Venu Swamy: ಮೆಗಾಸ್ಟಾರ್ ಕುಟುಂಬದಲ್ಲಿ ಮತ್ತೊಂದು ವಿಚ್ಚೇದನ; ಸ್ಪೋಟಕ ಭವಿಷ್ಯವಾಣಿ ನುಡಿದ ಜ್ಯೋತಿಷಿ

Written by Soma Shekar

Published on:

---Join Our Channel---

Venu Swamy : ಸೆಲೆಬ್ರಿಟಿ ಜ್ಯೋತಿಷಿ, ಟಾಲಿವುಡ್ ನ ಸಿನಿಮಾ ಸೆಲೆಬ್ರಿಟಿಗಳ ಕುರಿತಾಗಿ ಆಗಾಗ ಭವಿಷ್ಯವಾಣಿಗಳನ್ನು ಹೇಳುತ್ತಾ ಸಿಕ್ಕಾಪಟ್ಟೆ ಸುದ್ದಿಯಾಗುವ ವೇಣು ಸ್ವಾಮಿ (Venu Swamy) ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಇವರು ಸಮಂತಾ (Samantha) ಮತ್ತು ನಾಗಚೈತನ್ಯ (Naga Chaitanya) ವಿಚ್ಚೇದನ ಪಡೆದು ದೂರವಾಗ್ತಾರೆ ಅಂತ ಭವಿಷ್ಯ ನುಡಿದಿದ್ದರು. ಅವರು ನುಡಿದ ಭವಿಷ್ಯವಾಣಿ ನಿಜ ಅನ್ನೋ ಹಾಗೆ ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನ ಪಡೆದರು. ಅಲ್ಲಿಂದ ವೇಣು ಸ್ವಾಮಿ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ಈಗ ವೇಣು ಸ್ವಾಮಿ ಮತ್ತೊಂದು ಸ್ಟಾರ್ ಜೋಡಿಯ ವಿಚ್ಚೇದನದ ಬಗ್ಗೆ ಭವಿಷ್ಯ ಹೇಳಿದ್ದಾರೆ.

ಹೌದು, ಮೆಗಾಸ್ಟಾರ್ ಚಿರಂಜೀವಿ (megastar Chiranjeevi) ಅವರ ಮನೆಯಲ್ಲಿ ಮತ್ತೊಂದು ವಿಚ್ಚೇದನ ಆಗಲಿದೆ ಎಂದು ಈ ಸಲ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಕೆಲವೇ ತಿಂಗಳುಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಅವರ ದಾಂಪತ್ಯ ಜೀವನದ ಬಗ್ಗೆ ವೇಣುಸ್ವಾಮಿ ಭವಿಷ್ಯವಾಣಿ ಹೇಳಿದ್ದಾರೆ.

ಮೆಗಾಸ್ಟಾರ್‌ ಕುಟುಂಬಕ್ಕೆ ವಿಚ್ಛೇದನವೇ ಒಂದು ಶಾಪವಾಗಿದೆ. ಈಗಷ್ಟೇ ಹೊಸದಾಗಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿರುವ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ (Lavanya Tripathi) ಜೋಡಿ ಬೇರೆಯಾಗ್ತಾರೆ. ಅವರು ಹೆಚ್ಚು ಕಾಲ ಒಟ್ಟಿಗೆ ಇರೋದಿಲ್ಲವೆಂದು ಹೇಳಿದ್ದಾರೆ. ವೇಣು ಸ್ವಾಮಿ ನವ ಜೋಡಿಯ ಬಗ್ಗೆ ಸಂಚಲನ ಹೇಳಿಕೆಗಳನ್ನು ನೀಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ವೇಣು ಸ್ವಾಮಿ ಮಾತನಾಡುತ್ತಾ, ಅವರ ವಿಚ್ಚೇದನದ ಬಗ್ಗೆ ನಾನು ಹೇಳ್ತಿಲ್ಲ, ಅವರ ಜಾತಕವೇ ಇದನ್ನು ಹೇಳ್ತಿದೆ. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಇಬ್ಬರೂ ತಮ್ಮ ಜಾತಕದ ಪ್ರಕಾರ ಒಟ್ಟಾಗಿ ಜೀವನ ಮಾಡುವ ಸಾಧ್ಯತೆ ಇಲ್ಲ. ಅವರಿಬ್ಬರೂ ಜೊತೆಯಾಗಿ ಇರುವುದೇ ಒಂದು ಪವಾಡ ಎಂದಿರುವ ವೇಣು ಸ್ವಾಮಿ ಇದನ್ನ ಕೇಳಿ ಜನರು ನನ್ನನ್ನ ಟೀಕೆ ಮಾಡಬಹುದು, ಆದರೆ ನಾನು ಜಾತಕದಲ್ಲಿ ಇರುವುದನ್ನು ಹೇಳಿದ್ದೇನೆ ಎಂದಿದ್ದಾರೆ.

Related Post

Leave a Comment