SeethaRama Serial: ಸೀತಾರಾಮನ ಮದುವೆ ಮುಗೀತು; ಇನ್ನು ಭಾರ್ಗವಿ ಹೊಸ ಆಟಕ್ಕೆ ಸಿಹಿಯೇ ದಾಳ

Written by Soma Shekar

Published on:

---Join Our Channel---

SeethaRama Serial: ವೈಷ್ಣವಿ ಗೌಡ (Vaishnavi Gowda), ಗಗನ್ ಚಿನ್ನಪ್ಪ (Gagan Chinnappa), ಪವಿತ್ರ ಲೋಕೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿರುವ ಕನ್ನಡದ ಜನಪ್ರಿಯ ಸೀರಿಯಲ್ ಸೀತಾ ರಾಮದಲ್ಲಿ (SeethaRama Serial) ಸಿಹಿಗೆ ಅಪ್ಪ ಬಂದರೆ ಸೀತಮ್ಮ ತನ್ನಿಂದ ದೂರ ಆಗ್ತಾಳೆ ಅನ್ನೋ ಭಯ ದೂರಾಗಿದೆ. ಆದರೆ ರಾಮನಿಂದ ಅವಳ ಆ ಭಯ ದೂರಾಗಿದೆ. ಸೀತಾ ರಾಮ್ ಇಬ್ಬರೂ ಸಪ್ತಪದಿ ತುಳಿದು ಹೊಸ ಜೀವನದ ಶುಭಾರಂಭವನ್ನು ಮಾಡಿದ್ದಾರೆ.

ಆದರೆ ಈಗ ಭಾರ್ಗವಿಯ (Bhargavi) ಆಟಕ್ಕೆ ಸಿಹಿ ದಾಳವಾಗೋ ಹಾಗೆ ಕಾಣ್ತಿದೆ. ಮದುವೆ ನಂತರ ಸೀತಾ ಜೀವನ ಹಾಳು ಮಾಡೋ ಯೋಚನೆ ಮಾಡಿದ್ದ ಭಾರ್ಗವಿಗೆ ಈಗ ಸಿಹಿ ಅನ್ನೋ ದಾಳ ಸಿಕ್ಕಾಗಿದೆ‌. ಫ್ಯಾಮಿಲಿ ಫೋಟೋದಲ್ಲಿ ಸಿಹಿ ಬಾರದಂತೆ ಪ್ಲಾನ್ ಮಾಡಿದ್ದಾಳೆ ಭಾರ್ಗವಿ.‌ ಸೀತಾ ರಾಮ ಇಬ್ಬರ ಫೋಟೋ ನಿನಗೆ ಬೇಕಲ್ವಾ? ನೀನು ಅವರ ಹತ್ರ ಬರಬೇಡ, ನಾನು ನೀನು ಆಮೇಲೆ ಫೋಟೋ ತಗೊಳ್ಳೋಣ ಎಂದಿದ್ದಾಳೆ.

ಎಲ್ಲಾ ಸೇರಿ ಫ್ಯಾಮಿಲಿ ಫೋಟೋ ತಗೊಳೋವಾಗ ಅದರಲ್ಲಿ ಸಿಹಿ ಮಾತ್ರ ಇಲ್ಲ. ಸಿನಿ ಒಂದು ಮೂಲೆಯಲ್ಲಿ ಕೂತಿದ್ದಾಳೆ. ಫ್ಯಾಮಿಲಿ ಫೋಟೋ ತಗೊಳ್ಳೋ ಖುಷಿ ಹಾಗೂ ಸಂಭ್ರಮದ ಮಧ್ಯೆ ಯಾರಿಗೂ ಕೂಡಾ ಸಿನಿ ನೆನಪಾಗಲೇ ಇಲ್ಲ. ಆದರೆ ಮದುವೆಯಲ್ಲಿ ಏಳು ಸುತ್ತಿನ ನಂತರ ರಾಮ ಸಿಹಿ ಗಾಗಿ ಎಂಟನೇ ಸುತ್ತು ಸುತ್ತಿದ್ದ.

ನಾನು ಮತ್ತು ಸೀತಾ ಒಂದಾಗೋಕೆ ಸಿಹಿ ಅನ್ನೋ ಪುಟ್ಟ ಜೀವ ಕಾರಣ. ನಾನು ಎಂಟನೇ ಸುತ್ತನ್ನು ಸಿಹಿ ಹೆಸರಿನಲ್ಲಿ ತುಳಿಯುತ್ತಿದ್ದೇನೆ ಎನ್ನುವ ಮಾತನ್ನು ರಾಮ್ ಹೇಳಿದ್ದ. ಇದು ರಾಮ್, ಸೀತಾ ಮತ್ತು ಸಿಹಿಗೆ ಖುಷಿಯನ್ನು ನೀಡಿತ್ತು. ಆದರೆ ಈಗ ಅದೇ ಸಿಹಿಯನ್ನು ಇಟ್ಟುಕೊಂಡೇ ಭಾರ್ಗವಿ ತನ್ನ ಮುಂದಿನ ಕುತಂತ್ರಗಳನ್ನು ಹೆಣೆಯಲು ಯೋಜನೆ ಸಿದ್ಧ ಮಾಡಿರುವುದು ಸ್ಪಷ್ಟವಾಗಿದೆ.

ಸೀತಾ ರಾಮ್ ನಿಂದ ಸಿಹಿಯನ್ನು ದೂರ ಮಾಡುವುದೇ ಸದ್ಯಕ್ಕೆ ಭಾರ್ಗವಿ ಪ್ಲಾನ್ ಆಗಿದೆ. ರಾಮ್ ನಿಂದ ಸೀತಾಗೆ ವರ್ಗಾವಣೆ ಆಗೋ ಆಸ್ತಿಯನ್ನ ತಾನು ಲಪಾಟಿಯಿಸೋದು ಭಾರ್ಗವಿ ಉದ್ದೇಶವಾಗಿದೆ. ಈಗ ಸೀರಾ ರಾಮನ ಮದುವೆ ಆಗಿದೆ. ಮುಂದೆ ಭಾರ್ಗವಿ ತನ್ನ ಗುರಿ ತಲುಪೋಕೆ ಈ ಮೂವರಿಗೆ ಏನೆಲ್ಲಾ ತೊಂದರೆ ಕೊಡ್ತಾಳೆ ಅನ್ನೋದೇ ರೋಚಕತೆಯನ್ನ ಮೂಡಿಸಿದೆ.

Leave a Comment