Entertainment

Arun Yogiraj: ರಾಮನವಮಿಯಂದು ಬಾಲರಾಮನ ಮೂರ್ತಿ ಸೃಷ್ಟಿಕರ್ತ ಅರುಣ್ ಯೋಗಿರಾಜ್ ಜೊತೆಗೆ ಸಿಹಿ ಕಹಿ ಚಂದ್ರು

Arun Yogiraj : ಇಂದು ರಾಮನವಮಿಯನ್ನು (Rama Navami) ದೇಶದಾದ್ಯಂತ ಜನರು ತಮ್ಮದೇ ಪ್ರಾದೇಶಿಕ ಸಂಪ್ರದಾಯ ಗಳಲ್ಲಿ ಆಚರಿಸಿ ಶ್ರೀರಾಮನ ಆರಾಧನೆಯನ್ನು ಭಕ್ತಿಯಿಂದ ಮಾಡುತ್ತಿದ್ದಾರೆ. ಇದೇ ವೇಳೆ ಇಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Ayodhya Sri Ram Mandir) ಸೂರ್ಯ ತಿಲಕ ಕೂಡಾ ನಡೆದಿದ್ದು ಅಸಂಖ್ಯಾತ ಭಕ್ತವೃಂದ ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡು ರಾಮ ನಾಮವನ್ನು ಜಪಿಸಿದ್ದಾರೆ.

ಇಂದು ರಾಮನವಮಿಯ ಪರ್ವದಿನದಂದು ಕಿರುತೆರೆಯ ಜನಪ್ರಿಯ ಅಡುಗೆ ಕಾರ್ಯಕ್ರವಾದ ಬೊಂಬಾಟ್ ಭೋಜನದ (Bombat Bhojana) ರೂವಾರಿಯಾಗಿರುವ ಕನ್ನಡದ ಹಿರಿಯ ಹಾಸ್ಯ ನಟ, ಪೋಷಕ ಕಲಾವಿದರಾದ ಸಿಹಿ ಕಹಿ ಚಂದ್ರು (Sihi Kahi Chandru) ಅವರು ಬಾಲರಾಮನ ಮೂರ್ತಿಯ ಸೃಷ್ಟಿಕರ್ತನಾದ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಭೇಟಿ ಮಾಡಿದ್ದಾರೆ.

ಬೊಂಬಾಟ್ ಭೋಜನದ ಮನೆ ಊಟ ವಿಭಾಗದ ರಾಮನವಮಿ ವಿಶೇಷ ಎನ್ನುವಂತೆ ಸಿಹಿ ಕಹಿ ಚಂದ್ರ ಅವರು ಅರುಣ್ ಯೋಗಿರಾಜ್ (Arun Yogiraj) ಅವರ ಮನೆಗೆ ಭೇಟಿ ನೀಡಿ, ಯೋಗಿರಾಜ್ ಅವರ ಇಡೀ ಕುಟುಂಬವನ್ನು ಭೇಟಿ ಮಾಡಿ ರಾಮನವಮಿ ಹಬ್ಬವನ್ನು ಬಹಳ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಒಂದಷ್ಟು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಅರುಣ್ ಯೋಗಿರಾಜ್ ಅವರ ಮನೆಯ ಊಟವನ್ನು ಸವಿಯುವ ಮುನ್ನ ಚಂದ್ರು ಅವರು ಯೋಗಿರಾಜ್ ಅವರು ಉತ್ತರ ಪ್ರದೇಶದಲ್ಲಿದ್ದು ಬಾಲರಾಮನ ಮೂರ್ತಿ ಕೆತ್ತನೆ ಮಾಡುವ ವೇಳೆ ಅವರ ಅನುಭವ ಹಾಗೂ ಅನುಭೂತಿ ಹೇಗಿತ್ತು ಎನ್ನುವ ಒಂದಷ್ಟು ಬಹಳ ಆಸಕ್ತಿಕರ ವಿಚಾರಗಳನ್ನು ಮಾತನಾಡಿದ್ದು ವಿಶೇಷವಾಗಿತ್ತು.

ಅರುಣ್ ಯೋಗಿರಾಜ್ ಅವರು ತಮಗಾದ ಅನುಭವಗಳನ್ನು ಹಂಚಿಕೊಂಡು ಅದೆಲ್ಲವೂ ಕೂಡಾ ದೈವ ನಿರ್ಣಯ ಎಂದು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅರುಣ್ ಯೋಗಿರಾಜ್ ಅವರು ಸಿಹಿ ಕಹಿ ಚಂದ್ರು ಅವರು ತಮ್ಮ ಮನೆಗೆ ಭೇಟಿ ನೀಡಿದ್ದರಿಂದ ಬಹಳ ಖುಷಿಯಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಚಂದ್ರು ಅವರು ಸಹಾ ತಮ್ಮ ತಂಡದ ಕಡೆಯಿಂದ ಅರುಣ್ ಅವರನ್ನು ಸತ್ಕರಿಸಿದ್ದಾರೆ.

Soma Shekar

Recent Posts

Lakshmi Nivasa: ಬೇಸತ್ತು ಜಾಹ್ನವಿ ಪಾತ್ರಕ್ಕೆ ಚಂದನಾ ಗುಡ್ ಬೈ? ಹೊಸ ನಟಿ ಎಂಟ್ರಿ, ಏನಿದು ಶಾಕಿಂಗ್ ಸುದ್ದಿ

Lakshmi Nivasa: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಜಾಹ್ನವಿ ಪಾತ್ರ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು…

8 hours ago

Keerthi Suresh: ಬೋಲ್ಡ್ ಸೀನ್ ಮಾಡಲ್ಲ ಅಂದಿದ್ದ ಕೀರ್ತಿ ಈಗ ಆ ನಟನ ಜೊತೆ ಅಂತ ಸೀನ್ ಗೆ ಕೊಟ್ರು ಗ್ರೀನ್ ಸಿಗ್ನಲ್

Keerthi Suresh: ಮಹಾನಟಿ (Mahanati) ಸಿನಿಮಾದಲ್ಲಿ ಲೆಜೆಂಡರಿ ನಟಿ ಸಾವಿತ್ರಿ ಪಾತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು ನಟಿ ಕೀರ್ತಿ…

10 hours ago

Viral Video: ಸ್ಟಾರ್ ನಟಿ ಆದ್ರೆ ನಂಗೇನು? ಪಕ್ಕದಲ್ಲೇ ಇದ್ರು ಕೇರ್ ಮಾಡದ ಸ್ವಿಗ್ಗಿ ಡಿಲೆವರಿ ಬಾಯ್; ಹರಿದು ಬರ್ತಿದೆ ಮೆಚ್ಚುಗೆ

Viral Video: ಸಿನಿಮಾ ಸೆಲೆಬ್ರಿಟಿಗಳನ್ನು (Cinema Celebrities) ನೋಡಬೇಕು ಅವರ ಜೊತೆ ಮಾತನಾಡಬೇಕು ಮತ್ತು ಅವರ ಜೊತೆಗೆ ಒಂದು ಫೋಟೋ…

12 hours ago

Lakshmi Nivasa: ಜಾನು ಹೇಳಿದಿದ್ರು ಲಕ್ಷ್ಮೀಗೆ ಜಯಂತ್ ವಿಚಾರ ಗೊತ್ತಾಯ್ತು; ಮನಸ್ಸಲ್ಲೇ ಈಗ ಶುರುವಾಯ್ತು ಭಯ

Lakshmi Nivasa Serial: ಮಗಳು ಜಾಹ್ನವಿಗೆ ಎಷ್ಟು ಸಲ ಫೋನ್ ಮಾಡಿದ್ರು ಕನೆಕ್ಟ್ ಆಗ್ತಿಲ್ಲ ಅನ್ನೋ ಆತಂಕದಲ್ಲಿ ಲಕ್ಷ್ಮೀ ನಿವಾಸ…

14 hours ago

Hema Rave Party: ನಾನು ರೇವ್ ಪಾರ್ಟಿಲಿ ಇರಲಿಲ್ಲ ಅಂತ ವೀಡಿಯೋ ಮಾಡಿ ತಗ್ಲಾಕೊಂಡ್ರಾ ತೆಲುಗು ನಟಿ?

Rave Party : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಂತಹ ರೇವ್ ಪಾರ್ಟಿ (Rave Party) ವಿಚಾರ ದೇಶದಾದ್ಯಂತ ಮಾದ್ಯಮಗಳಲ್ಲಿ ಪ್ರಮುಖ…

15 hours ago

Amruthadhaare: ಗೌತಮ್ ಹೇಳದ ಸತ್ಯ ಭೂಮಿಕಾಗೆ ಗೊತ್ತಾಗೋ ಸಮಯ ಬಂದಾಯ್ತು; ಗೌತಮ್ ಮೌನ ಮುರಿಲೇಬೇಕು

Amruthadhaare Serial : ಅಮೃತಧಾರೆ ಸೀರಿಯಲ್ ನ (Amruthadhaare Serial) ಇತ್ತೀಚಿನ ಎಪಿಸೋಡ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡಿದೆ.…

17 hours ago

This website uses cookies.