Viral News: ತಾಳಿ ಕಟ್ಟೋ ವೇಳೇಲೇ ಬಯಲಾಯ್ತು ವಧುವಿನ ಅಸಲಿ ಕಥೆ, ಮದುವೆ ಮಂಟಪದಿಂದಲೇ ಹೊರ ನಡೆದ ವರ

Written by Soma Shekar

Published on:

---Join Our Channel---

Viral News: ವಧುವಿನ ಕೊರಳಿಗೆ ಇನ್ನೇನು ತಾಳಿ ಬೀಳಬೇಕು ಅನ್ನೋ ಸಮಯಕ್ಕೆ ನಡೆದಿದೆ ಅವಘಡ. ತಾಳಿ ಕಟ್ಟಿ ನೂತನ ವಧುವನ್ನು ತನ್ನೊಡನೆ ತನ್ನ ಮನೆಗೆ ಕರೆದುಕೊಂಡು ಹೋಗುವ ನಿರೀಕ್ಷೆಯಲ್ಲಿದ್ದ ವರ, ಮದುವೆ ಸಂಭ್ರಮದಲ್ಲಿ ಕಳೆದು ಹೋಗಿದ್ದ ಬಂಧು ಮಿತ್ರರ ಖುಷಿಯ ನಡುವೆಯೇ ವರನು ವಧುವನ್ನು ಮಂಟಪದಲ್ಲಿಯೇ ಬಿಟ್ಟು ಹೋದ ಘಟನೆಯೊಂದು (Viral News) ನಡೆದಿದೆ. ತಾಳಿ ಕಟ್ಟುವ ಮೊದಲೇ ವರನ ಫೋನ್ ಗೆ ಬಂದ ಒಂದು ಕರೆಯಿಂದ ಮದುವೆ ನಿಂತಿದೆ ಎಂದರೆ ನಂಬಲೇಬೇಕಾಗಿದೆ.

ಇಷ್ಟಕ್ಕೂ ಏನಿದು ಘಟನೆ ಅನ್ನೋದಾದ್ರೆ ಉತ್ತರ ಪ್ರದೇಶದ ಅಮ್ರೊಹ್‌ನಲ್ಲಿ (Amroh Uttar Pradesh) ಮದುವೆಯೊಂದು ನಡೆಯುತ್ತಿತ್ತು ಈ ವೇಳೆ ವಧು ಮತ್ತು ವರನ ಕಡೆಯವರೆಲ್ಲಾ ಸಂಭ್ರಮದಿಂದ ಒಂದು ಕಡೆ ಸೇರಿದ್ದರು. ಅತಿಥಿಗಳಿಗೆ ಆದರ ಆತಿಥ್ಯಗಳನ್ನು ಸಹಾ ನೀಡಲಾಗುತ್ತಿತ್ತು. ಎಲ್ಲರ ಸಮ್ಮುಖದಲ್ಲಿ ವಧುವಿನ ಕೊರಳಿಗೆ ತಾಳಿ ಕಟ್ಟಿ ಸಪ್ತಪದಿ ತುಳಿಯುವುದೊಂದೇ ಬಾಕಿ ಇತ್ತು. ಅಷ್ಟರಲ್ಲೇ ವರನ ಫೋನ್ ಗೆ ಒಂದು ಕರೆ ಬಂದಿದ್ದು, ಮದುವೆ ವಾತಾವರಣದಲ್ಲಿ ಕಲ್ಲೋಲವನ್ನೇ ಸೃಷ್ಟಿಸಿದೆ.

ಕರೆ ಮಾಡಿದ ವ್ಯಕ್ತಿ ತಾನು ವಧುವಿನ ಲವರ್ ಎಂದೂ ಅವಳನ್ನು ಮದುವೆ ಆದ್ರೆ ಚೆನ್ನಾಗಿರಲ್ಲ ಅಂತ ವಾರ್ನಿಂಗ್ ನೀಡಿದ್ದಾನೆ.‌ ಅದಕ್ಕೆ ವರನು ಲವರ್ ಅನ್ನೋದಕ್ಕೆ ಸಾಕ್ಷಿ ಏನು ಎಂದು ಕೇಳಿದ್ದಕ್ಕೆ ಕರೆ ಮಾಡಿದ ವ್ಯಕ್ತಿ ವಧುವಿನ ಜೊತೆಗೆ ತಾನಿರುವ ಒಂದಷ್ಟು ಫೋಟೋ ಮತ್ತು ವೀಡಿಯೋಗಳನ್ನು ವರನ ಫೋನ್ ಗೆ ಕಳಿಸಿದ್ದಾನೆ. ಇದನ್ನು ನೋಡಿ ವರ ಶಾಕ್ ಆಗಿದ್ದಾನೆ.

ಫೋಟೋ ವೀಡಿಯೋ ನೋಡಿದ ವರ ತನಗೆ ಆ ಮದುವೆ ಬೇಡ ಎಂದು ಮಂಟಪವನ್ನು ತೊರೆದು ಅಲ್ಲಿಂದ ಹೊರಟು ಹೋಗಿದ್ದು, ಮದುವೆ ನಿಂತು ಹೋಗಿದೆ. ಕರೆ ಮಾಡಿದ ವ್ಯಕ್ತಿಯನ್ನು ಕಮಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಧು ಅದಾಮ್ಪುರ ನಿವಾಸಿಯಾಗಿದ್ದು, ಅಮ್ರೋಹ್ ನ ಯುವಕನೊಡನೆ ಮದುವೆ ನಿಶ್ವಯವಾಗಿತ್ತು.

Leave a Comment