Movies

Cinema News: ಕರ್ನಾಟಕದ ಕಿಂಗ್ ಯಾರಲೇ? ಹೊಸ ಪೋಸ್ಟರ್ ಹುಟ್ಟಿಸಿತು ತೀವ್ರ ಕುತೂಹಲ

Cinema News: ಸೋಶಿಯಲ್ ಮೀಡಿಯಾದಲ್ಲೊಂದು ಹೊಸ ಚರ್ಚೆ ಈಗ ಆರಂಭವಾಗಿದೆ. ಹೌದು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದು ಬಿಡುಗಡೆ ಮಾಡಿರುವ ಪೋಸ್ಟರ್ ಈಗ ಚರ್ಚೆಯ ವಿಷಯವಾಗಿ ಬದಲಾಗಿದೆ. ಈ ಪೋಸ್ಟರ್ ನಲ್ಲಿ ಕರ್ನಾಟಕದ ಕಿಂಗ್ ಯಾರಲೇ ? ಎನ್ನುವ ಒಂದು ಪ್ರಶ್ನೆ ಇದ್ದು ಇದು ಕುತೂಹಲವನ್ನು ಕೆರಳಿಸಿದೆ. ಈ ಹೊಸ ಸಿನಿಮಾದಲ್ಲಿ (Cinema News) ಶಿವರಾಜ್ ಕುಮಾರ್ (Shivaraj Kumar) ಅವರು ನಟಿಸಲಿದ್ದಾರೆ ಎನ್ನುವ ವಿಚಾರವು ಈಗಾಗಲೇ ಗೊತ್ತಿದೆ. ಅಲ್ಲದೇ ಅಭಿಮಾನಿಗಳು ಅವರನ್ನು ತಮ್ಮ ಅಭಿಮಾನದಿಂದಾಗಿ ಕಿಂಗ್ ಅಂತಾನೇ ಕರೀತಾರೆ.

ಈಗ ಶಿವಣ್ಣನ ಪೋಸ್ಟರ್ ಬಿಡುಗಡೆ ಮಾಡೋದಕ್ಕೂ ಮೊದಲು ಈ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಡಾಲಿ ಧನಂಜಯ್ (Daali Dhananjay) ಅವರ ಅಭಿನಯದ ಹೊಸ ಸಿನಿಮಾ ಉತ್ತರಾಕಾಂಡ (Uttarakanda) ಸಿನಿಮಾಕ್ಕೆ ಹೊಸ ಹೊಸ ಕಲಾವಿದರ ಸೇರ್ಪಡೆಯಾಗುತ್ತಿದ್ದಾರೆ. ಆರಂಭದಲ್ಲಿ ಈ ಸಿನಿಮಾಕ್ಕೆ ರಮ್ಯ ನಾಯಕಿ ಎನ್ನುವುದು ಅಧಿಕೃತವಾಗಿ ಘೋಷಣೆ ಆಗಿತ್ತು.

ಆದರೆ ಈಗ ಈ ಸಿನಿಮಾಕ್ಕೆ ನಾಯಕಿಯಾಗಿ ತೆಲುಗು, ತಮಿಳಿನಲ್ಲಿ ಹೆಸರನ್ನ ಮಾಡಿರುವ ನಟಿ ಐಶ್ವರ್ಯ ರಾಜೇಶ್ (Aishwarya Rajesh) ಅವರು ಎಂಟ್ರಿಯನ್ನು ನೀಡಿದ್ದಾರೆ. ಚೈತ್ರ ಆಚಾರ್ ಮತ್ತು ದಿಗಂತ್ ಅವರು ಈ ಸಿನಿಮಾದಲ್ಲಿ ನಟಿಸುವ ವಿಚಾರ ಹೊರ ಬಂದ ಬೆನ್ನಲ್ಲೇ ಐಶ್ವರ್ಯ ರಾಜೇಶ್ ನಾಯಕಿ ಎನ್ನುವ ವಿಚಾರವು ಹೊರ ಬಂದಿದೆ. ಐಶ್ವರ್ಯ ರಾಜೇಶ್ ಅವರು ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಯನ್ನು ನೀಡುತ್ತಿದ್ದಾರೆ.

ಇನ್ನು ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಉಮಾಶ್ರೀ (Umashree) ಅವರು ಈ ಸಿನಿಮಾದಲ್ಲಿ ಪಂಡಿರಿಬಾಯಿ (Pandribai) ಎನ್ನುವ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರತಂಡ ಈಗಾಗಲೇ ಉಮಾಶ್ರೀ ಅವರ ಲುಕ್ ನ ಪೋಸ್ಟರ್ ಅನ್ನು ಸಹಾ ಶೇರ್ ಮಾಡಿದ್ದು , ಉಮಾಶ್ರೀ ಅವರ ಲುಕ್ ಬಹಳ ವಿಶೇಷವಾಗಿ ಮೂಡಿ ಬಂದಿದೆ ಎನ್ನುವುದು ಅಭಿಮಾನಿಗಳ ಮಾತಾಗಿದೆ. ರಂಗಾಯಣ ರಘು ಅವರು ಇದರಲ್ಲಿ ಬಂಡೆ ಕಾಕಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.‌

Soma Shekar

Recent Posts

SeethaRama: ಭಾರ್ಗವಿಯ ಕುತಂತ್ರಕ್ಕೆ ಬಲಿಯಾದ ಅಶೋಕ; ಪ್ರಜ್ಞೆ ತಪ್ಪಿದ ಅಶೋಕನ ರಕ್ಷಣೆಗೆ ಯಾರು ಬರ್ತಾರೆ?

SeethaRama : ಸೀತಾಳ ಮನೆಗೆ ದೇಸಾಯಿ ಕುಟುಂಬದವರೆಲ್ಲರೂ ಆಗಮಿಸಿದ್ದಾರೆ. ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಬಹಳ ಖುಷಿಯಿಂದ ಮಾಡುತ್ತಿದ್ದಾರೆ ಸೂರ್ಯ…

59 mins ago

Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…

19 hours ago

Chandini: ‘ಎ’ ನನ್ನ ಜೀವನ ಬದಲಿಸಿದ ಸಿನಿಮಾ: ರೀ ರಿಲೀಸ್ ವೇಳೆ ಎ ಸಿನಿಮಾ ನಟಿ ಚಾಂದಿನಿ ಮನಸ್ಸಿನ ಮಾತು

Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು…

20 hours ago

Tollywood Heroins: ಮೊದಲ ಸಿನಿಮಾದಿಂದಲೇ ಸ್ಟಾರ್ ಗಳಾದ ಈ ಇಬ್ಬರ ಅಬ್ಬರ ತಗ್ಗಿದ್ದೇಕೆ? ಚಾನ್ಸ್ ಸಿಕ್ತಿಲ್ಲ ಯಾಕೆ?

Tollywood Heroins: ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರಿಗೆ ಮೊದಲ ಸಿನಿಮಾದ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿಯಾಗುತ್ತದೆ ಮತ್ತು ಒಂದೇ…

23 hours ago

Amruthadhaare: ಗೌತಮ್ ಭೂಮಿಕಾ ಹೊರಟ ಕೂಡಲೇ ತನ್ನ ಅಸಲಿ ಮುಖ ತೋರಿಸಿದ ಜೈದೇವ್; ಮಲ್ಲಿ ಕಥೆ ಮುಗೀತಾ?

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಖುಷಿಯಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿನ ಪ್ರಕೃತಿ…

24 hours ago

Bhumika Ramesh: ಲಕ್ಷ್ಮೀ ಬಾರಮ್ಮ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಭೂಮಿಕಾ; ತೆಲುಗಲ್ಲಿ ಹೊಸ ಆಫರ್

Bhumika Ramesh: ಇತ್ತೀಚಿನ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ (Telugu Television) ಕನ್ನಡ ಕಲಾವಿದ್ದರದ್ದೇ ಪಾರುಪತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು…

1 day ago

This website uses cookies.