Ramayana: ಇಲ್ಲಿ ಅಸಲಿ ಹೀರೋ ರಣಬೀರ್ ಅಲ್ಲ ರಾಕಿಂಗ್ ಸ್ಟಾರ್, ಹೊರ ಬಿದ್ದ ಸುದ್ದಿಗೆ ಥ್ರಿಲ್ ಆಗ್ತಿದ್ದಾರೆ ಯಶ್ ಫ್ಯಾನ್ಸ್

Written by Soma Shekar

Published on:

---Join Our Channel---

Ramayana: ರಾಮಾಯಣ (Ramayana) ಕುರಿತಾದ ಸಿನಿಮಾದ ದೊಡ್ಡ ಪ್ರಾಜೆಕ್ಟ್ ಒಂದು ಬಾಲಿವುಡ್ ನಲ್ಲಿ (Bollywood) ಈಗಾಗಲೇ ಸೆಟ್ಟೇರಿದ್ದು, ಈ ವಿಷಯ ಸಾಕಷ್ಟು ಸಲ ಸುದ್ದಿಯಾಗಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗಲಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ನಿರ್ದೇಶನ ಮಾಡುತ್ತಿದ್ದು, ನಟ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಈಗಾಗಲೇ ಇವರ ಒಂದಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಸಿನಿಮಾದ ಕುರಿತಾದ ಮತ್ತೊಂದು ರೋಚಕ ಮತ್ತು ಆಸಕ್ತಿಕರ ವಿಚಾರ ಏನೆಂದರೆ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ (Yash) ಅವರು ನಟಿಸುತ್ತಾರೆ ಎನ್ನುವುದೇ ಆಗಿದೆ. ಆದರೆ ತಿಂಗಳುಗಳೇ ಕಳೆದರೂ ಈ ವಿಚಾರದ ಕುರಿತಾದ ಅಧಿಕೃತ ಘೋಷಣೆ ಮಾತ್ರ ಹೊರ ಬಂದಿಲ್ಲ. ಆದರೆ ಈಗ ಈ ಸುದ್ದಿ ಬಹುತೇಕ ಅಧಿಕೃತವಾಗಿದೆ. ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಯಶ್ ಅವರದ್ದೇ ಪ್ರಧಾನ ಪಾತ್ರ ಎಂದು ತಿಳಿದುಬಂದಿದೆ.

ಈ ಸಿನಿಮಾದಲ್ಲಿ ನಟಿಸುತ್ತಿರುವ ನಟ ಆದಿತ್ಯ ದೇಶಮುಖ್ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ರಾಮಾಯಣ ಸಿನಿಮಾದ ಕುರಿತಾಗಿ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ರಾವಣನ ಪಾತ್ರದಲ್ಲಿ ನಟ ಯಶ್ ಅವರು ಈ ಸಿನಿಮಾದಲ್ಲಿ ನಟಿಸುವ ವಿಚಾರವನ್ನ ಖಚಿತಪಡಿಸಿದ್ದಾರೆ. ಅಲ್ಲದೇ ಈ ಸಿನಿಮಾ ರಾಮನ ದೃಷ್ಟಿಕೋನದಿಂದ ಅಲ್ಲ ಬದಲಾಗಿ ರಾವಣನ ದೃಷ್ಟಿಕೋನದಲ್ಲಿ ಕಥೆಯನ್ನ ಹೇಳಲಿದೆ ಎನ್ನುವ ಮಾತನ್ನ ಹೇಳಿದ್ದಾರೆ.

ರಾವಣನ ದೃಷ್ಟಿಕೋನದಲ್ಲಿ ಕಥೆ ನಿರೂಪಣೆ ಆಗುತ್ತದೆ ಎಂದ ಕೂಡಲೇ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ ಹೆಚ್ಚು ಮಹತ್ವ ಇದೆ ಎನ್ನುವುದು ಸ್ಪಷ್ಟವಾಗಿದೆ. ರಾಮಾಯಣ ಸಿನಿಮಾದಲ್ಲಿ ರಾವಣನೇ ನಾಯಕ ಎನ್ನುವುದು ನಿರೀಕ್ಷೆಯಾಗಿದೆ. ಈ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ ಪ್ರಾಧಾನ್ಯತೆ ಇರುವ ಕಾರಣದಿಂದಲೇ ರಾಕಿಂಗ್ ಸ್ಟಾರ್ ಯಶ್ ಅವರನ್ನ ಆಯ್ಕೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ.

Leave a Comment