Sapthami Gowda: ನನ್ನದು ತಪ್ಪಾಗಿದೆ, ಪತ್ನಿ ಬಿಟ್ಟು ಬಾ ಅಂತ ಹೇಳಿಲ್ಲ; ಸಪ್ತಮಿ ಗೌಡದು ಎನ್ನಲಾದ ಆಡಿಯೋ ವೈರಲ್

Written by Soma Shekar

Published on:

---Join Our Channel---

Sapthami Gowda : ನಟ ಯುವರಾಜ್ ಕುಮಾರ್ (Yuva Rajkumar) ಹಾಗೂ ಪತ್ನಿ ಶ್ರೀದೇವಿ (Sridevi)ವಿಚ್ಛೇದನದ ಪ್ರಕರಣ ನ್ಯಾಯಾಲಯದಲ್ಲಿದೆ. ಈ ವಿಚಾರ ಹೊರ ಬಂದ ಮೇಲೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಯುವ ಪರ ವಕೀಲರ ಆರೋಪದ ಬೆನ್ನಲ್ಲೇ ಶ್ರೀದೇವಿ ಅವರು ಮಾಡಿದ ಆರೋಪಗಳು ಸ್ಯಾಂಡಲ್ ವುಡ್ ನಲ್ಲಿ ಒಂದು ಸಂಚಲನಕ್ಕೆ ಕಾರಣವಾಗಿತ್ತು. ಯುವರಾಜ್ ಕುಮಾರ್ ಗೆ ಸಪ್ತಮಿ ಗೌಡ ಅವರ ಜೊತೆಗೆ ಅ ನೈ ತಿ ಕ ಸಂಬಂಧ ಇದೆ, ಇಬ್ಬರೂ ಹೋಟೆಲಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎನ್ನುವ ಆರೋಪವನ್ನು ಶ್ರೀದೇವಿಯವರು ಮಾಡಿದ್ದರು.

ಈಗ ಶ್ರೀದೇವಿ ಅವರ ಆರೋಪಗಳಿಗೆ ಪುಷ್ಟಿ ನೀಡುವಂತೆ ಒಂದು ಆಡಿಯೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ವೈರಲ್ ಆಗಿದ್ದು, ಇದರಲ್ಲಿ ಮಾತನಾಡಿರುವುದು ನಟಿ ಸಪ್ತಮಿ ಗೌಡ ಅವರು ಎನ್ನಲಾಗಿದ್ದು, ಯುವರಾಜ್ ಕುಮಾರ್ ಜೊತೆಗಿನ ಸಂಬಂಧದ ಕುರಿತಾಗಿ ಮತ್ತು ಘಟನೆಯ ಕುರಿತಾಗಿ ಅವರು ಮಾತನಾಡಿದ್ದಾರೆ. ವೈರಲ್ ಆಗಿರುವ ಆಡಿಯೋದಲ್ಲಿ ಮಹಿಳೆಯೊಬ್ಬರು ಅಳುತ್ತ ಮಾತನಾಡಿರುವ ಹಾಗೆ ಕೇಳುತ್ತಿದೆ.

ಮಹಿಳೆಯ ದ್ವನಿಯು ಸಪ್ತಮಿ ಗೌಡ (Sapthami Gowda) ಅವರ ಧ್ವನಿಯನ್ನು ಹೋಲುತ್ತಿದೆ. ಹೌದು, ನನ್ನಿಂದ ಹಲವರಿಗೆ ನೋವಾಗಿದೆ. ನನ್ನದು ತಪ್ಪಿಲ್ಲ ಎಂದು ನಾನು ಹೇಳೋದಿಲ್ಲ. ಆದರೆ ನಾನು ಗುರು (ಯುವ ಅವರ ಮೂಲ ಹೆಸರು) ನಂಬಿ ಮಾಡಿದೆ. ನಿಮ್ಮ ಸೆಟ್ಟಲ್ಲಿ ಆಗಿದೆ, ಸಾರಿ ಸರ್ ಎನ್ನುವ ಮಾತುಗಳನ್ನು ಹೇಳಿರುವುದನ್ನು ಕೇಳಿಸಿಕೊಳ್ಳಬಹುದು. ಈ ಆಡಿಯೋವನ್ನು ಸಪ್ತಮಿ ಖ್ಯಾತ ನಿರ್ಮಾಪಕರಾಗಿರುವಂತಹ ವಿಜಯ್ ಕಿರಗಂದೂರು ಅವರಿಗೆ ಕಳಿಸಿದ್ದಾರೆ ಎನ್ನುವ ಸುದ್ದಿಗಳಾಗಿದೆ.

ಗುರು ಬಂದು ಎಲ್ಲವನ್ನು ಹೇಳಿಕೊಂಡ ಮೇಲೆ ನಾನು ಮುಂದುವರೆದೆ. ಅದು ನಿಮ್ಮ ಸೆಟ್ ನಲ್ಲಿ ಆಯ್ತು. ಆಗಬಾರದಿತ್ತು, ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಸೈಡ್ ಆಫ್ ದ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದ್ರೂ ಸಪ್ತಮಿ ಇಷ್ಟು ಕೆಟ್ಟವಳಾ? ಎಂದು ಅಂದುಕೊಳ್ಳುವ ಮುಂಚೆ ಏನಾಯ್ತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ ಎನ್ನುವ ಮಾತುಗಳು ಆಡಿಯೋದಲ್ಲಿದೆ.‌ ನಾನು ಮೊದಲಿಂದ ಹೇಳ್ತಾನೆ ಇದ್ದೆ. ಇದು ವರ್ಕೌಟ್ ಆಗಲ್ಲ ಎಂದು.

ಅಲ್ಲದೇ ನಾನು ಎಂದಿಗೂ ಸಹ ಫ್ಯಾಮಿಲಿ ಬಿಟ್ಟು ಬಾ,‌ಪತ್ನಿ ಜೊತೆ ಬ್ರೇಕ್ ಅಪ್ ಮಾಡ್ಕೋ ಅಂತ ಹೇಳಿಲ್ಲ. ಸರ್ ನನ್ನನ್ನು ನಂಬಿ, ಬೇಕಾದರೆ ನನ್ನನ್ನ ಬೈಯ್ಯಿರಿ,‌ ಗುರುಗೆ ಅದು ಮೊದಲ ಸಿನಿಮಾ. ನಿಮಗೂ ಸಹಾ ಬಹಳ ಮುಖ್ಯವಾದ ಸಿನಿಮಾ. ನನಗೆ ಗೊತ್ತಿದೆ. ಯಾರಿಗೂ ತೊಂದರೆ ಆಗಬಾರದು ಸರ್, ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡೋದಿಲ್ಲ, ಬಯ್ಯುವುದಾದರೆ ಬೈರಿ ಎಂದು ಸತ್ತಮಿಯವರದ್ದು ಎನ್ನಲಾದ ಆಡಿಯೋದಲ್ಲಿ ಹೇಳಲಾಗಿದೆ.

ಈ ಆಡಿಯೋದ ಅಸಲಿಯತ್ತೇನೆಂದು ಇನ್ನೂ ತಿಳಿದು ಬಂದಿಲ್ಲವಾದರೂ ಸೋಶಿಯಲ್ ಮೀಡಿಯಾಗಳಲ್ಲಿ ಈಗ ಇದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಶ್ರೀದೇವಿ ಮತ್ತು ಯುವರಾಜ್ ದಾಂಪತ್ಯದಲ್ಲಿ ಬಿರುಕು ಮೂಡಿದ ಬಳಿಕ, ಸಪ್ತಮಿ ಗೌಡ ಯುವನ ಜೀವನದಲ್ಲಿ ಎಂಟ್ರಿ ಕೊಟ್ಟಿದ್ದರು ಎನ್ನಲಾಗಿದೆ. ಯುವ ಸಿನಿಮಾದ ಸೆಟ್ ನಲ್ಲಿ ಶ್ರೀದೇವಿಯವರು ಬಂದು ಜಗಳ ಮಾಡಿದ್ದರು ಎನ್ನುವ ಮಾತುಗಳು ಕೇಳಿ ಬಂದಿದೆ. ಇದೇ ಕಾರಣಕ್ಕೆ ವಿಜಯ್ ಕಿರಗಂದೂರು ಯುವ ಮತ್ತು ಸಪ್ತಮಿ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಸಪ್ತಮಿ ನಿರ್ಮಾಪಕ ವಿಜಯ್ ಕಿರಗಂದೂರು (Vijay Kiragandur) ಅವರಿಗೆ ಕಳುಹಿಸಿದ್ದ ಆಡಿಯೋ ಇದು ಎಂದು ಹೇಳಲಾಗುತ್ತಿದೆ.

Leave a Comment