Entertainment

Amruthadhaare : ಗೌತಮ್ ಮುಂದೆ ಬಯಲಾಯ್ತು ಭೂಮಿಕಾ ಮತ್ತು ಜೀವಾ ಸತ್ಯ; ಗೌತಮ್ ದೀವಾನ್ ಪ್ಲಾನ್ ಸಕ್ಸಸ್ ಆಯ್ತಾ?

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ನಾಯಕಿ ಭೂಮಿಕಾ ತಮ್ಮನಾಗಿರುವ ಜೀವ ಕೆಲವು ಕಾರಣಗಳಿಂದ ಫುಡ್ ಡೆಲಿವರಿ ಬಾಯ್ ಆಗಿ ಕೆಲಸವನ್ನ ಮಾಡುತ್ತಿದ್ದಾನೆ. ತಮ್ಮನಿಗೆ ತನ್ನ ಕಡೆಯಿಂದ ಆಗೋ ಸಹಾಯವನ್ನು ಮಾಡಬೇಕೆನ್ನುವ ಒಂದು ಒಳ್ಳೆಯ ಉದ್ದೇಶದಿಂದ ಭೂಮಿಕ ತನ್ನ ಒಡವೆಗಳನ್ನು ಅಡವಿಟ್ಟು ಜೀವನ ಕೈಗೆ ಹಣವನ್ನು ನೀಡ್ತಾಳೆ. ಗೌತಮ್ ದಿವಾನಿಗೆ ಈಗ ಈ ಎರಡು ವಿಷಯಗಳು ಗೊತ್ತಾಗಿದೆ. ಜೀವ ಡೆಲಿವರಿ ಬಾಯ್ ಆಗಿರೋದನ್ನ ಮತ್ತು ಭೂಮಿಕಾ ಒಡವೆಗಳನ್ನು ಅಡವಿಟ್ಟಿರುವ ವಿಚಾರವನ್ನು ತಿಳಿದುಕೊಂಡಿರುವ ಗೌತಮ್ ದಿವಾನ್ ಇಬ್ಬರನ್ನು ಏಕಕಾಲದಲ್ಲಿ ಪ್ರಶ್ನೆ ಮಾಡಿದ್ದಾನೆ.

ಜೀವನಿಗೆ (Jeeva) ಹಣದ ಸಹಾಯವನ್ನು ಮಾಡೋದಕ್ಕೆ ಭೂಮಿಕಾ ತನ್ನ ಗಂಡ ಗೌತಮ್ ಗೆ ಗೊತ್ತಾಗದ ಹಾಗೆ ಒಡವೆಯನ್ನ ಅಡವಿಟ್ಟು ಜೀವನ್ ಗೆ ಹಣವನ್ನು ನೀಡಿದ್ದಾಳೆ. ಆದರೆ ಜೀವನಿಗೆ ಅಕ್ಕ ಒಡವೆಗಳನ್ನು ಅಡ ಇಟ್ಟಿರೋ ವಿಷಯ ಗೊತ್ತಿಲ್ಲ. ಮತ್ತೊಂದು ಕಡೆ ಭೂಮಿಕಾ ಹೇಗಾದರೂ ಹಣವನ್ನು ಹೊಂದಿಸಿ ಅಡ ಇಟ್ಟಿರುವ ಚಿನ್ನವನ್ನು ಬಿಡಿಸಿಕೊಳ್ಳಬೇಕು ಅಂತ ಮತ್ತೆ ಕೋಚಿಂಗ್ ಸೆಂಟರ್ ನಲ್ಲಿ ಟೀಚರ್ ಆಗಿ ಕೆಲಸವನ್ನು ಶುರು ಮಾಡಿಕೊಂಡಿದ್ದಾಳೆ.

ಭೂಮಿಕಾ ಚಿನ್ನವನ್ನು ಅಡ ಇಟ್ಟಿರುವ ವಿಚಾರ ಗೌತಮ್ (Gowtham Deewan) ಆಪ್ತ ಸ್ನೇಹಿತನಿಗೆ ಮಾತ್ರ ಗೊತ್ತಿರುತ್ತೆ. ಆದರೆ ಈ ವಿಷಯ ಮಲತಾಯಿ ಶಕುಂತಲಾಗೆ ಗೊತ್ತಾದ ನಂತರ ಅದನ್ನೇ ಬಂದು ಅಸ್ತ್ರವನ್ನಾಗಿ ಬಳಸಿಕೊಂಡು ಗೌತಮ್ ಮತ್ತು ಭೂಮಿಕ ನಡುವೆ ಒಂದಷ್ಟು ವೈಮನಸ್ಸನ್ನ ಸೃಷ್ಟಿ ಮಾಡಬೇಕು ಅಂತ ಸಂಚು ಹೂಡಿದ ಶಕುಂತಲಾ, ಗೌತಮ್ ಹತ್ರ, ನಿನ್ನ ಹೆಂಡ್ತಿಗೆ ಆರ್ಥಿಕ ಸಮಸ್ಯೆ ಇದ್ದ ಹಾಗೆ ಕಾಣುತ್ತೆ, ಒಡವೆ ಅಡ ಇಟ್ಟಿದ್ದಾಳೆ ಅನ್ನೋ ವಿಚಾರವನ್ನು ಹೇಳಿದ್ದಾಳೆ.

ಭೂಮಿಕಾ ಚಿನ್ನವನ್ನು ಅಡ ಇಟ್ಟಿರೋ ವಿಚಾರ ತಿಳಿದು ಗೌತಮ್ ಗೆ ಬೇಸರವಾಗಿದೆ. ಭೂಮಿಕಾನ ಕೋಚಿಂಗ್ ಸೆಂಟರ್ ಗೆ ಡ್ರಾಪ್ ಮಾಡಿದ ನಂತರ ಅಲ್ಲೇ ಹತ್ತಿರದ ಪಾರ್ಕಿನಲ್ಲಿ ಆಫೀಸ್ ನವರ ಜೊತೆ ಮೀಟಿಂಗ್ ಮಾಡಿದ ಗೌತಮ್ ದಿವಾನ್ ಆಫೀಸಿನವರಿಗೆ ಊಟ ಕೊಡಿಸೋ ನೆಪವೊಡ್ಡಿ ಫುಡ್ ಆರ್ಡರ್ ಇನ್ನ ಮಾಡಿದ್ದಾನೆ. ಈ ವೇಳೆ ಫುಡ್ ಡೆಲಿವರಿ ನೀಡೋದಕ್ಕೆ ಜೀವ ಬಂದಿದ್ದು, ತನ್ನ ಮುಖವನ್ನು ಮುಚ್ಚಿಕೊಂಡು ಭಾವನಿಗೆ ಗೊತ್ತಾಗದ ಹಾಗೆ ಫುಡ್ ಡೆಲವರಿ ಮಾಡುವ ಪ್ರಯತ್ನ ಮಾಡಿದ್ದಾನೆ.

ನಂತರ ಭೂಮಿಕ ಮತ್ತು ಜೀವ ಇಬ್ಬರು ಹೇಗೋ ಗೌತಮ್ ಇಂದ ಆ ಕ್ಷಣದಲ್ಲಿ ತಪ್ಪಿಸಿಕೊಂಡವು ಅಂತ ಆಲೋಚನೆ ಮಾಡಿ ನಿಟ್ಟಿಸಿರು ಬಿಡುವಾಗಲೇ ಅಲ್ಲಿಗೆ ಬಂದ ಗೌತಮ್ ಡೆಲಿವರಿ ಬಾಯ್ ಜೀವನನ್ನ ಗುರುತಿಸಿದ್ದಾನೆ. ಬಹುಶಃ ಗೌತಮ್ ಎಲ್ಲ ವಿಚಾರವನ್ನು ತಿಳಿದುಕೊಂಡೆ ಇಂತಹ ಒಂದು ಪ್ಲಾನ್ ಮಾಡಿದ್ನಾ ? ಭೂಮಿಕಾ ಮತ್ತು ಜೀವನ್ನ ಗೌತಮ್ ಕ್ಷಮಿಸ್ತಾನಾ? ಸತ್ಯವನ್ನ ತನಗೆ ಯಾಕೆ ಹೇಳಲಿಲ್ಲ ಅಂತ ಪ್ರಶ್ನೆಯನ್ನು ಮಾಡ್ತಾನಾ? ಅನ್ನೋದನ್ನ ಕಾದು ನೋಡಬೇಕಾಗಿದೆ.

Soma Shekar

Recent Posts

Cannes 2024: ಗೋಲ್ಡನ್ ಆಸ್ಕರ್ ನಂತೆ ಕಂಡ ಶೋಭಿತಾ, ಅಂದದ ಪ್ರವಾಹ ಇದು ಎಂದ ಫ್ಯಾನ್ಸ್

Cannes 2024 : ಕಾನ್ ಸಿನಿಮೋತ್ಸವಕ್ಕೆ (Cannes 2024) ಅದರದ್ದೇ ಆದ ಒಂದು ವಿಶೇಷತೆ ಇದೆ. ಈ ಸಿನಿಮಾ ಉತ್ಸವದ…

12 hours ago

Pavithra Jayaram: ಚಂದು ಪವಿತ್ರಾ ಬಗ್ಗೆ ಹೊರ ಬಂದ ಸುದ್ದಿಗಳು, ಚಂದು ಸಾವಿನ ಬೆನ್ನಲ್ಲೇ ಪವಿತ್ರಾ ಅವರ ಪುತ್ರನ ಸ್ಪಷ್ಟನೆ

Pavithra Jayaram: ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಹೆಸರನ್ನು ಮಾಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram) ಅವರು ಕೆಲವೇ…

13 hours ago

Anushka Shetty: ಕೂಡಿ ಬಂತು ಕಂಕಣ ಭಾಗ್ಯ; ಕನ್ನಡದವರನ್ನೇ ಮದ್ವೆ ಆಗಲಿರುವ ಅನುಷ್ಕಾ, ಫ್ಯಾನ್ಸ್ ಖುಷಿ

Anushka Shetty: ಸಿನಿಮಾ ಸೆಲೆಬ್ರಿಟಿಗಳ ಮದುವೆ ವಿಚಾರಗಳ ಕುರಿತಸಗಿ ಆಗಾಗ ಕೆಲವೊಂದು ಸುದ್ದಿಗಳು ಹೊರ ಬರುತ್ತಲೇ ಇರುತ್ತದೆ. ಅದರಲ್ಲೂ ಸ್ಟಾರ್…

16 hours ago

Shanti Williams: ಗರ್ಭಿಣಿ ಆಗಿದ್ರೂ ಹಣ ಕೊಟ್ಟಿದ್ದೆ: ನಟ ಮೋಹನ್ ಲಾಲ್ ಇನ್ನೊಂದು ಮುಖ ತೋರಿಸಿದ ಹಿರಿಯ ನಟಿ

Shanti Williams: ಮಲೆಯಾಳಂ ಸಿನಿಮಾ ರಂಗದ ಹಿರಿಯ ನಟಿ, ಪ್ರಸ್ತುತ ಸಿನಿಮಾ ರಂಗದಿಂದ ದೂರವೇ ಉಳಿದಿರುವ ನಟಿ ಶಾಂತಿ ವಿಲಿಯಮ್ಸ್…

17 hours ago

Amruthadhaare: ಮಲ್ಲಿಗೆ ಸ್ಕೆಚ್ ಹಾಕಿದ ಜೈದೇವ್, ಆದ್ರೆ ಆಗಿದ್ದು ಮಾತ್ರ ಬೇರೆ, ಮಹಿಮಾ ಎಂಟ್ರಿ ಶಕುಂತಲಾ ಶಾಕ್

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿನ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಮಲ್ಲಿಯನ್ನು ಮುಗಿಸಲು ಜೈದೇವ್…

19 hours ago

Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…

1 day ago

This website uses cookies.