Entertainment

Tollywood Actor: ಗುಂಟೂರು ಕಾರಂ ಸಿನಿಮಾ ಮಾಡೋದೇ ಕಷ್ಟ ಆಯ್ತು; ಅಸಮಾಧಾನ ಹೊರ ಹಾಕಿದ ನಟ

Tollywood Actor: ಟಾಲಿವುಡ್ ನಲ್ಲಿ (Tollywood Actor) ಅತಡು, ಖಲೇಜಾದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಕಾಂಬಿನೇಷನ್ ಎಂದರೆ ಅದು ನಟ ಮಹೇಶ್ ಬಾಬು (Mahesh Babu) ಮತ್ತು ನಿರ್ದೇಶಕ ತ್ರಿವಿಕ್ರಮ್ (Trivikram) ಕಾಂಬಿನೇಷನ್. ಈ ಕಾಂಬಿನೇಷನ್ ನಲ್ಲಿ ಗುಂಟೂರು ಕಾರಂ ಸಿನಿಮಾ ಘೋಷಣೆ ಆದಾಗ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದು ಮಾತ್ರವೇ ಅಲ್ಲದೇ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು, ಸಿನಿಮಾ ಬಿಡುಗಡೆಗಾಗಿ ಕಾದಿದ್ದರು. ಆದರೆ ಸಿನಿಮಾ ಬಿಡುಗಡೆ ನಂತರ ಎಲ್ಲರ ನಿರೀಕ್ಷೆಗಳನ್ನು ನಿಜ ಮಾಡುವಲ್ಲಿ ಸಿನಿಮಾ ಸೋತಿತು ಹಾಗೂ ಸಾಧಾರಣ ಗೆಲುವನ್ನು ಮಾತ್ರವೇ ದಾಖಲಿಸಿತು.

ಗುಂಟೂರು ಕಾರಂ (Guntur Karam) ಸಿನಿಮಾ ಬಿಡುಗಡೆ ನಂತರ ನೀರಸ ಪ್ರತಿಕ್ರಿಯೆ ಕಂಡಿತ್ತು. ಸಿನಿಮಾ ಕುರಿತಾಗಿ ಇಟ್ಟುಕೊಂಡ ನಿರೀಕ್ಷೆಗಳು ಸುಳ್ಳಾಯಿತು. ಸಿನಿಮಾ ಕಂಡ ಇಂತಹ ವಿಫಲತೆಯನ್ನು ಕುರಿತಾಗಿ ಚಿತ್ರ ತಂಡದವರು ಯಾರೂ ಸಹಾ ನೇರವಾಗಿ ಮಾತನಾಡಲಿಲ್ಲವಾದರೂ ಸಿನಿಮಾ ವಿಫಲಗೊಂಡಿದ್ದು ಮಾತ್ರ ವಾಸ್ತವ. ಆದರೆ ಈಗ ಈ ಸಿನಿಮಾ ಕುರಿತಾಗಿ ಸಿನಿಮಾದಲ್ಲಿನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಜಗಪತಿ ಬಾಬು ಅವರು ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.

ಟಾಲಿವುಡ್ ಕುಟುಂಬ ಕಥಾ ಚಿತ್ರಗಳು ಮತ್ತು ಹಾಸ್ಯ ಪ್ರಧಾನ ಸಿನಿಮಾಗಳ ಮೂಲಕವೇ ಅಭಿಮಾನಿಗಳನ್ನು ಪಡೆದುಕೊಂಡಿದ್ದ ನಾಯಕ ನಟ ಜಗಪತಿ ಬಾಬು (Jagapati Babu) ಅವರು ತಮ್ಮ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಖಡಕ್ ವಿಲನ್ ಆಗಿ ರಂಜಿಸುತ್ತಾ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ನಟ ಗುಂಟೂರು ಕಾರಂ ಸಿನಿಮಾದ ಸೋಲಿನ ಕುರಿತಾಗಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಮಹೇಶ್ ಬಾಬು ಜೊತೆಗೆ ನಟಿಸೋದು, ಅವರೊಟ್ಟಿಗೆ ಕೆಲಸ ಮಾಡೋದು ನನಗೆ ತುಂಬಾ ಇಷ್ಟ. ಆದರೆ, ಗುಂಟೂರು ಖಾರಂ ಸಿನಿಮಾ ನನಗೆ ಅಷ್ಟೊಂದು ಖುಷಿಯನ್ನು ನೀಡಲಿಲ್ಲ. ಕಥೆಯನ್ನು ಕೇಳಿದಾಗ ಸಿನಿಮಾದಲ್ಲಿನ ಪಾತ್ರಗಳು ಬಹಳ ಸ್ಟ್ರಾಂಗ್ ಎನಿಸಿತ್ತು. ಆದರೆ ಸಿನಿಮಾ ಆರಂಭವಾದ ಮೇಲೆ ಒಂದು ರೀತಿಯಲ್ಲಿ ಗೊಂದಲಮಯ ಎನಿಸತೊಡಗಿತು. ಕೊನೆಗೆ ಸಿನಿಮಾದ ಶೂಟಿಂಗ್ ಮುಗಿಸೋದೆ ಕಷ್ಟ ಎನಿಸಿತ್ತು.

ನಾನು ನನ್ನ ಪಾತ್ರಕ್ಕೆ ಏನೆಲ್ಲಾ ಮಾಡಬೇಕಾಗಿತ್ತೋ ಅದೆಲ್ಲವನ್ನೂ ಮಾಡಿದ್ದೇನೆ. ಇಂತಹ ಸಿನಿಮಾಗಳಲ್ಲಿ ಇಂಥಹ ಒಂದು ಅದ್ಭುತ ಕಾಂಬಿನೇಷನ್ ಮಿಸ್ ಮಾಡಿಕೊಳ್ಳಲು ನನಗೆ ಇಷ್ಟ ಇರಲಿಲ್ಲ ಅದಕ್ಕೆ ಆ ಸಿನಿಮಾವನ್ನು ಒಪ್ಪಿಕೊಂಡೆ ಎನ್ನುವ ಮಾತನ್ನು ಹೇಳಿದ್ದಾರೆ. ಜಗಪತಿ ಬಾಬು ಅವರು ಫ್ಯಾಮಿಲಿ ಸ್ಟಾರ್ ನಿಂದ ಈಗ ಖಡಕ್ ವಿಲನ್ ಆಗಿ ಸಿನಿಮಾಗಳಲ್ಲಿ ಅಬ್ಬರಿಸುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಹೆಸರನ್ನು ಮಾಡುತ್ತಿದ್ದಾರೆ.

Soma Shekar

Recent Posts

Anushka Shetty: ಕೂಡಿ ಬಂತು ಕಂಕಣ ಭಾಗ್ಯ; ಕನ್ನಡದವರನ್ನೇ ಮದ್ವೆ ಆಗಲಿರುವ ಅನುಷ್ಕಾ, ಫ್ಯಾನ್ಸ್ ಖುಷಿ

Anushka Shetty: ಸಿನಿಮಾ ಸೆಲೆಬ್ರಿಟಿಗಳ ಮದುವೆ ವಿಚಾರಗಳ ಕುರಿತಸಗಿ ಆಗಾಗ ಕೆಲವೊಂದು ಸುದ್ದಿಗಳು ಹೊರ ಬರುತ್ತಲೇ ಇರುತ್ತದೆ. ಅದರಲ್ಲೂ ಸ್ಟಾರ್…

5 mins ago

Shanti Williams: ಗರ್ಭಿಣಿ ಆಗಿದ್ರೂ ಹಣ ಕೊಟ್ಟಿದ್ದೆ: ನಟ ಮೋಹನ್ ಲಾಲ್ ಇನ್ನೊಂದು ಮುಖ ತೋರಿಸಿದ ಹಿರಿಯ ನಟಿ

Shanti Williams: ಮಲೆಯಾಳಂ ಸಿನಿಮಾ ರಂಗದ ಹಿರಿಯ ನಟಿ, ಪ್ರಸ್ತುತ ಸಿನಿಮಾ ರಂಗದಿಂದ ದೂರವೇ ಉಳಿದಿರುವ ನಟಿ ಶಾಂತಿ ವಿಲಿಯಮ್ಸ್…

2 hours ago

Amruthadhaare: ಮಲ್ಲಿಗೆ ಸ್ಕೆಚ್ ಹಾಕಿದ ಜೈದೇವ್, ಆದ್ರೆ ಆಗಿದ್ದು ಮಾತ್ರ ಬೇರೆ, ಮಹಿಮಾ ಎಂಟ್ರಿ ಶಕುಂತಲಾ ಶಾಕ್

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿನ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಮಲ್ಲಿಯನ್ನು ಮುಗಿಸಲು ಜೈದೇವ್…

3 hours ago

Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…

17 hours ago

Pavithra Jayram: ಪವಿತ್ರ ಕರೀತಿದ್ದಾಳೆ ಅಂತ ಹೆಂಡ್ತಿ ಮಕ್ಕಳನ್ನ ಮರೆತು ಸಾವಿಗೆ ಶರಣಾದ ಚಂದು

Pavithra Jayaram: ತ್ರಿನಯನಿ (Trinayani) ತೆಲುಗು ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram)…

19 hours ago

Brundavana Serial: ಬೃಂದಾವನ ಸೀರಿಯಲ್ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್; ಇದನ್ನ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ

Brundavana Serial: ಕನ್ನಡ ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ (Brundavana Serial) ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿದೆ.…

1 day ago

This website uses cookies.