Mahanati show: ಸುದೀಪ್, ಯಶ್ ಮತ್ತು ದರ್ಶನ್ ನಿರೂಪಣೆ ಮಾಡೋ ಶೋ; ಬಿರುಗಾಳಿ ಎಬ್ಬಿಸಿದ ಹೊಸ ಸುದ್ದಿ

Written by Soma Shekar

Published on:

---Join Our Channel---

Mahanati Show: ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ ಮಹಾನಟಿ (Mahanati show) ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.‌ ಕನ್ನಡ ಕಿರುತೆರೆಯಲ್ಲಿ ಮೊದಲ ಬಾರಿಗೆ ಇಂತಹುದೊಂದು ವಿನೂತನ ಮತ್ತು ವಿಭಿನ್ನವಾದ ಕಾನ್ಸೆಪ್ಟ್ ನೊಂದಿಗೆ ಬರುತ್ತಿರುವ ರಿಯಾಲಿಟಿ ಶೋ ಇದಾಗಿದೆ. ಈಗಾಗಲೇ ವಾಹಿನಿ ಒಂದಷ್ಟು ಪ್ರೊಮೋಗಳನ್ನು ಶೇರ್ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ನಿರ್ಣಾಯಕರಾಗಿ ಬರುವ ಸೆಲೆಬ್ರಿಟಿಗಳು ಯಾರು ಎನ್ನುವುದರ ಸುಳಿವನ್ನು ನೀಡುವ ಮೂಲಕ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಈಗ ಇವೆಲ್ಲವುಗಳ ಬೆನ್ನಲ್ಲೇ ಮತ್ತೊಂದು ಹೊಸ ವಿಷಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈಗ ಬಂದಿರುವ ಹೊಸ ಸುದ್ದಿ ಏನೆಂದರೆ ಮಹಾನಟಿ ಕಾರ್ಯಕ್ರಮವನ್ನು ಸ್ಯಾಂಡಲ್ವುಡ್ ನ ದಿಗ್ಗಜರು ಮತ್ತು ಸ್ಟಾರ್ ಗಳಾಗಿರುವ ಕಿಚ್ಚ ಸುದೀಪ್ (Sudeep), ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಮತ್ತು ರಾಕಿಂಗ್ ಸ್ಟಾರ್ ಯಶ್ (Yash) ಜಡ್ಜ್ ಮಾಡಲಿದ್ದಾರೆ ಎನ್ನುವುದಾಗಿದ್ದು, ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೊಂದು ಹೊಸ ಚರ್ಚೆಯೇ ಶುರುವಾಗಿದೆ.

ಪ್ರೊಮೋಗೆ ಈಗಾಗಲೇ ಸಾವಿರಾರು ಲೈಕ್ ಗಳು ಹರಿದು ಬಂದಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಇದನ್ನು ನಂಬುವುದಕ್ಕೆ ಅನೇಕರು ಸಿದ್ಧವಾಗಿಲ್ಲ. ಅನೇಕರು ತಮ್ಮ ಕಾಮೆಂಟ್ ಗಳಲ್ಲಿ ಏಪ್ರಿಲ್ ಒಂದರಂದು ಏಪ್ರಿಲ್ ಫೂಲ್ ಅಂತ ಪೋಸ್ಟ್ ಹಾಕಿದ್ರು ಹಾಕ್ತಾರೆ ಎನ್ನುವಂತಹ ಮಾತುಗಳನ್ನು ಸಹಾ ಹೇಳಿದ್ದಾರೆ. ಒಟ್ನಲ್ಲಿ ವಾಹಿನಿಯ ಪ್ರೊಮೋ ಮಾತ್ರ ಈಗ ಭರ್ಜರಿ ವೈರಲ್ ಆಗ್ತಿದೆ.

ಪ್ರೊಮೊ ನೋಡಿದ ಮೇಲೆ ಇದು ನಿಜವೋ ಸುಳ್ಳೋ ಆದರೆ ಹೀಗೆನಾದರೂ ಆದ್ರೆ ಖಂಡಿತ ಟಿ ಆರ್ ಪಿ ಎಲ್ಲಾ ಜೀ ಕನ್ನಡಕ್ಕೆ ಎಂದೂ, ಬಹಳ ದಿನಗಳಿಂದ ಇವರನ್ನು ಒಟ್ಟಿಗೆ ನೋಡಬೇಕೆನ್ನುವ ಅಸಂಖ್ಯಾತ ಅಭಿಮಾನಿಗಳ ಕನಸು ಈ ರೀತಿ ನನಸಾದರೆ ಅದೊಂದು ದೊಡ್ಡ ಖುಷಿಯ ವಿಚಾರವೆಂದೂ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ನಿಜಕ್ಕೂ ಸುದೀಪ್, ಯಶ್ ಮತ್ತು ದರ್ಶನ್ ಜಡ್ಜ್ ಗಳಾಗ್ತಾರಾ? ಕಾದು ನೋಡಬೇಕಾಗಿದೆ.

Leave a Comment