Ramayana: ರಾಮಾಯಣ ಸಿನಿಮಾಕ್ಕೆ ಆರಂಭದಲ್ಲೇ ಎಡವಟ್ಟು; ಇನ್ನಾದ್ರು ಎಚ್ಚರವಾಗಿರಿ ಎಂದ ನೆಟ್ಟಿಗರು, ಆಗಿದ್ದೇನು?

Written by Soma Shekar

Published on:

---Join Our Channel---

Ramayan : ಬಾಲಿವುಡ್ ನ ಸ್ಟಾರ್ ನಟ ರಣಬೀರ್ ಕಪೂರ್ (Ranbir Kapoor) ರಾಮನಾಗಿ ಕಾಣಿಸಿಕೊಳ್ಳಲಿರುವ ರಾಮಾಯಣ ಸಿನಿಮಾದ ಅಧಿಕೃತವಾದ ಘೋಷಣೆ ಇನ್ನೂ ಆಗಿಲ್ಲ, ಆದರೆ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದೆ. ಬಾಲಿವುಡ್ ನ ಜನಪ್ರಿಯ ನಿರ್ದೇಶಕ ನಿತೇಶ್ ತಿವಾರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಮತ್ತು ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಅವರು ನಟಿಸುತ್ತಾರೆ ಎನ್ನುವ ವಿಚಾರ ಈಗಾಗಲೇ ಸಾಕಷ್ಟು ವೈರಲ್ ಆಗಿ ಜನರ ಗಮನವನ್ನು ಸೆಳೆದಿದೆ.

Ramayan

ಇವೆಲ್ಲವುಗಳ ನಡುವೆ ಇತ್ತೀಚಿಗಷ್ಟೇ ಪ್ರಾರಂಭವಾದ ಸಿನಿಮಾದ ಚಿತ್ರೀಕರಣದಲ್ಲಿ ಒಂದಿಷ್ಟು ಜನ ಕಲಾವಿದರು ಭಾಗಿಯಾಗಿದ್ದಾರೆ ಹಾಗೂ ಚಿತ್ರೀಕರಣದ ಸೆಟ್ ನಿಂದ ಕೆಲವೊಂದು ಫೋಟೋಗಳು ವೈರಲ್ ಆಗಿದೆ. ಅದರಲ್ಲಿ ಈ ಸಿನಿಮಾದಲ್ಲಿ ಕೈಕೇಯಿ ಪಾತ್ರದಲ್ಲಿ ನಟಿಸಲಿರುವ ಮಾಜಿ ಮಿಸ್ ಯೂನಿವರ್ಸ್ ಲಾರಾ ದತ್ತಾ (Lara Dutta) ಅವರ ಫೋಟೋ ಮತ್ತು ನಟ ಅರುಣ್ ಗೋವಿಲ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಅಲ್ಲಿಗೆ ರಾಮಾಯಣ ಚಿತ್ರೀಕರಣ ಆರಂಭವಾಗಿರೋದು ಸ್ಪಷ್ಟವಾಗಿದೆ.

Ramayan

ಭಾರೀ ಬಜೆಟ್ ನಲ್ಲಿ ಸಿನಿಮಾಗಳನ್ನ ನಿರ್ಮಾಣ ಮಾಡುವಾಗ ಚಿತ್ರತಂಡದವರು ಬಹಳಷ್ಟು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಸಿನಿಮಾ ಕುರಿತಾದ ಕುತೂಹಲವನ್ನು ಹಾಗೇ ಕಾಯ್ದಿರಿಸಿಕೊಳ್ಳುವ ಸಲುವಾಗಿ ಸಿನಿಮಾದ ನಟ, ನಟಿಯರ ಮಾಹಿತಿಯನ್ನು ಮತ್ತು ಚಿತ್ರೀಕರಣದ ಫೋಟೋಗಳನ್ನು ಹೊರಗೆ ಬರದಂತೆ ಸಾಕಷ್ಟು ನಿಗಾ ವಹಿಸಲಾಗುತ್ತದೆ. ಆದರೆ ಈಗ ರಾಮಾಯಣ ಸಿನಿಮಾ ತಂಡದವರು ಈ ವಿಚಾರದಲ್ಲಿ ಆರಂಭದಲ್ಲೇ ಎಡವಿದ್ದಾರೆ.

Ramayan

ಕೈಕೇಯಿ ಪಾತ್ರ ಮಾಡುತ್ತಿರುವ ಲಾರಾ ದತ್ತಾ ಅವರ ಲುಕ್ ಈಗ ಲೀಕ್ ಆಗುವ ಮೂಲಕ ಎಲ್ಲೆಡೆ ಹರಿದಾಡಿದೆ. ಶೂಟಿಂಗ್ ಸ್ಪಾಟ್ ನಿಂದ ಹೊರ ಬಂದಿರುವ ಫೋಟೋಗಳನ್ನು ಜೂಮ್ ವಾಹಿನಿಯು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ರಾಮಾಯಣ ಧಾರಾವಾಹಿಯಲ್ಲಿ ರಾಮನಾಗಿ ನಟಿಸಿ ಅಸಂಖ್ಯಾತ ಭಾರತೀಯರ ಮನಸ್ಸಿನಲ್ಲಿ ರಾಮನ ರೂಪದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಹಿರಿಯ ನಟ ಅರುಣ್ ಗೋವಿಲ್ (Arun Govil) ಅವರು ಈ ಸಿನಿಮಾದಲ್ಲಿ ದಶರಥನ ಪಾತ್ರವನ್ನು ಮಾಡುತ್ತಿದ್ದಾರೆ ಎನ್ನುವುದು ಈಗ ಎಲ್ಲರಿಗೂ ಗೊತ್ತಾಗಿದೆ.

Ramayan

ಬಾಲ ಕಲಾವಿದರು ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಗಳು ವೈರಲ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚಿತ್ರತಂಡದವರು ಇನ್ನು ಮುಂದೆಯಾದರೂ ಎಚ್ಚರಿಕೆಯಿಂದ ಕೆಲಸವನ್ನು ಮಾಡಬೇಕು, ಚಿತ್ರೀಕರಣ ನಡೆಯುವ ಸ್ಥಳಗಳಲ್ಲಿ ದಯವಿಟ್ಟು ಮೊಬೈಲ್ ಬಳಕೆಯನ್ನು ನಿಷೇಧ ಮಾಡಿ ಎಂದು ಸಲಹೆಯನ್ನು ನೀಡುತ್ತಿದ್ದಾರೆ. ರಾಮಾಯಣ ಸಿನಿಮಾ ಮೂರು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗಿದೆ. ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಇನ್ನು ಈ ಸಿನಿಮಾದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನ ಪಾತ್ರದಲ್ಲಿ ಯಶ್ ಅವರು ನಟಿಸುವುದು ಎಷ್ಟು ಸತ್ಯ ಎನ್ನುವುದು ಕೂಡಾ ತಿಳಿದು ಬರಬೇಕಾಗಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದಲೂ ಸಾಯಿ ಪಲ್ಲವಿ ಮತ್ತು ಯಶ್ ಅವರ ಹೆಸರುಗಳು ರಾಮಾಯಣ ಸಿನಿಮಾದ ಪ್ರಮುಖ ಪಾತ್ರಗಳ ವಿಚಾರದಲ್ಲಿ ಹರಿದಾಡುತ್ತಿದ್ದು, ಈ ಮಾಹಿತಿ ಬಹುತೇಕ ಖಚಿತ ಎಂದೇ ಎಲ್ಲೆಡೆ ಸುದ್ದಿಯಾಗಿದ್ದು, ಸ್ಪಷ್ಟ ಉತ್ತರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.‌

Rishab Shetty: ವನ್ಯ ಜೀವಿಗಳ ತಾಣದಲ್ಲಿ ಕುಟುಂಬದ ಜೊತೆಗೆ ಖುಷಿಯ ಕ್ಷಣಗಳನ್ನು ಆನಂದಿಸಿದ ರಿಷಬ್ ಶೆಟ್ಟಿ

Leave a Comment