Amruthadhaare: ಪಾರ್ಥನೊಂದಿಗೆ ಅಪ್ಪನಿಗೆ ಸಿಕ್ಕಿಬಿದ್ದ ಅಪೇಕ್ಷಾಗೆ ಆಯ್ತು ಕಪಾಳ ಮೋಕ್ಷ, ಅಶ್ವಿನಿಯ ಕುತಂತ್ರಕ್ಕೆ ಅಪೇಕ್ಷಾ ದಾಳ

Written by Soma Shekar

Published on:

---Join Our Channel---

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಕಥೆಯು ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ರಂಜಿಸುತ್ತಿದೆ, ಹೊಸ ಹೊಸ ತಿರುವುಗಳು ಸೀರಿಯಲ್ ಬಗ್ಗೆ ಇನ್ನಷ್ಟು ಕುತೂಹಲವನ್ನು ಮೂಡಿಸಿದೆ. ಭೂಮಿಕಾಗೆ (Bhumika) ದಿವಾನ್ ಕುಟುಂಬದ ಹಿರಿತನವನ್ನು ನೀಡಿದ್ದಾರೆ ಗೌತಮ್ (Gowtham) ಅವರ ಅಜ್ಜಿ. ಅದನ್ನ ತಪ್ಪಿಸೋಕೆ ಶಕುಂತಲಾ ದೇವಿ ಮಾಡಿದ ಪ್ರಯತ್ನ ಕೈಕೊಟ್ಟಿದೆ. ಶಕುಂತಲಾ ದೇವಿ ಇದೆಲ್ಲಾ ಎಷ್ಟು ದಿನ ನಡೆಯುತ್ತೆ ನೋಡೋಣ ಅಂತ ತಮ್ಮನ ಹತ್ತಿರ ಬೇಸರವನ್ನು ಹೊರಹಾಕಿದ್ದಾಳೆ.‌

ಇದರ ನಡುವೆ ಭೂಮಿಕಾ ತನ್ನ ಸಂಬಳದಲ್ಲಿ ಸ್ವಲ್ಪ ಹಣವನ್ನು ತೆಗೆದುಕೊಂಡು ಅದರಲ್ಲಿ ಗೌತಮ್ ಜೊತೆಗೆ ಡೇಟಿಂಗ್ ಗೆ ಹೋಗಿದ್ದಾಳೆ. ಗೌತಮ್ ಗೆ ಮಿಡ್ಲ್ ಕ್ಲಾಸ್ ಜೀವನದ ಸಿಹಿ ಕಹಿಗಳನ್ನು ಗಂಡನಿಗೆ ರುಚಿ ತೋರಿಸಿದ್ದಾಳೆ.‌ ಹೀಗೆ ಅವರಿಬ್ಬರೂ ಖುಷಿಯಾಗಿ ಸಮಯವನ್ನು ಕಳೆಯುತ್ತಿದ್ದಾರೆ.

ಇನ್ನೊಂದು ಕಡೆ ಅಶ್ವಿನಿ ಪಾರ್ಥ ಮತ್ತು ಅಪೇಕ್ಷಾ ಇಬ್ಬರೂ ಜೊತೆಯಾಗಿರೋದನ್ನ, ಆತ್ಮೀಯವಾಗಿ ಇರೋದನ್ನ ನೋಡಿ ತನ್ನ ಅಮ್ಮನಿಗೆ ಅದನ್ನ ಹೇಳಿದ್ದಾಳೆ. ಆದರೆ ಶಕುಂತಲಾ ಅದೆಲ್ಲಾ ತನಗೆ ಗೊತ್ತು ಅಂದಿದ್ದಾಳೆ‌. ನಂತರ ಅಶ್ವಿನಿ ಈ ಎಲ್ಲಾ ವಿಚಾರವನ್ನ ಜೈದೇವ್ ಹತ್ರ ಹೇಳ್ಕೊಂಡಿದ್ದಾಳೆ. ಇದಕ್ಕೆ ಜೈದೇವ್ ಸಹಾ ತನ್ನ ತಂಗಿಯ ಜೊತೆ ಕೈ ಜೋಡಿಸ್ತಾನೆ.

ಇಬ್ಬರೂ ಸೇರಿ ಪ್ಲಾನ್ ಮಾಡ್ತಾರೆ. ಯಾರಿಗೆ ಈ ವಿಷಯವನ್ನು ತಿಳಿಸಿದ್ರೆ ಒಳ್ಳೇದು ಅನ್ನೋದನ್ನ ಚರ್ಚೆ ಮಾಡುವಾಗ್ಲೇ ಜೈದೇವ್ ಅಶ್ವಿನಿಗೆ ಈ ವಿಷಯವನ್ನು ನೇರವಾಗಿ ಅಪೇಕ್ಷಾ ಅವರ ಅಪ್ಪನಿಗೆ ಹೋಗಿ ತಿಳಿಸು ಅನ್ನೋ ಸಲಹೆಯನ್ನು ಕೊಟ್ಟಾಗ ಅಶ್ವಿನಿಗೆ ಸಹಾ ಅದೇ ಸರಿ ಎನಿಸುತ್ತೆ.

ಅಶ್ವಿನಿ ಭೂಮಿಕಾ ಅವರ ಅಪ್ಪನನ್ನ ಭೇಟಿ ಮಾಇ ಅಪೇಕ್ಷಾ ಮತ್ತು ಪಾರ್ಥನ ವಿಚಾರವನ್ನ ಹೇಳ್ತಾಳೆ. ಆದರೆ ಸದಾಶಿವ ಅವರು ಅದನ್ನ ನಂಬೋಲ್ಲ, ಮಗಳು ಅಂತಹವಳಲ್ಲ ಅಂತ ಸಮಜಾಯಿಷಿ ಕೊಡ್ತಾರೆ. ಆಗ ಅಶ್ವಿನಿ ಅವರಿರೋ ಜಾಗಕ್ಕೆ ಹೋಗಿ ನಿಮಗೆ ಗೊತ್ತಾಗುತ್ತೆ ಅಂತ ಅವರಿಬ್ಬರು ಎಲ್ಲಿದ್ದಾರೆ ಅನ್ನೋದನ್ನ ಹೇಳ್ತಾಳೆ.

ಪ್ರೇಮಲೋಕದಲ್ಲಿ ಮುಳುಗಿದ್ದ ಜೋಡಿ ಹಕ್ಕಿಗಳು ಇದ್ದ ಜಾಗಕ್ಕೆ ಸದಾಶಿವ್ ಬಂದಿದ್ದಾರೆ. ಅದನ್ನ ನೋಡಿ ಪಾರ್ಥ ಮತ್ತು ಅಪೇಕ್ಷಾ ಇಬ್ಬರೂ ಸಹಾ ಬೆಚ್ಚಿ ಬಿದ್ದಿದ್ದಾರೆ. ಅಪ್ಪನ ಮುಂದೆ ಕೊನೆಗೂ ಸತ್ಯ ಬಯಲಾಗಿ ಹೋಯ್ತು ಅನ್ನೋ ಆತಂಕ ಈಗ ಅಪೇಕ್ಷಾಳನ್ನ ಕಾಡತೊಡಗಿದೆ.

ಸದಾಶಿವ್ ಮಗಳ ವರ್ತನೆಯಿಂದ ಬೇಸತ್ತು ಅವಳ ಕೆನ್ನೆಗೆ ಬಾರಿಸಿದ್ದಾರೆ. ಅವರು ಮಗಳ ಬಗ್ಗೆ ಸಿಟ್ಟಾಗಿದ್ದಾರೆ. ಮಗಳ ಪ್ರೇಮದ ವಿಚಾರ ಗೊತ್ತಾಗಿರೋ ಸದಾಶಿವ ಅವರ ಮುಂದಿನ ನಿರ್ಧಾರ ಏನಾಗಲಿದೆ? ವಿಷಯ ತಿಳಿದು ಗೌತಮ್ ಮತ್ತು ಭೂಮಿಕಾ ಇದರಲ್ಲಿ ಮಧ್ಯಸ್ಥಿಕೆ ವಹಿಸ್ತಾರಾ? ಶಕುಂತಲಾ ದೇವಿ ಹೇಗೆ ರಿಯಾಕ್ಟ್ ಮಾಡ್ತಾಳೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment