Vinod Raj : ಕನ್ನಡ ಸಿನಿಮಾ ರಂಗದ ಪ್ರತಿಭಾವಂತ ನಟ, ದಿವಂಗತ ಹಿರಿಯ ನಟಿ ಲೀಲಾವತಿ (Leelavati) ಅವರ ಮಗ ವಿನೋದ್ ರಾಜ್ (Vinod Raj)ಅವರು ಸಿನಿಮಾ ರಂಗದಿಂದ ದೂರ ಉಳಿದು ವರ್ಷಗಳೇ ಕಳೆದಿದೆ. ತಮ್ಮ ತಾಯಿಯ ಯೋಗಕ್ಷೇಮ ನೋಡಿಕೊಳ್ಳುತ್ತಾ, ಕೃಷಿಯನ್ನು ಮಾಡುತ್ತಾ ಜೀವನವನ್ನು ನಡೆಸುತ್ತಿರುವ ವಿನೋದ್ ರಾಜ್ ಅವರಿಗೆ ಇತ್ತೀಚೆಗೆ ಮಾತೃವಿಯೋಗದ ನೋವು ಕಾಡುತ್ತಿದೆ. ಅಗಲಿದ ತಾಯಿಯ ನೆನಪಿನಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ಸಿನಿಮಾಗಳಿಂದ ದೂರವೇ ಇದ್ದರೂ ಸಹಾ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ ವಿನೋದ್ ರಾಜ್ ಅವರು.
ಒಳ್ಳೆಯ ಡ್ಯಾನ್ಸರ್ ಆಗಿರುವ ವಿನೋದ್ ರಾಜ್ ಅವರನ್ನು ಬೆಳ್ಳಿ ತೆರೆಯಲ್ಲಿ ನೋಡಬೇಕೆನ್ನುವುದು ಅನೇಕರ ಆಸೆಯಾಗಿದೆ. ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ವಿನೋದ್ ರಾಜ್ ಅವರನ್ನು ಡ್ಯಾನ್ಸ್ ರಿಯಾಲಿಟಿ ಶೋ ಗಳಿಗೆ ಜಡ್ಜ್ ಆಗಿ ಮಾಡಿ ಎನ್ನುವುದು ಸಹಾ ನೆಟ್ಟಿಗರ ಆಗ್ರಹವಾಗಿದೆ. ಆದರೆ ಈ ಎರಡೂ ವಿಷಯಗಳು ಮಾತ್ರ ನಿಜವಾಗಿಲ್ಲ. ಆದರೂ ನೆಟ್ಟಿಗರು ಮಾತ್ರ ಆಗಾಗ ಈ ಬೇಡಿಕೆಯನ್ನು ಇಡುತ್ತಲೇ ಇರುತ್ತಾರೆ.
ಈಗ ವಿನೋದ್ ರಾಜ್ ಅವರು ಜೀ ಕನ್ನಡ (Zee Kannada) ವಾಹಿನಿಯ ಹೊಚ್ಚ ಹೊಸ ರಿಯಾಲಿಟಿ ಶೋ ಮಹಾನಟಿಗೆ ಎಂಟ್ರಿಯನ್ನು ನೀಡಿದ್ದಾರೆ. ಮಹಾನಟಿ ಶೋ ನಲ್ಲಿ ಅತಿಥಿಯಾಗಿ ವಿನೋದ್ ರಾಜ್ ಅವರು ಆಗಮಿಸಿರುವ ಪ್ರೊಮೋವನ್ನು ಬಿಡುಗಡೆ ಮಾಡಿದ್ದು, ಈ ಪ್ರೋಮೊವನ್ನ ನೋಡಿ ಬಹಳಷ್ಟು ಜನರು ಖುಷಿಯಾಗಿದ್ದಾರೆ. ಮಹಾನಟಿ ಕಾರ್ಯಕ್ರಮದಲ್ಲಿ ಈ ವಾರ ಕನ್ನಡದ ಮೇರು ನಟಿಯರನ್ನು ಸ್ಮರಿಸಲಾಗುತ್ತಿದೆ.
ಮಹಾನಟಿ (Mahanati Show) ವೇದಿಕೆಗೆ ಬಂದ ವಿನೋದ್ ರಾಜ್ ಅವರನ್ನು ನಿರೂಪಕಿ ಅನುಶ್ರೀ ಅವರು, ವಿನೋದ್ ರಾಜ್ ಅವರನ್ನು, ನಿಮ್ಮ ಪಾಲಿನ ಮಹಾನಟಿ ಯಾರು ಎಂದು ಕೇಳಿದ್ದು, ಅದಕ್ಕೆ ಉತ್ತರ ನೀಡಿದ ವಿನೋದ್ ಅವರು, ಜನ್ಮ ಕೊಟ್ಟವರು, ನನ್ನನ್ನು ಬೆಳೆಸಿದವರು ಆ ಮಹಾತಾಯಿಯೇ ನನ್ನ ಮಹಾನಟಿ ಎಂದು ಹೇಳಿದ್ದಾರೆ. ಇದೇ ವೇಳೆ ಅಮ್ಮನನ್ನು ನೆನಪಿಸಿಕೊಂಡು, ಮನೆಯಲ್ಲಿ ನಾನು ಹೊರಗಡೆ ಹೋದಾಗ, ಏ ವಿನು ಬಂದ್ನಾ ಅನ್ನೋ ಮಾತು ಕೇಳ್ತಿತ್ತು, ಆದ್ರೆ ಈಗ ಕೇಳೋಕೆ ಯಾರೂ ಇಲ್ಲ ಅಂತ ಭಾವುಕರಾಗಿದ್ದಾರೆ ವಿನೋದ್ ರಾಜ್.
ಪ್ರೊಮೊ ನೋಡಿದ ಮೇಲೆ ಪ್ರೇಕ್ಷಕರು ಸಹಾ ಇಂದಿನ ಎಪಿಸೋಡ್ ಅನ್ನು ನೋಡೋದಕ್ಕೆ ಕಾಯ್ತಾ ಇದ್ದಾರೆ. ಇದೇ ವೇಳೆ ಪ್ರೊಮೊ ನೋಡಿದ ಮೇಲೆ ಮತ್ತೊಂದ್ಸಲ ನೆಟ್ಟಿಗರು ಜೀ ಕನ್ನಡದ ಡಿಕೆಡಿ ಕಾರ್ಯಕ್ರಮಕ್ಕೆ ಈಗಲಾದರೂ ಅಪ್ಪಟ ಡ್ಯಾನ್ಸರ್ ಆಗಿರೋ ವಿನೋದ್ ರಾಜ್ ಅವರನ್ನು ಜಡ್ಜ್ ಆಗಿ ಕರೆ ತನ್ನಿ ಎಂದು ಅನೇಕರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ಸಲ ಆದ್ರು ಪ್ರೇಕ್ಷಕರ ಆಸೆ ನೆರವೇರುತ್ತಾ? ಕಿರುತೆರೆಯ ಯಾವುದಾದ್ರೂ ಡ್ಯಾನ್ಸ್ ಶೋ ಗೆ ವಿನೋದ್ ರಾಜ್ ಅವರು ಜಡ್ಜ್ ಆಗ್ತಾರಾ ಕಾದು ನೋಡಬೇಕಾಗಿದೆ.
Anushka Shetty: ಸಿನಿಮಾ ಸೆಲೆಬ್ರಿಟಿಗಳ ಮದುವೆ ವಿಚಾರಗಳ ಕುರಿತಸಗಿ ಆಗಾಗ ಕೆಲವೊಂದು ಸುದ್ದಿಗಳು ಹೊರ ಬರುತ್ತಲೇ ಇರುತ್ತದೆ. ಅದರಲ್ಲೂ ಸ್ಟಾರ್…
Shanti Williams: ಮಲೆಯಾಳಂ ಸಿನಿಮಾ ರಂಗದ ಹಿರಿಯ ನಟಿ, ಪ್ರಸ್ತುತ ಸಿನಿಮಾ ರಂಗದಿಂದ ದೂರವೇ ಉಳಿದಿರುವ ನಟಿ ಶಾಂತಿ ವಿಲಿಯಮ್ಸ್…
Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿನ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಮಲ್ಲಿಯನ್ನು ಮುಗಿಸಲು ಜೈದೇವ್…
Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…
Pavithra Jayaram: ತ್ರಿನಯನಿ (Trinayani) ತೆಲುಗು ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram)…
Brundavana Serial: ಕನ್ನಡ ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ (Brundavana Serial) ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿದೆ.…
This website uses cookies.