Entertainment

Rajanikanth: ದಳಪತಿ ವಿಜಯ್ ಗೆ ಪ್ರತಿಸ್ಪರ್ಧೆ ನೀಡಲು ಮುಂದಾದ ತಲೈವಾ; ವಿಜಯ್ VS ರಜನೀಕಾಂತ್

Rajanikanth : ಪ್ಯಾನ್ ಇಂಡಿಯಾ ಸಿನಿಮಾಗಳ ಯುಗ ಆರಂಭವಾದ ಮೇಲೆ ಸಿನಿಮಾಗಳ ಯಶಸ್ಸು ಆ ಸಿನಿಮಾಗಳ ನಾಯಕರ ಬೇಡಿಕೆಯನ್ನು ಹೆಚ್ಚಿಸುತ್ತಿದೆ ಹಾಗೂ ನಟರು ತಮ್ಮ ಸಿನಿಮಾಗಳಿಗೆ ಪಡೆಯುವ ಸಂಭಾವನೆ ಕೂಡಾ ಹೆಚ್ಚಾಗುತ್ತಿದೆ. ಈಗ ಪ್ಯಾನ್ ಇಂಡಿಯಾ ಸ್ಟಾರ್ ಗಳ (Pan India Stars) ಸಂಭಾವನೆ ಅನ್ನೋದು ನೂರಾರು ಕೋಟಿಗಳಲ್ಲೇ ಇದೆ‌. ಅದರಲ್ಲೂ ಕೆಲವು ನಾಯಕ ನಟರಂತೂ ಸಿನಿಮಾ ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆಯನ್ನೇ ಬರೆಯಲು ಮುಂದಾಗುತ್ತಿರುವ ವಿಚಾರವು ಸಹಾ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.

ಈಗಂತೂ ತಮಿಳು ಸಿನಿಮಾ ರಂಗದಲ್ಲಿ ನಾಯಕ ನಟರ ನಡುವೆ ಸಂಭಾವನೆ ವಿಚಾರದಲ್ಲೂ ಪೈಪೋಟಿ ಆರಂಭವಾಯ್ತಾ? ಅನ್ನೋ ಅನುಮಾನವನ್ನು ಹುಟ್ಟು ಹಾಕುವಂತಹ ಪರಿಸ್ಥಿತಿ ಉಂಟಾಗಿದೆ ಎಂದರೆ ನೀವು ನಂಬಲೇಬೇಕಾಗಿದೆ. ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ನೀಡಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಕೈಯಲ್ಲಿರುವ ಸಿನಿಮಾ ಬಿಟ್ಟು, ಇನ್ನೊಂದು ಸಿನಿಮಾ ಮಾಡಲಿದ್ದು ಅದೇ ಅವರ ಕಡೆಯ ಸಿನಿಮಾ ಎನ್ನಲಾಗಿದೆ.

ಕಡೆಯ ಸಿನಿಮಾಕ್ಕೆ ವಿಜಯ್ (Thalapathy Vijay) ಬರೋಬ್ಬರಿ 250. ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದು, ಇದು ನಟನೊಬ್ಬ ಪಡೆಯುತ್ತಿರುವ ಅತಿ ಹೆಚ್ಚು ಸಂಭಾವನೆ ಎಂದೇ ಎಲ್ಲೆಡೆ ಸುದ್ದಿಯಾಗಿತ್ತು. ಆದರೆ ಈಗ ಈ ರೇಸ್ ಗೆ ಸೂಪರ್ ಸ್ಟಾರ್ ಎನಿಸಿಕೊಂಡಿರುವ ರಜನೀಕಾಂತ್ ಅವರು ಕೂಡಾ ಎಂಟ್ರಿ ನೀಡಿದಂತೆ ಕಾಣ್ತಿದೆ. ಇಷ್ಟಕ್ಕೂ ಏನಿದು ವಿಚಾರ ಅಂತೀರಾ? ಇಲ್ಲಿದೆ ಅದಕ್ಕೆ ಉತ್ತರ.

ನಟ ರಜನೀಕಾಂತ್ (Rajanikanth) ಅವರ ಜೈಲರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ಸದ್ದು ಮಾಡಿತ್ತು. ಈಗ ಜೈಲರ್ ಸಿನಿಮಾದ ಸೀಕ್ವೆಲ್ ನ ಘೋಷಣೆಯನ್ನು ಮಾಡಲಾಗಿದೆ. ಈ ಬಾರಿ ಜೈಲರ್ 2 ಗೆ (Jailer 2) ಹುಕುಂ (Hukum) ಎಂದು ಹೆಸರನ್ನು ಇಡಲಾಗಿದೆ. ಇನ್ನು ಈ ಸಿನಿಮಾಕ್ಕಾಗಿ ರಜನೀಕಾಂತ್ ಅವರು 250 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆನ್ನುವ ವಿಚಾರ ಈಗ ವೈರಲ್ ಆಗಿದೆ.

ಈ ಮೂಲಕ ಹಿರಿಯ ನಟ ರಜನೀಕಾಂತ್ ಅವರು ದಳಪತಿ ವಿಜಯ್ ಗೆ ಸಂಭಾವನೆ ವಿಚಾರದಲ್ಲಿ ಸರಿ ಸಮಾನ ಎನ್ನುವಂತೆ ಕಾಣುತ್ತಿದೆ. ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ಸಾಲಿನಲ್ಲಿ ದಳಪತಿ ವಿಜಯ್ ಹಾಗೂ ಸೂಪರ್ ಸ್ಟಾರ್ ರಜನೀಕಾಂತ್ ಸಹಾ ಸೇರ್ಪಡೆ ಆಗಿದ್ದಾರೆ. ಆದರೆ ಪರಸ್ಪರರ ಫ್ಯಾನ್ ಗಳು ಮಾತ್ರ ಈ ವಿಚಾರದಲ್ಲಿ ತಮ್ಮ ಅಭಿಮಾನ ನಟನದ್ದೇ ಹೆಚ್ಚು ಸಂಭಾವನೆ, ಇನ್ನುಳಿದಂತೆ ಸುಳ್ಳು ಸುದ್ದಿ ಅಂತ ಹೇಳ್ತಿದ್ದಾರೆ.‌

Soma Shekar

Recent Posts

Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…

17 hours ago

Chandini: ‘ಎ’ ನನ್ನ ಜೀವನ ಬದಲಿಸಿದ ಸಿನಿಮಾ: ರೀ ರಿಲೀಸ್ ವೇಳೆ ಎ ಸಿನಿಮಾ ನಟಿ ಚಾಂದಿನಿ ಮನಸ್ಸಿನ ಮಾತು

Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು…

19 hours ago

Tollywood Heroins: ಮೊದಲ ಸಿನಿಮಾದಿಂದಲೇ ಸ್ಟಾರ್ ಗಳಾದ ಈ ಇಬ್ಬರ ಅಬ್ಬರ ತಗ್ಗಿದ್ದೇಕೆ? ಚಾನ್ಸ್ ಸಿಕ್ತಿಲ್ಲ ಯಾಕೆ?

Tollywood Heroins: ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರಿಗೆ ಮೊದಲ ಸಿನಿಮಾದ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿಯಾಗುತ್ತದೆ ಮತ್ತು ಒಂದೇ…

22 hours ago

Amruthadhaare: ಗೌತಮ್ ಭೂಮಿಕಾ ಹೊರಟ ಕೂಡಲೇ ತನ್ನ ಅಸಲಿ ಮುಖ ತೋರಿಸಿದ ಜೈದೇವ್; ಮಲ್ಲಿ ಕಥೆ ಮುಗೀತಾ?

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಖುಷಿಯಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿನ ಪ್ರಕೃತಿ…

22 hours ago

Bhumika Ramesh: ಲಕ್ಷ್ಮೀ ಬಾರಮ್ಮ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಭೂಮಿಕಾ; ತೆಲುಗಲ್ಲಿ ಹೊಸ ಆಫರ್

Bhumika Ramesh: ಇತ್ತೀಚಿನ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ (Telugu Television) ಕನ್ನಡ ಕಲಾವಿದ್ದರದ್ದೇ ಪಾರುಪತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು…

24 hours ago

Lakshmi Nivasa: ಹುಚ್ಚು ಪ್ರೀತಿ, ಹೆಂಡ್ತಿ ಪರದಾಟಕ್ಕೆ ಖುಷಿ ಪಟ್ಟ ಜಯಂತ್; ಏನ್ ತಲೆನೋವು ಗುರು ಅಂದ್ರು ನೆಟ್ಟಿಗರು

Lakshmi Nivasa: ಸದ್ಯಕ್ಕಂತೂ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಜಯಂತ್ (Jayanth) ಮತ್ತು ಜಾಹ್ನವಿ (Jahnavi) ಕಥೆಯೇ…

1 day ago

This website uses cookies.