Chiranjeevi: ಸ್ಟಾರ್ ನಟನ ಫಸ್ಟ್ ನೈಟ್ ನಡೆದಿದ್ದು ರೈಲಿನಲ್ಲಿ; ಇದರ ಹಿಂದಿತ್ತು ರೋಚಕ ಕಾರಣ

Written by Soma Shekar

Published on:

---Join Our Channel---

Chiranjeevi: ತೆಲುಗು ಸಿನಿಮಾ ರಂಗ ಎಂದರೆ ಅಲ್ಲಿ ಕೆಲವು ಕುಟುಂಬಗಳ ಹೆಸರು ಪ್ರಮುಖವಾಗಿ ಸದ್ದು ಮಾಡುತ್ತವೆ. ಅದರಲ್ಲಿ ಮೆಗಾ ಫ್ಯಾಮಿಲಿ (Mega Family) ಸಹಾ ಇಂದು. ಈ ಕುಟುಂಬದ ಹೆಸರಿಲ್ಲದೇ ತೆಲುಗು ಸಿನಿಮಾ ರಂಗವನ್ನು ಊಹೆ ಮಾಡೋದು ಸಹಾ ಕಷ್ಟ ಅಂತಾನೇ ಹೇಳಬಹುದು. ಮೆಗಾ ಫ್ಯಾಮಿಲಿಯ ಆಧಾರಸ್ತಂಭ ಎಂದರೆ ಅದು ನಟ ಚಿರಂಜೀವಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಮೆಗಾಸ್ಟಾರ್ ಚಿರಂಜೀವಿ (Chiranjeevi) ಸುಮಾರು 3 ದಶಕಗಳ ಸಿನಿಮಾ ಜರ್ನಿಯಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದು ಮತ್ತು ಅಸಂಖ್ಯಾತ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಈಗ ನಟ ಮೆಗಾಸ್ಟಾರ್ ಕುರಿತಾದ ವಿಚಾರವೊಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ‌ಚಿರಂಜೀವಿ ನಾಯಕನಾಗಿ ಕೆ. ರಾಘವೇಂದ್ರ ರಾವ್ ಸಿನಿಮಾಗಳ ಮೂಲಕ ದೊಡ್ಡ ಹೆಸರನ್ನು ಪಡೆದವರು. ಸಿನಿಮಾ ರಂಗದಲ್ಲಿ ಹೆಸರು ಪಡೆಯಲು ಆರಂಭಿಸಿದ್ದ ದಿನಗಳಲ್ಲಿ ಹಿರಿಯ ನಟ ಅಲ್ಲು ರಾಮಲಿಂಗಯ್ಯ ಚಿರಂಜೀವಿ ಕುಟುಂಬದ ಜೊತೆಗೆ ಸಂಬಂಧವನ್ನು ಬೆಳೆಸಿದರು ಹಾಗೂ ತಮ್ಮ ಮಗಳು ಸುರೇಖಾರನ್ನು ಚಿರಂಜೀವಿಗೆ ಕೊಟ್ಟು ಮದುವೆಯನ್ನು ಮಾಡಿಸಿದರು.

ಆಗ ನಟ ಚಿರಂಜೀವಿ ಸಿಕ್ಕಾಪಟ್ಟೆ ಬ್ಯುಸಿ ನಟ.‌ ಮದುವೆಗಾಗಿ ಒಂದೆರಡು ದಿನ ಕೆಲಸದಿಂದ ಗ್ಯಾಪ್ ಪಡೆದು ಸಪ್ತಪದಿ ತುಳಿದರು. ಮದುವೆ ಮುಗಿದ ಮರುದಿನವೇ ಶೂಟಿಂಗ್ ನಲ್ಲಿ ಪಾಲ್ಗೊಳ್ಳಬೇಕಾಗಿತ್ತು. ನಟನಿಗೆ ಫಸ್ಟ್ ನೈಟ್ ಮಾಡಿಕೊಳ್ಳಲು ಸಹಾ ಬಿಡುವು ಇರಲಿಲ್ಲ ಎನ್ನುವ ಅಚ್ಚರಿಯ ಮಾತೊಂದನ್ನು ಈಗ ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರು ಹೇಳಿದ್ದಾರೆ.

ಮದುವೆ ನಂತರ ಮೆಗಾಸ್ಟಾರ್ ರಾಘವೇಂದ್ರ ರಾವ್ ಅವರ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಂಡರು. ಊಟಿಯಲ್ಲಿ ಶೆಡ್ಯೂಲ್ ಮುಗಿಸಿಕೊಂಡು ರೈಲಿನಲ್ಲಿ ನಟ‌ ಚೆನ್ನೈಗೆ ತೆರಳಿದ್ದರು. ಈ ವೇಳೆ ರಾಘವೇಂದ್ರ ರಾವ್ ಅವರು ಚಿರಂಜೀವಿ ಹಾಗೂ ಅವರ ಪತ್ನಿ ಇಬ್ಬರಿಗೂ ಸಹಾ ಟಿಕೆಟ್ ಮಾಡಿದ್ದರಂತೆ. ಕೂಪ್ ಹೆಸರಿನ ಬರ್ತ್ ನಲ್ಲಿ ಕೋಣೆಯಲ್ಲಿರುವ ಹಾಗೆ ಸೀಟ್ ಗಳು ಇತ್ತು.

ಚಿರಂಜೀವಿ ಮತ್ತು ಸುರೇಖಾ ಟ್ರೈನ್ ನಲ್ಲಿ ತಮ್ಮ ಸೀಟ್ ಗಳಿದ್ದ ಬರ್ತ್ ಗೆ ಹೋಗಿ ಶಾಕ್ ಆದ್ರು. ಯಾಕಂದ್ರೆ ಆ ಜಾಗವನ್ನು ಫಸ್ಟ್ ನೈಟ್ ಕೋಣೆಯಂತೆ ಅಲಂಕಾರ ಮಾಡಲಾಗಿತ್ತು. ಸೀಟ್ ಬಳಿ ಹೂವು, ಹಣ್ಣು ಎಲ್ಲವನ್ನೂ ಸಹಾ ಇಡಲಾಗಿತ್ತು. ಇದನ್ನ ನೋಡಿ ಸುರೇಖಾ ಮುಜುಗರ ಪಟ್ಟುಕೊಂಡಿದ್ದರಂತೆ. ನೀವು ಹೊಸ ದಂಪತಿ ಮದುವೆಯಾದ ಕೂಡಲೇ ಶೂಟಿಂಗ್ ನಲ್ಲಿ ಭಾಗಿಯಾಗಿದ್ರಿ ಅದಕ್ಕೆ ಇದೆಲ್ಲಾ ಎಂದಿದ್ದರಂತೆ ರಾಘವೇಂದ್ರ ರಾವ್ ಅವರು.

Leave a Comment