Entertainment

Amruthadhaare: ಭೂಮಿಕಾ ಪ್ರಶ್ನೆಗೆ ತಡಬಡಿಸಿದ ಶಕುಂತಲಾ ದೇವಿ, ಮತ್ತೆ ಯಾವ ಕುತುಂತ್ರಕ್ಕೆ ಫ್ಲಾನ್ ಮಾಡ್ತಾಳೆ ಅಂದ್ರು ಪ್ರೇಕ್ಷಕರು

Amruthadhaare: ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆಯ ನಾಗಾಲೋಟವನ್ನು ಮಾಡುತ್ತಿರುವ ಸೀರಿಯಲ್ ಗಳಲ್ಲಿ ಅಮೃತಧಾರೆ (Amruthadhaare) ಸಹಾ ಸೇರಿದೆ. ಗೌತಮ್ ದೀವಾನ್ ಮತ್ತು ಭೂಮಿಕಾ ನಡುವಿನ ಅಪರೂಪದ ಪ್ರೇಮ ಕಥೆಯಾಗಿದೆ ಅಮೃತಧಾರೆ. ಗೌತಮ್ ಮತ್ತು ಭೂಮಿಕಾ ಸಂಬಂಧಕ್ಕೆ ಅಡ್ಡಗಾಲಾಗಿ, ಸಿಹಿ ಮಾತುಗಳಿಂದಲೇ ಗೌತಮ್ ಮನಸ್ಸಿನಲ್ಲಿ ಭಯ ಹುಟ್ಟಿಸಿ, ಆತಂಕ ಮೂಡಿಸಿ ಹೆಂಡತಿಯಿಂದ ದೂರ ಇಡಲು ಶಕುಂತಲಾ ದೇವಿ ಮಾಡುವ ಕುತಂತ್ರಗಳು ಸಹಾ ಇಲ್ಲಿ ಕಡಿಮೆ ಏನಿಲ್ಲ ಅಂತಾನೇ ಹೇಳಬಹುದು.

ಗೌತಮ್ (Gowtham) ಭೂಮಿಕಾಗೆ ಹತ್ತಿರ ಆಗ್ತಿದ್ದಾನೆ, ಭೂಮಿಕಾಗೆ ಹೆಚ್ಚು ಒತ್ತು ನೀಡ್ತಿದ್ದಾನೇ ಹೀಗೆ ಆದ್ರೆ ತನ್ನ ಎಲ್ಲಾ ಅಧಿಕಾರ ಎಲ್ಲಿ ಭೂಮಿಕಾ ಕೈಗೆ ಹೋಗಿ ಬಿಡುತ್ತೋ ಅನ್ನೋ ಆತಂಕದಿಂದ ಶಕುಂತಲಾ ದೇವಿ ಒಂದು ಕುತಂತ್ರ ಮಾಡಿ, ಗುರುಗಳ ಬಳಿ ಜಾತಕದ ವಿಚಾರವಾಗಿ ಸುಳ್ಳು ಹೇಳಿಸಿ, ಇಬ್ಬರ ಜಾತಕ ಸರಿ ಇಲ್ಲವೆಂದು, ಹತ್ತಿರವಾದ್ರೆ ಪ್ರಾಣವೇ ಹೋಗಬಹುದು ಎಂದು ಹೇಳಿಸಿದ್ದಳು.

ಗೌತಮ್ ಜಾತಕ ವಿಚಾರ ತಿಳಿದು ಚಿಂತೆಗೆ ಈಡಾಗಿ, ವ್ರತ ಮಾಡಿ ಅನಾರೋಗ್ಯಕ್ಕೆ ಗುರಿಯಾದ. ಅನಂತರ ಮಲ್ಲಿಯಿಂದ ಇದೆಲ್ಲಾ ಶಕುಂತಲಾ ದೇವಿ ಮಾಡಿರೋ ಕುತಂತ್ರ, ಕುಟಿಲ ಆಟ ಅಂತ ತಿಳ್ಕೊಂಡ ಭೂಮಿಕಾ, ಯುಗಾದಿ ದಿನ ತಮ್ಮ ಗುರುಗಳನ್ನು ಕರೆಸಿ ಜಾತಕ ತೋರಿಸಿದ್ದು, ಗುರುಗಳು ಜಾತಕದಲ್ಲಿ ಯಾವುದೇ ದೋ಼ಷವಿಲ್ಲ ಅಂತ ಹೇಳಿದ್ದಾರೆ.‌ ಗೌತಮ್ ಮನಸ್ಸಿಗೆ ಸಮಾಧಾನ ಸಿಕ್ಕಿದೆ ಆದರೆ ಆ ಮಾತುಗಳಿಂದ ಶಕುಂತಲಾ ದೇವಿ ಚಿಂತೆಗೀಡಾಗಿದ್ದಾಳೆ.

ಗುರುಗಳು ಬಂದು ಹೋದ ಮೇಲೆ ಭೂಮಿಕಾ (Bhumika) ಶಕುಂತಲಾದೇವಿ ಹತ್ರ ಬಂದು ಹೇಗಿತ್ತು ಸರ್ಪ್ರೈಸ್ ಶಾಕಿಂಗ್ ಆಗಿತ್ತಾ? ಅಂತ ಕೇಳಿದ್ದಾಳೆ. ಆಗ ತಡಬಡಿಸಿದ ಶಕುಂತಲಾ ದೇವಿ ಒಳ್ಳೆ ಕೆಲಸ ಮಾಡಿದ್ಯಾ ಭೂಮಿಕಾ, ಹಳೇ ಕಹಿಗಳೆಲ್ಲಾ ಮರೆತೇ ಹೋಯ್ತು ನೋಡು ಅಂದಾಗ, ಭೂಮಿಕಾ ಒಳ್ಳೆ ಕೆಲಸ ಮಾಡ್ದೆ ಅಂತ ಹೇಗೆ ಹೇಳ್ತೀರಾ ಅತ್ತೆ ಅಂತ ಶುಕುಂತಲಾ ದೇವಿಗೆ ದೊಡ್ಡ ಶಾಕ್ ನೀಡಿದ್ದಾಳೆ.

ನಾನು ಗೌತಮ್ ಅವ್ರು ಯಾವತ್ತೂ ಒಂದಾಗಬಾರದು ಅಂತ ತಾನೇ ನೀವು ಗುರುಗಳ ಹತ್ರ ಸುಳ್ಳನ್ನ ಹೇಳಿಸಿದ್ದು ಅಂತ ಮತ್ತೊಂದು ಶಾಕ್ ಅನ್ನ ಸಹಾ ಭೂಮಿಕಾ ಕೊಟ್ಟಿದ್ದು, ಭೂಮಿಕಾ ಮಾತುಗಳಿಗೆ ಶಕುಂತಲಾ ದೇವಿ ತಬ್ಬಿಬ್ಬಾಗಿದ್ದಾಳೆ. ಭೂಮಿಕಾ ಮುಂದೆ ತನ್ನ ಅದಲಿ ಬಣ್ಣ ಬಯಲಾಯ್ತು ಅಂತ ಶಕುಂತಲಾ ದೇವಿ ಮತ್ತೇನಾದ್ರು ಯೋಜನೆ ಮಾಡ್ತಾಳಾ?? ಕಾದು ನೋಡಬೇಕಾಗಿದೆ.

Soma Shekar

Recent Posts

Lakshmi Nivasa: ಬೇಸತ್ತು ಜಾಹ್ನವಿ ಪಾತ್ರಕ್ಕೆ ಚಂದನಾ ಗುಡ್ ಬೈ? ಹೊಸ ನಟಿ ಎಂಟ್ರಿ, ಏನಿದು ಶಾಕಿಂಗ್ ಸುದ್ದಿ

Lakshmi Nivasa: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಜಾಹ್ನವಿ ಪಾತ್ರ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು…

13 hours ago

Keerthi Suresh: ಬೋಲ್ಡ್ ಸೀನ್ ಮಾಡಲ್ಲ ಅಂದಿದ್ದ ಕೀರ್ತಿ ಈಗ ಆ ನಟನ ಜೊತೆ ಅಂತ ಸೀನ್ ಗೆ ಕೊಟ್ರು ಗ್ರೀನ್ ಸಿಗ್ನಲ್

Keerthi Suresh: ಮಹಾನಟಿ (Mahanati) ಸಿನಿಮಾದಲ್ಲಿ ಲೆಜೆಂಡರಿ ನಟಿ ಸಾವಿತ್ರಿ ಪಾತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು ನಟಿ ಕೀರ್ತಿ…

14 hours ago

Viral Video: ಸ್ಟಾರ್ ನಟಿ ಆದ್ರೆ ನಂಗೇನು? ಪಕ್ಕದಲ್ಲೇ ಇದ್ರು ಕೇರ್ ಮಾಡದ ಸ್ವಿಗ್ಗಿ ಡಿಲೆವರಿ ಬಾಯ್; ಹರಿದು ಬರ್ತಿದೆ ಮೆಚ್ಚುಗೆ

Viral Video: ಸಿನಿಮಾ ಸೆಲೆಬ್ರಿಟಿಗಳನ್ನು (Cinema Celebrities) ನೋಡಬೇಕು ಅವರ ಜೊತೆ ಮಾತನಾಡಬೇಕು ಮತ್ತು ಅವರ ಜೊತೆಗೆ ಒಂದು ಫೋಟೋ…

17 hours ago

Lakshmi Nivasa: ಜಾನು ಹೇಳಿದಿದ್ರು ಲಕ್ಷ್ಮೀಗೆ ಜಯಂತ್ ವಿಚಾರ ಗೊತ್ತಾಯ್ತು; ಮನಸ್ಸಲ್ಲೇ ಈಗ ಶುರುವಾಯ್ತು ಭಯ

Lakshmi Nivasa Serial: ಮಗಳು ಜಾಹ್ನವಿಗೆ ಎಷ್ಟು ಸಲ ಫೋನ್ ಮಾಡಿದ್ರು ಕನೆಕ್ಟ್ ಆಗ್ತಿಲ್ಲ ಅನ್ನೋ ಆತಂಕದಲ್ಲಿ ಲಕ್ಷ್ಮೀ ನಿವಾಸ…

19 hours ago

Hema Rave Party: ನಾನು ರೇವ್ ಪಾರ್ಟಿಲಿ ಇರಲಿಲ್ಲ ಅಂತ ವೀಡಿಯೋ ಮಾಡಿ ತಗ್ಲಾಕೊಂಡ್ರಾ ತೆಲುಗು ನಟಿ?

Rave Party : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಂತಹ ರೇವ್ ಪಾರ್ಟಿ (Rave Party) ವಿಚಾರ ದೇಶದಾದ್ಯಂತ ಮಾದ್ಯಮಗಳಲ್ಲಿ ಪ್ರಮುಖ…

20 hours ago

Amruthadhaare: ಗೌತಮ್ ಹೇಳದ ಸತ್ಯ ಭೂಮಿಕಾಗೆ ಗೊತ್ತಾಗೋ ಸಮಯ ಬಂದಾಯ್ತು; ಗೌತಮ್ ಮೌನ ಮುರಿಲೇಬೇಕು

Amruthadhaare Serial : ಅಮೃತಧಾರೆ ಸೀರಿಯಲ್ ನ (Amruthadhaare Serial) ಇತ್ತೀಚಿನ ಎಪಿಸೋಡ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡಿದೆ.…

22 hours ago

This website uses cookies.