Bhagyalakshmi: ಅತ್ತೆಯ ಕೆಲಸಕ್ಕೆ ಕುತ್ತಾಯ್ತು ಭಾಗ್ಯ ಕೆಲಸ, ವಿಷಯ ಗೊತ್ತಾದ್ರೆ ಸುಮ್ನೆ ಇರ್ತಾಳಾ ಕುಸುಮ ?

Written by Soma Shekar

Published on:

---Join Our Channel---

Bhagyalakshmi: ಭಾಗ್ಯಲಕ್ಷ್ಮೀ (Bhagyalakshmi) ಸೀರಿಯಲ್ ನಲ್ಲಿ ಇತ್ತೀಚಿನ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿವೆ. ಮಗ ತಾಂಡವ್ ಗೆ ಬುದ್ಧಿ ಕಲಿಸಲು, ಅವನ ಸಹಾಯವಿಲ್ಲದೇ ಜೀವನ ನಡೆಸಲು ಕುಸುಮ (Kusuma) ಮತ್ತು ಭಾಗ್ಯ (Bhagya) ಇಬ್ಬರೂ ಸಹಾ ಕೆಲಸಕ್ಕೆ ಸೇರಿದ್ದಾರೆ. ಆದರೆ ಕುಸುಮಾಗೆ ಭಾಗ್ಯ ಕೆಲಸಕ್ಕೆ ಸೇರಿರುವ ವಿಚಾರ ಗೊತ್ತಿಲ್ಲ. ಭಾಗ್ಯ ತನ್ನ ಸಾಮರ್ಥ್ಯದಿಂದ ಕೆಲಸವನ್ನು ಪಡೆದುಕೊಂಡಿದ್ದಾಳೆ. ಆದರೆ ಈಗ ಭಾಗ್ಯ ಕೆಲಸವೇ ಕುಸುಮಾ ಕೆಲಸಕ್ಕೆ ಕುತ್ತಾಗಿ ಪರಿಣಮಿಸಿದೆ.

ಕುಸುಮಾ ದರ್ಶಿನಿ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ದರ್ಶಿನಿಯಲ್ಲಿ ಕುಸುಮಾಗೆ ಕೆಲಸ ಸಿಕ್ಕಿದ್ದೇ ಒತ್ತು ಶ್ಯಾವಿಗೆ ಮತ್ತು ಮಾವಿನ ರಸಾಯನ ಮಾಡೋದ್ರಿಂದ. ಅದನ್ನ ಒಂದು ಫೈವ್ ಸ್ಟಾರ್ ಹೊಟೇಲ್ ಸಹಾ ಆರ್ಡರ್ ಕೊಟ್ಟು ತರಿಸಿಕೊಳ್ತಾ ಇತ್ತು. ಆದರೆ ಈಗ ಆ ಹೊಟೇಲ್ ಗೆ ಮಾವಿನ ರಸಾಯನ ಮತ್ತು ಒತ್ತು ಶ್ಯಾವಿಗೆ ಅಗತ್ಯ ಇಲ್ಲ ಯಾಕಂದ್ರೆ ಅದನ್ನು ಅವರೇ ಸಿದ್ಧಪಡಿಸ್ತಾ ಇದ್ದಾರೆ.

ಹೌದು, ಯಾವ ಫೈವ್ ಸ್ಟಾರ್ ಹೊಟೇಲ್ ನವರು ಒತ್ತು ಶ್ಯಾವಿಗೆ ಮತ್ತು ರಸಾಯನದ ಆರ್ಡರ್ ಅನ್ನ ದರ್ಶಿನಿಗೆ ಕೊಡ್ತಾ ಇದ್ದ ಅದೇ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಭಾಗ್ಯ ಶೆಫ್ ಆಗಿದ್ದು, ಒತ್ತು ಶ್ಯಾವಿಗೆ ಮತ್ತು ರಸಾಯನ ಮಾಡ್ತಾ ಇದ್ದಾಳೆ. ಭಾಗ್ಯಾ ಕೈ ರುಚಿ ಸಹಾ ಕುಸುಮಾ ಕೈ ರುಚಿಯ ಹಾಗೇ ಇರೋದ್ರಿಂದ ಈಗ ದರ್ಶಿನಿಯಿಂದ ಶ್ಯಾವಿಗೆ , ರಸಾಯನ ತರಿಸೋ ಅಗತ್ಯ ದೊಡ್ಡ ಹೊಟೇಲ್ ಗೆ ಇಲ್ಲ.

ಎಂದಿನಂತೆ ಕೆಲಸಕ್ಕೆ ಬಂದ ಕುಸುಮಾಗೆ ದರ್ಶಿನಿಯಲ್ಲಿ ಶಾಕ್ ಎದುರಾಗಿದೆ. ಮ್ಯಾನೇಜರ್ ಇನ್ಮುಂದೆ ನಿಮ್ಮ ಅವಶ್ಯಕತೆ ಇಲ್ಲ, ಫೈವ್ ಸ್ಟಾರ್ ಹೊಟೇಲ್ ಈಗ ಆರ್ಡರ್ ಕೊಡ್ತಾ ಇಲ್ಲ ಅಂತ ಅದಕ್ಕೆ ನಿಮ್ಮ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಅಲ್ಲಿಗೆ ಇನ್ಮುಂದೆ ಕುಸುಮಾಗೆ ಕೆಲಸ ಇಲ್ಲದಾಗಿದೆ. ಕುಸುಮಾಗೆ ಸೊಸೆ ಭಾಗ್ಯ ಎಲ್ಲಾ ತನ್ನಿಂದ ಕಲಿತಿರೋದು ಅಂತ ಬೀಗೋವಾಗ ಈಗ ಸೊಸೆಯಿಂದಾನೇ ತನ್ನ ಕೆಲಸ ಹೋಯ್ತು ಅಂದ್ರೆ ಸುಮ್ಮನೆ ಇರ್ತಾಳಾ? ಕಾದು ನೋಡಬೇಕಾಗಿದೆ.

Leave a Comment