Nagarjuna: ಮಗ ನಾಗಚೈತನ್ಯ ಮಾಡಿದ ಕೆಲಸ ಇನ್ನೂ ನೋವನ್ನ ಉಳಿಸಿದೆ, ನಟ ನಾಗಾರ್ಜುನ ಹೀಗೆ ಹೇಳಿದ್ಯಾಕೆ?

Written by Soma Shekar

Published on:

---Join Our Channel---

Nagarjuna: ತೆಲುಗು ಸಿನಿಮಾ ರಂಗದ ಸ್ಟಾರ್ ಕುಟುಂಬಗಳಲ್ಲಿ ಅಕ್ಕಿನೇನಿ ಕುಟುಂಬ ಸಹಾ ಒಂದು. ದಿವಂಗತ ಹಿರಿಯ ನಟ ನಾಗೇಶ್ವರ ರಾವ್, ಅವರ ಪುತ್ರ ಸ್ಟಾರ್ ನಟ ನಾಗಾರ್ಜುನ (Nagarjuna) ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದ ನಟರು. ಈಗ ಈ ಕುಟುಂಬದ ಮೂರನೇ ತಲೆಮಾರಿನ ನಾಯಕರಾಗಿ ನಾಗಚೈತನ್ಯ (Naga Chaitanya) ಮತ್ತು ಅಕ್ಕಿನೇನಿ ಅಖಿಲ್ ಸಿನಿಮಾಗಳಲ್ಲಿ ಯುವ ನಾಯಕ ನಟರಾಗಿ ಹೆಸರನ್ನು ಮಾಡಿದ್ದಾರೆ.

ನಾಗಚೈತನ್ಯ ನಟ ನಾಗಾರ್ಜುನ ಅವರ ಮೊದಲ ಪತ್ನಿಯ ಮಗ. ನಾಗಾರ್ಜುನ ಅವರು ನಿರ್ಮಾಪಕ ರಾಮಾನಾಯ್ಡು ಅವರ ಮಗಳು, ಸ್ಟಾರ್ ನಟ ವೆಂಕಟೇಶ್ ಅವರ ಸಹೋದರಿಯಾದ ಲಕ್ಷ್ಮಿ ಅವರನ್ನು ಮದುವೆಯಾಗಿದ್ದರು. ನಾಗಾರ್ಜುನ ಮತ್ತು ಲಕ್ಷ್ಮಿ ದಂಪತಿಯ ಮಗನೇ ನಾಗ ಚೈತನ್ಯ.

ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ನಾಗಾರ್ಜುನ ಮತ್ತು ಲಕ್ಷ್ಮೀ ಅವರು ವಿಚ್ಚೇದನ ಪಡೆದು ಬೇರೆಯಾದರು. ‌ಅದಾದ ನಂತರ ನಾಗಾರ್ಜುನ ಅವರು ಅಂದಿನ ಸ್ಟಾರ್ ನಟಿಯರಲ್ಲಿ ಒಬ್ಬರಾದಂತಹ ಅಮಲಾ (Amala) ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಈ ದಂಪತಿಗ ಮಗನೇ ಅಕ್ಕಿನೇನಿ ಅಖಿಲ್.

ನಾಗಾರ್ಜುನ ಅವರ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾಗಚೈತನ್ಯ ಕುರಿತಾಗಿ ಆಡಿದ ಕೆಲವು ಮಾತುಗಳು ವೈರಲ್ ಆಗಿದೆ ಮತ್ತು ಟಾಲಿವುಡ್ ನಲ್ಲಿ ಈ ವಿಷಯ ಹಾಟ್ ಟಾಪಿಕ್ ಆಗಿದೆ ಅನ್ನೋದು ಸುಳ್ಳಲ್ಲ. ನಟ ನಾಗಾರ್ಜುನ ನಾಗಚೈತನ್ಯ ಬಾಲ್ಯದ ಕುರಿತಾಗಿ ಮಾತನಾಡಿದ್ದಾರೆ.

ಬಾಲ್ಯದಲ್ಲಿ ಅಂದರೆ ನಾಗಾರ್ಜುನ ಮತ್ತು ಲಕ್ಷ್ಮೀ ಅವರ ವಿಚ್ಚೇದನದ ನಂತರ ನಾಗಚೈತನ್ಯ ತಾಯಿಯ ಜೊತೆಗೆ ಅಮೆರಿಕಾಕ್ಕೆ ಹೋದರು. ಅಲ್ಲೇ ತಮ್ಮ‌ ವಿದ್ಯಾಭ್ಯಾಸ ಮುಗಿಸಿಕೊಂಡು ಬಂದವರು. ಕೆಲವೊಮ್ಮೆ ಮಾತ್ರವೇ ನಾಗಚೈತನ್ಯ ತಮ್ಮ ತಂದೆ ನಾಗಾರ್ಜುನ ಅವರನ್ನು ಭೇಟಿ ಮಾಡುತ್ತಿದ್ದರಂತೆ.

ಅದಕ್ಕೆ ಬಾಲ್ಯದಲ್ಲಿ ನಾಗಚೈತನ್ಯ ತನ್ನ ಜೊತೆಗೆ ಇರಲಿಲ್ಲ ಎನ್ನುವ ನೋವು ನಾಗಾರ್ಜುನ ಅವರ ಮನಸ್ಸಿನಲ್ಲಿ ಇಂದಿಗೂ ಇದೆಯಂತೆ.‌ ಮಗನ ಬಾಲ್ಯದ ಸಮಯದಲ್ಲಿ ತಾನು ಅವನೊಡನೆ ಸಮಯ ಕಳೆಯಲಿಲ್ಲ ಎಂಬ ನೋವು ತನ್ನನ್ನು ಇಂದಿಗೂ ಕಾಡುತ್ತಿದೆ ಎಂದು ನಾಗಾರ್ಜುನ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.‌

Leave a Comment