Kannada Serial: ಕಿರುತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಹಿರಿಯ ನಟ ನರಸಿಂಹ ರಾಜು ಅವರ ಮೊಮ್ಮಗ ಹೇಳಿದ್ದೇನು?

Written by Soma Shekar

Published on:

---Join Our Channel---

Kannada Serial: ಕನ್ನಡ ಸಿನಿಮಾ ರಂಗದಲ್ಲಿ ಬಹಳ ದೊಡ್ಡ ಹೆಸರನ್ನು ಮಾಡಿರುವ ಮೇರು ನಟ ನರಸಿಂಹರಾಜು (Narasimha Raju) ಅವರು. ಕನ್ನಡ ಸಿನಿಮಾ ಇತಿಹಾಸದಲ್ಲಿ ಹಾಸ್ಯ ನಟರ ಹೆಸರು ಬಂದಾಗ ಅಲ್ಲಿ ಮೊದಲ ಸಾಲಿನಲ್ಲಿ ಕಾಣುವ ಹೆಸರೇ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರದ್ದು ಅಂದರೆ ಖಂಡಿತ ಅದು ಅತಿಶಯೋಕ್ತಿಯೇನಲ್ಲ. ಕನ್ನಡ ಸಿನಿಮಾಗಳಲ್ಲಿ ಹಾಸ್ಯದ ರಸದೌತಣ ಉಣ ಬಡಿಸಿದ ಈ ನಟ ತಮ್ಮದೇ ಆದ ಸ್ಥಾನವನ್ನು ಮತ್ತು ಗೌರವವನ್ನು ಪಡೆದುಕೊಂಡಿರುವ ನಟ.

ನರಸಿಂಹರಾಜು ಅವರ ಮಗಳು ಸುಧಾ ನರಸಿಂಹರಾಜು ಅವರು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ. ಈಗ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್ (Avniash Diwakar) ಅವರು ಕನ್ನಡ ಕಿರುತೆರೆಗೆ ಎಂಟ್ರಿಯನ್ನು ನೀಡುತ್ತಿದ್ದಾರೆ. ಅವಿನಾಶ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕಿರುತೆರೆಯ ಕಡೆಗೆ ಮುಖ ಮಾಡಿದ್ದಾರೆ.

ಶೃತಿ ನಾಯ್ಡು ಅವರ ನಿರ್ಮಾಣದ ನನ್ನ ದೇವ್ರು ಸೀರಿಯಲ್ ನ (Kannada Serial) ಮುಖ್ಯ ಪಾತ್ರದಲ್ಲಿ ಅವಿನಾಶ್ ದಿವಾಕರ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅವಿನಾಶ್ ಅವರು ಕಿರುತೆರೆಗೆ ಎಂಟ್ರಿಯನ್ನು ನೀಡುತ್ತಿರುವ ವಿಚಾರವಾಗಿ ಮಾದ್ಯಮಗಳ ಜೊತೆ ಮಾತನಾಡಿದ್ದಾರೆ. ತಾವು ಕಿರುತೆರೆಗೆ ಎಂಟ್ರಿ ನೀಡುತ್ತಿರುವುದಕ್ಕೆ ಅವರು ಕಾರಣವನ್ನು ಸಹಾ ನೀಡಿದ್ದಾರೆ.

ನಾವು ಕಂಡ ಕನಸು ಇಲ್ಲಿಂದಲೇ ಯಶಸ್ಸನ್ನ ಕಾಣಬಹುದು. ಹೀರೋಗಳು ಮಾಡದಿರುವಷ್ಟು ದುಡ್ಡನ್ನ ಈಗ ಇನ್​ಫ್ಲ್ಯುಯೆನ್ಸರ್​ ಗಳು ಮಾಡ್ತಿದ್ದಾರೆ. ಅದೇ ರೀತಿಯಲ್ಲಿ ಕಿರುತೆರೆಗೂ ಸಖತ್ ಬೇಡಿಕೆ ಇದೆ. ಶ್ರುತಿ ನಾಯ್ಡು ಅವರು ಕಥೆ ಹೇಳಿದಾಗ ನೋ ಅಂತ ಹೇಳೋಕೆ ಕಾರಣಗಳೇ ಇರಲಿಲ್ಲ. ಅವರು ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಎಂದರು ಎನ್ನುವ ಮಾತನ್ನು ಅವಿನಾಶ್ ಹೇಳಿದ್ದಾರೆ.

Leave a Comment