Shravani Subramanya: ಸುಬ್ಬುಗೆ ಆಯ್ತು ಪ್ರೀತಿ, ಸುರೇಂದ್ರನಿಂದ ವಿಜಯಾಂಬಿಕೆ ಮೇಲೆ ಶುರುವಾಯ್ತು ಅನುಮಾನ

Written by Soma Shekar

Updated on:

---Join Our Channel---

Shravani Subramanya: ಪ್ರಸಾರ ಕಂಡ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಬದಲಾಗಿರುವ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿಯಲ್ಲಿನ ಹೊಸ ಹೊಸ ತಿರುವುಗಳು ಪ್ರೇಕ್ಷಕರಿಗೆ ಮನರಂಜನೆ ನೀಡಿದೆ. ಅಪ್ಪನ ಮಾತನ್ನು ಸುಳ್ಳು ಮಾಡೋದಕ್ಕೆ ಸುಬ್ಬು (Subbu) ತನ್ನ ಮನದಲ್ಲಿ ಶ್ರಾವಣಿಯನ್ನು ನೆನಪಿಸಿಕೊಂಡಾಗ ಅಚ್ಚರಿ ಎನ್ನುವಂತೆ ಶ್ರಾವಣಿ ಮನೆಗೆ ಬಂದು ಎಲ್ಲರಿಗೂ ಶಾ ಕ್ ನೀಡಿದ್ದಾಳೆ. ಅಷ್ಟು ಮಾತ್ರವಲ್ಲದೇ ಸುಬ್ಬುಗೆ ಅವನು ಕಳ್ಕೊಂಡಿದ್ದ ಬೈಕ್ ಅನ್ನ ಕೂಡಾ ತಂದು ಕೊಟ್ಟು ಅವನ ಮುಖದಲ್ಲಿ ನಗುವನ್ನು ಮೂಡಿಸಿದ್ದಾಳೆ.

ಇನ್ನೊಂದು ಕಡೆ ಸುಬ್ಬು ಪ್ರೀತಿ ಅಂದ್ರೆ ಏನು ಅಂತ, ಪ್ರೀತಿಸಿದವರ ಮನಸಲ್ಲಿ ಏನೆಲ್ಲಾ ಆಲೋಚನೆಗಳು ಬರುತ್ತೆ ಅಂತ ಶ್ರಾವಣಿಯನ್ನ ಕೇಳಿದ್ದು, ಅವರ ಮಾತುಗಳನ್ನ ಕದ್ದು ಕೇಳಿಸಿಕೊಂಡ ಶ್ರೀ ವಲ್ಲಿ ಸುಬ್ಬು ತನ್ನ ಬಗ್ಗೇನೇ ಮಾತಾಡ್ತಾ ಇದ್ದಾನೆ, ತನ್ನ ಮೇಲೆ ಅವನಿಗೆ ಪ್ರೀತಿ ಆಗಿದೆ ಅಂತ ಮನಸ್ಸಿನಲ್ಲಿ ಬಹಳ ಖುಷಿಪಡುತ್ತಿದ್ದಾಳೆ. ಇವೆಲ್ಲವುಗಳ ಮಧ್ಯೆ ಇನ್ನೊಂದು ಕಡೆ ವೀರೇಂದ್ರನಿಗೆ ಹತ್ರ ಆಗ್ತಾ ಇರೋ ಶ್ರಾವಣಿಯನ್ನು ಮತ್ತೆ ದೂರ ಮಾಡಬೇಕು ಅಂತ ವಿಜಯಾಂಬಿಕೆ ಮತ್ತು ಮದನ್ ದೊಡ್ಡ ತಂತ್ರವನ್ನೇ ಹೂಡಿದ್ದಾರೆ.‌

ನಡೆಯಲಿರುವ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಶ್ರಾವಣಿ ಬಗ್ಗೆ ಪ್ರಶ್ನೆಗಳನ್ನು ಕೇಳಿಸಿ ವೀರೇಂದ್ರನಿಗೆ ಕೋಪ ತರಿಸುವುದಕ್ಕೆ ಪ್ಲಾನ್ ಮಾಡಿದ್ದಾರೆ. ಆದರೆ ವೀರೇಂದ್ರ ಸಹೋದರ ಸುರೇಂದ್ರ ಪ್ರೆಸ್ ಕಾನ್ಫರೆನ್ಸ್ ಗೆ ಸಿದ್ಧತೆ ನಡೆಸಬೇಕಾಗುತ್ತೆ, ಅದಕ್ಕೆ ಅದನ್ನ ಮುಂದೆ ಹಾಕೋಣ ಅಂತ ಹೇಳುವಾಗಲೇ ಅಲ್ಲಿಗೆ ಬರುವಂತಹ ವಿಜಯಾಂಬಿಕೆ ಹಾಗೇನಾದ್ರೂ ಮಾಡಿದ್ರೆ ವಿರೋಧ ಪಕ್ಷಗಳವರಿಗೆ ನಿನ್ನ ಬಗ್ಗೆ ಮಾತಾಡಿಕೊಳ್ಳುವುದಕ್ಕೆ ಅವಕಾಶ ಸಿಗುತ್ತೆ ಅನ್ನೋ ಮಾತನ್ನು ಹೇಳ್ತಾಳೆ.

ಅಕ್ಕನ ಮಾತು ಸರಿಯಾಗಿದೆ ಅಂತ ಅನ್ಸುತ್ತೆ ವೀರೇಂದ್ರನಿಗೆ (Veerendra). ಆದರೆ ಇದೇ ವೇಳೆ ಸುರೇಂದ್ರನಿಗೆ ವಿಜಯಾಂಬಿಕೆ ಮೇಲೆ ಅನುಮಾನ ಉಂಟಾಗಿದೆ. ಇನ್ನು ಪ್ರೆಸ್ ಮೀಟ್ ಮಾಡಿದ್ರೆ ಅಲ್ಲಿ ಕೇಳೋ ಪ್ರಶ್ನೆಗಳಿಂದ ವೀರೇಂದ್ರ ಮತ್ತೆ ವಿಚಲಿತನಾಗಿ ಶ್ರಾವಣಿ ಬಗ್ಗೆ ಕೋಪಗೊಳ್ತಾನಾ? ಈಗಷ್ಟೇ ಶ್ರಾವಣಿ ಬಗ್ಗೆ ಒಳ್ಳೆ ಅಭಿಪ್ರಾಯಗಳನ್ನು ಬೆಳೆಸಿಕೊಳ್ಳುತ್ತಿದ್ದ ವೀರೇಂದ್ರ ಮತ್ತೆ ಶ್ರಾವಣಿ ಬಗ್ಗೆ ಅಸಮಾಧಾನ ಪಟ್ಟುಕೊಂಡು ಅವಳನ್ನ ದೂರ ಇಡ್ತಾನಾ? ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment