Kangana Ranaut: ನಾನೊಬ್ಬ ಹೆಮ್ಮೆಯ ಹಿಂದು; ಗೋಮಾಂಸ ತಿನ್ನುತ್ತಾರೆಂದವರಿಗೆ ಖಡಕ್ ತಿರುಗೇಟು ಕೊಟ್ಟ ಕಂಗನಾ

Written by Soma Shekar

Published on:

---Join Our Channel---

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿಯುತ್ತಿರುವ ವಿಚಾರವು ಎಲ್ಲರಿಗೂ ಗೊತ್ತಿದೆ. ಇದೇ ವೇಳೆ ಅವರ ಮೇಲೆ ಪ್ರತಿಪಕ್ಷಗಳಿಂದ ಒಂದಷ್ಟು ಟೀಕೆಗಳು ಸಹಾ ಹರಿದು ಬರುತ್ತಿದೆ. ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ (Vijay Vadettiwar) ಅವರು, ಈ ಹಿಂದೆ ಕಂಗನಾ ತಮಗೆ ಗೋಮಾಂಸ (Beef) ಅಂದರೆ ಇಷ್ಟ ಎಂದು ಹೇಳಿಕೊಂಡಿದ್ದರೆಂದು ವಿ ವಾ ದಾ ತ್ಮ ಕ ಹೇಳಿಕೆಯನ್ನು ನೀಡಿದ್ದರು. ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ಸಹಾ ನಡೆದಿತ್ತು.

ಈ ವಿಚಾರವು ಒಂದು ವಿವಾದದ ರೂಪವನ್ನು ಪಡೆಯುತ್ತಿರುವುದನ್ನ ತಿಳಿದ ನಟಿ ಕಂಗನಾ ಅವರು ಈ ಮಾತಿಗೆ ತಮ್ಮ ತಿರುಗೇಟನ್ನು ನೀಡಿದ್ದಾರೆ. ಕಂಗನಾ ಅವರು, ನಾನು ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಮಾಂಸವನ್ನು ಸಹಾ ಸೇವನೆ ಮಾಡುವುದಿಲ್ಲ. ಆದರೆ ನನ್ನ ಬಗ್ಗೆ ಹೀಗೆ ಸಂಪೂರ್ಣವಾಗಿ ಆಧಾರರಹಿತ ವದಂತಿಗಳನ್ನು ಹರಡುವ ಕೆಲಸವನ್ನು ಮಾಡುತ್ತಿರುವುದು ಖಂಡಿತ ನಾಚಿಕೆಗೇಡಿನ ವಿಚಾರವಾಗಿದೆ..

ನಾನು ಯೋಗ ಮತ್ತು ಆಯುರ್ವೇದವನ್ನು ಪ್ರತಿಪಾದಿಸುತ್ತಿದ್ದು, ಅದನ್ನು ಪ್ರಚಾರ ಮಾಡುತ್ತಿದ್ದೇನೆ. ಇದೇ ವೇಳೆ ತಮ್ಮ ವಿರೋಧಿಗಳ ಕುರಿತಾಗಿಯೂ ಮಾತನಾಡಿರುವ ನಟಿಯು ಅವರ ಬಗ್ಗೆಯೂ ಕಟುವಾದ ರೀತಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಇಮೇಜ್ ಅನ್ನು ಹಾಳು ಮಾಡೋದಕ್ಕಾಗಿ ಇಂತಹ ತಂತ್ರಗಳನ್ನು ಬಳಸಿದರೂ ಅದು ಕೆಲಸ ಮಾಡೋದಿಲ್ಲ. ಯಾಕಂದ್ರೆ ನನ್ನ ಬಗ್ಗೆ ನನ್ನ ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ ಕಂಗನಾ.

ಅಲ್ಲದೇ ನಟಿಯು ನಾನು ಹೆಮ್ಮೆಯ ಹಿಂದೂ ಅಂತ ಸಹಾ ಅವರಿಗೆ ತಿಳಿದಿದೆ. ನಿಮ್ಮ ಯಾವುದೇ ಪ್ರಯತ್ನಗಳು ಸಹಾ ಅವರನ್ನು ದಾರಿ ತಪ್ಪಿಸೋಕೆ ಆಗೋದಿಲ್ಲ ಎಂದಿರುವ ನಟಿಯು ಜೈ ಶ್ರೀ ರಾಮ್ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ನಟಿ ಕಂಗನಾ ರಣಾವತ್ ಅವರು ಮಂಡಿ (Mandi) ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.‌

Leave a Comment