karam) ಸಿನಿಮಾ ಬಿಡುಗಡೆ ನಂತರ ನೀರಸ ಪ್ರತಿಕ್ರಿಯೆ ಕಂಡಿತ್ತು. ಸಿನಿಮಾ ಕುರಿತಾಗಿ ಇಟ್ಟುಕೊಂಡ ನಿರೀಕ್ಷೆಗಳು ಸುಳ್ಳಾಯಿತು. ಸಿನಿಮಾ ಕಂಡ ಇಂತಹ ವಿಫಲತೆಯನ್ನು ಕುರಿತಾಗಿ ಚಿತ್ರ ತಂಡದವರು ಯಾರೂ ಸಹಾ ನೇರವಾಗಿ ಮಾತನಾಡಲಿಲ್ಲವಾದರೂ ಸಿನಿಮಾ ವಿಫಲಗೊಂಡಿದ್ದು ಮಾತ್ರ ವಾಸ್ತವ. ಆದರೆ ಈಗ ಈ ಸಿನಿಮಾ ಕುರಿತಾಗಿ ಸಿನಿಮಾದಲ್ಲಿನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಜಗಪತಿ ಬಾಬು ಅವರು ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.

ಟಾಲಿವುಡ್ ಕುಟುಂಬ ಕಥಾ ಚಿತ್ರಗಳು ಮತ್ತು ಹಾಸ್ಯ ಪ್ರಧಾನ ಸಿನಿಮಾಗಳ ಮೂಲಕವೇ ಅಭಿಮಾನಿಗಳನ್ನು ಪಡೆದುಕೊಂಡಿದ್ದ ನಾಯಕ ನಟ ಜಗಪತಿ ಬಾಬು (Jagapati Babu) ಅವರು ತಮ್ಮ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಖಡಕ್ ವಿಲನ್ ಆಗಿ ರಂಜಿಸುತ್ತಾ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ನಟ ಗುಂಟೂರು ಕಾರಂ ಸಿನಿಮಾದ ಸೋಲಿನ ಕುರಿತಾಗಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಮಹೇಶ್ ಬಾಬು ಜೊತೆಗೆ ನಟಿಸೋದು, ಅವರೊಟ್ಟಿಗೆ ಕೆಲಸ ಮಾಡೋದು ನನಗೆ ತುಂಬಾ ಇಷ್ಟ. ಆದರೆ, ಗುಂಟೂರು ಖಾರಂ ಸಿನಿಮಾ ನನಗೆ ಅಷ್ಟೊಂದು ಖುಷಿಯನ್ನು ನೀಡಲಿಲ್ಲ. ಕಥೆಯನ್ನು ಕೇಳಿದಾಗ ಸಿನಿಮಾದಲ್ಲಿನ ಪಾತ್ರಗಳು ಬಹಳ ಸ್ಟ್ರಾಂಗ್ ಎನಿಸಿತ್ತು. ಆದರೆ ಸಿನಿಮಾ ಆರಂಭವಾದ ಮೇಲೆ ಒಂದು ರೀತಿಯಲ್ಲಿ ಗೊಂದಲಮಯ ಎನಿಸತೊಡಗಿತು. ಕೊನೆಗೆ ಸಿನಿಮಾದ ಶೂಟಿಂಗ್ ಮುಗಿಸೋದೆ ಕಷ್ಟ ಎನಿಸಿತ್ತು.

ನಾನು ನನ್ನ ಪಾತ್ರಕ್ಕೆ ಏನೆಲ್ಲಾ ಮಾಡಬೇಕಾಗಿತ್ತೋ ಅದೆಲ್ಲವನ್ನೂ ಮಾಡಿದ್ದೇನೆ. ಇಂತಹ ಸಿನಿಮಾಗಳಲ್ಲಿ ಇಂಥಹ ಒಂದು ಅದ್ಭುತ ಕಾಂಬಿನೇಷನ್ ಮಿಸ್ ಮಾಡಿಕೊಳ್ಳಲು ನನಗೆ ಇಷ್ಟ ಇರಲಿಲ್ಲ ಅದಕ್ಕೆ ಆ ಸಿನಿಮಾವನ್ನು ಒಪ್ಪಿಕೊಂಡೆ ಎನ್ನುವ ಮಾತನ್ನು ಹೇಳಿದ್ದಾರೆ. ಜಗಪತಿ ಬಾಬು ಅವರು ಫ್ಯಾಮಿಲಿ ಸ್ಟಾರ್ ನಿಂದ ಈಗ ಖಡಕ್ ವಿಲನ್ ಆಗಿ ಸಿನಿಮಾಗಳಲ್ಲಿ ಅಬ್ಬರಿಸುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಹೆಸರನ್ನು ಮಾಡುತ್ತಿದ್ದಾರೆ.

Leave a Comment