Bhagyalakshmi: ಭಾಗ್ತಾಗೆ ಸತ್ಯ ಹೇಳೋ ನಿರ್ಧಾರ ಬದಲಿಸಿದ ಹಿತಾ, ನಮಗಿದು ಮೊದ್ಲೇ ಗೊತ್ತಿತ್ತು ಎಂದ ನೆಟ್ಟಿಗರು

Written by Soma Shekar

Published on:

---Join Our Channel---

BhagyaLakshmi: ಭಾಗ್ಯಾಗೆ (Bhagyalakshmi) ಕೆಲಸ ಸಿಕ್ಕ ಖುಷಿಯಲ್ಲಿ ಇನ್ಮುಂದೆ ಕುಟುಂಬದಲ್ಲಿ ಎಲ್ಲಾ ಸರಿಯಾಗಲಿ ಅಂತ ದೇವರ ಹತ್ರ ಪ್ರಾರ್ಥನೆ ಮಾಡೋದಕ್ಕೆ ಭಾಗ್ಯ, ಕುಸುಮಾ ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಿದ್ದಾರೆ. ಇದೇ ವೇಳೆ ಭಾಗ್ಯ ಗಂಡ ತಾಂಡವ್ ಮಾಡ್ತಿರೋ ಕುತಂತ್ರವನ್ನು, ಭಾಗ್ಯಾಗೆ ಗೊತ್ತಿಲ್ಲದ ಹಾಗೆ ಮತ್ತೊಂದು ಮದುವೆ ಆಗೋಕೆ ಸಿದ್ಧ ಆಗ್ತಿರೋ ವಿಷಯವನ್ನ ಭಾಗ್ಯಾಗೇ ಹೇಳಬೇಕು ಅಂತ ಹಿತಾ ದೇವಸ್ಥಾನಕ್ಕೆ ಬಂದಿದ್ದಾಳೆ.

ತಾಂಡವ್ (Tandav) ಕೂಡಾ ಹಿತಾನ ಫಾಲೋ ಮಾಡ್ಕೊಂಡು ದೇವಸ್ಥಾನಕ್ಕೆ ಬಂದಿದ್ದಾನೆ. ದೇವಸ್ಥಾನದಲ್ಲಿ ಹಿತಾ ಭಾಗ್ಯಾಗೆ ತಾನು ಒಂದು ವಿಚಾರ ಹೇಳೋಕೆ ಬಂದಿದ್ದಾಗಿ ಹೇಳಿದಾಗ ಅದನ್ನ ಕೇಳಿ ಭಾಗ್ಯಾಗೆ ಅಚ್ಚರಿ ಮತ್ತು ಗೊಂದಲ ಎರಡೂ ಆಗುತ್ತೆ. ಹಿತಾ ತಾಂಡವ್ ಬಗ್ಗೆ ಎಲ್ಲಾ ಹೇಳಬೇಕು ಅಂತ ಪ್ರಯತ್ನ ಮಾಡುವಾಗಲೇ ಅಲ್ಲಿಗೆ ಬರುವ ಗುಂಡಣ್ಣನ ಮಾತು ಹಿತಾ ಮನಸ್ಸನ್ನು ಬದಲಿಸಿದೆ.

ಗುಂಡಣ್ಣ ದೇವ್ರ ಹತ್ರ ಅಪ್ಪ ಸರಿ ಹೋಗ್ಲಿ ಅಂತ ಬೇಡಿಕೊಂಡಿರೋದಾಗಿ ಹೇಳ್ತಾನೆ. ಭಾಗ್ಯ ಮಗನ ಮಾತಿಗೆ ಭಾವುಕಳಾಗಿ ಹಿತಾ ಬಳಿ ಎಲ್ಲಾ ಸರಿಯಾಗುತ್ತೆ, ಮೊದಲಿನ ತರ ಗಂಡ ತಮ್ಮನ್ನ ಅರ್ಥ ಮಾಡಿಕೊಳ್ತಾರೆ, ನಾನು ಎಲ್ಲವನ್ನ ನಿಭಾಯಿಸ್ತಾ ಇದ್ದೀನಿ ಅಂತ ಮನಸ್ಸಿನಲ್ಲಿದ್ದ ನೋವನ್ನ ಹೇಳಿಕೊಳ್ತಾಳೆ. ಇದನ್ನೆಲ್ಲಾ ಕೇಳಿದ ಮೇಲೆ ಹಿತಾ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದ್ದಾಳೆ.

ಭಾಗ್ಯಾಳ ಒಳ್ಳೆಯತನ ಅವಳ ಮನಸ್ಸನ್ನ ಬದಲಿಸಿದೆ. ಹಿತಾ ಬಂದಿರುವುದನ್ನ ಕುಸುಮ ಸಹಾ ನೋಡ್ತಾರೆ. ಹೊಟೇಲ್ ನಲ್ಲಿ ಒತ್ತು ಶ್ಯಾವಿಗೆ , ರಸಾಯನ ತಂದುಕೊಟ್ಟ ಹುಡುಗಿ ಅವಳೇ ಅಂತ ಬಂದಾಗ ಹಿತಾ ತಾನು ಮನೆಗೆ ಹೋಗ್ತಾ ಇದ್ದೆ. ಭಾಗ್ಯ ಇಲ್ಲಿದ್ದಾರೆ ಅಂತ ಗೊತ್ತಾಗಿ ಬಂದೆ ಅಂತ ಹಿತಾ ಹೇಳ್ತಾಳೆ. ಅಷ್ಟು ಮಾತ್ರವೇ ಅಲ್ಲದೇ ಹಿತಾ ಅಲ್ಲಿಂದ ಹೋಗೋವಾಗ ತಾಂಡವ್ ಗೂ ಎಚ್ಚರಿಕೆ ಕೊಟ್ಟಿದ್ದಾಳೆ.

ಇವತ್ತು ಹೇಳಲಿಲ್ಲ ಅಂತ ಖುಷಿ ಪಡಬೇಡಿ. ನೀವು ಬೇಗ ನಿಮ್ಮ ತಪ್ಪನ್ನ ಸರಿ ಮಾಡಿಕೊಳ್ಳದಿದ್ದರೆ ನಾನು ಏನು ಮಾಡೋಕೂ ಹಿಂಜರಿಯೋದಿಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾಳೆ ಹಿತಾ. ಆದರೆ ಹಿತಾಗೆ ಏನೂ ಮಾಡೋಕೆ ಸಾಧ್ಯ ಇಲ್ಲ ಅಂತ ಗರ್ವದಿಂದ ತಾಂಡವ್ ಹಿತಾಗೆ ಏನು ಮಾಡ್ತಿಯೋ ಮಾಡ್ಕೋ ಅಂತ ಚಾಲೆಂಜ್ ಹಾಕಿದ್ದಾನೆ.

ಇದನ್ನ ನೋಡಿದ ಪ್ರೇಕ್ಷಕರು ಮತ್ತು ನೆಟ್ಟಿಗರು ಇದನ್ನ ನಾವು ಮೊದಲೇ ಊಹೆ ಮಾಡಿದ್ವಿ. ಹಿತಾ ಇಷ್ಟು ಬೇಗ ನಿಜ ಹೇಳಿ ಬಿಟ್ಟರೆ ಸೀರಿಯಲ್ ಎಲ್ಲಿ ಮುಂದಕ್ಕೆ ಹೋಗುತ್ತೆ ಎಂದಿದ್ದಾರೆ. ಕೆಲವರು ಸೀರಿಯಲ್ ನ ರಬ್ಬರ್ ಬ್ಯಾಂಡ್‌ ತರ ಎಳೆಯೋದು ಬಿಡಲ್ಲ ಅಂತ ಸಹಾ ಕಾಮೆಂಟ್ ಗಳನ್ನು ಮಾಡಿರೋದನ್ನ ನೋಡಬಹುದಾಗಿದೆ.

Leave a Comment