Sreeleela: ಸಾಲು ಸಾಲು ಸೋಲು, ಕಂಗೆಟ್ಟ ನಟಿ, ಮತ್ತೊಂದು ಅವಕಾಶ ಕೊಟ್ಟ ಸ್ಟಾರ್ ನಟ, ಅದೃಷ್ಟ ಬದಲಿಸ್ತಾರಾ?

Written by Soma Shekar

Published on:

---Join Our Channel---

Sreeleela: ಟಾಲಿವುಡ್ ನಲ್ಲಿ (Tollywood) ಮೊದಲ ಸಿನಿಮಾದಲ್ಲಿ ಗೆಲುವನ್ನು ಕಾಣದೇ ಇದ್ದರೂ ನಟಿ ಶ್ರೀ ಲೀಲಾ (Sreeleela) ಮಾತ್ರ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಮಾತ್ರವೇ ಅಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ ಸ್ಟಾರ್ ಗಳ ಜೊತೆಯಲ್ಲಿ ನಾಯಕಿಯಾಗಿ ಆಯ್ಕೆಯಾದರು. ಒಂದೇ ಸಮಯದಲ್ಲಿ ಏಳೆಂಟು ಸಿನಿಮಾಗಳಲ್ಲಿ ಶ್ರೀಲೀಲಾ ಹೆಸರು ಕೇಳಿ ಬಂದಾಗ ಅದು ತೆಲುಗು ಸಿನಿಮಾ ರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಶ್ರೀಲೀಲಾ ಮುಂಬರುವ ದಿನಗಳಲ್ಲಿ ಸ್ಟಾರ್ ನಟಿಯರಿಗೆ ದೊಡ್ಡ ಸ್ಪರ್ಧೆ ಮತ್ತು ಪೈಪೋಟಿಯನ್ನು ಕೊಡ್ತಾರೆ ಅಂತ ಅಂದಾಜು ಮಾಡಲಾಗಿತ್ತು..

ಆದರೆ ನಿರೀಕ್ಷೆಗಳು ಸುಳ್ಳಾಯಿತು. ರವಿತೇಜ (Raviteja) ಜೊತೆಯಲ್ಲಿ ನಟಿಸಿದ ಧಮಾಕ (Dhamaka) ಸಿನಿಮಾದ ನಂತರ ಶ್ರೀ ಲೀಲಾ ನಾಯಕಿಯಾಗಿ ಕಾಣಿಸಿಕೊಂಡ ಹೊಸ ಸಿನಿಮಾಗಳು ಸೋಲಿನ ಹಾದಿಯನ್ನು ಹಿಡಿದವು. ಕಳೆದ ವರ್ಷ ತೆಲುಗಿನಲ್ಲಿ ಶ್ರೀಲೀಲಾ ಕಾಣಿಸಿಕೊಂಡಂತಹ ಭಗವಂತ ಕೇಸರಿ, ಎಕ್ಸ್ಟ್ರಾರ್ಡಿನರಿ ಮ್ಯಾನ್, ಸ್ಕಂದ ಮತ್ತು ಆದಿಕೇಶವ ಸಿನಿಮಾಗಳು ಬಿಡುಗಡೆಯ ನಂತರ ಹೆಚ್ಚು ಸದ್ದನ್ನ ಮಾಡಲಿಲ್ಲ.

ಇವುಗಳ ನಂತರ ಮಹೇಶ್ ಬಾಬು ಜೊತೆಯಲ್ಲಿ ಕಾಣಿಸಿಕೊಂಡ ಗುಂಟೂರು ಕಾರಂ ಸಿನಿಮಾ ಸಹಾ ಸೋಲಿನ ಹಾದಿಯನ್ನು ಹಿಡಿಯಿತು. ನಂತರ ವಿಜಯ ದೇವರಕೊಂಡ ಜೊತೆಗೆ ಶ್ರೀಲೀಲಾ ನಟಿಸಬೇಕಾಗಿದ್ದ ಹೊಸ ಸಿನಿಮಾದಲ್ಲಿ ಬೇರೊಬ್ಬ ನಾಯಕಿಯ ಎಂಟ್ರಿ ಆಗಿದೆ ಎನ್ನುವ ಸುದ್ದಿಗಳು ಹೊರಬಂದವು. ಪ್ರಸ್ತುತ ಮಾಹಿತಿಗಳ ಪ್ರಕಾರ ಶ್ರೀಲೀಲಾ ಕೈಯಲ್ಲಿ ಸದ್ಯಕ್ಕೆ ಪವನ್ ಕಲ್ಯಾಣ್ ಜೊತೆಗೆ ನಟಿಸುತ್ತಿರುವ ಉಸ್ತಾದ್ ಭಗತ್ ಸಿಂಗ್ (Ustad Bhagat Singh) ಸಿನಿಮಾ ಮಾತ್ರವೇ ಇದೆ.

ಹೊಸ ನಿರ್ಮಾಪಕರು ಮತ್ತು ನಿರ್ದೇಶಕರು ನಟಿಯನ್ನ ತಮ್ಮ ಸಿನಿಮಾಗಳಿಗೆ ಆಯ್ಕೆ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಸುದ್ದಿಗಳಾಗಿದೆ. ಆದರೆ ಈಗ ಇವೆಲ್ಲವುಗಳ ಬೆನ್ನಲ್ಲೇ ಮತ್ತೊಂದು ಹೊಸ ಅಪ್ಡೇಟ್ ಹೊರಗೆ ಬಂದಿದೆ, ಹೊಸ ಸಿನಿಮಾ ಒಂದಕ್ಕೆ ಶ್ರೀ ಲೀಲಾ ಒಪ್ಪಿದ್ದಾರೆ ಎನ್ನಲಾಗಿದೆ. ಹೌದು, ಎರಡನೇ ಬಾರಿಗೆ ಮಾಸ್ ಮಹಾರಾಜ ಖ್ಯಾತಿಯ ರವಿತೇಜ ಜೊತೆಗೆ ತೆರೆಯನ್ನು ಹಂಚಿಕೊಳ್ಳಲು ನಟಿ ಸಜ್ಜಾಗಿದ್ದಾರೆ.

ಇದೊಂದು ಆಕ್ಷನ್ ಎಂಟರ್ಟೈನರ್ ಸಿನಿಮಾ ಆಗಲಿದ್ದು ಧಮಾಕದ ನಂತರ ಸೋಲಿನ ಹಾದಿ ತುಳಿದಿದ್ದ ನಟಿಗೆ ಮತ್ತೆ ನಟ ರವಿತೇಜ ಅವರ ಜೊತೆಯಲ್ಲೇ ಮತ್ತೊಂದು ದೊಡ್ಡ ಸಕ್ಸಸ್ ಸಿಗಬಹುದೇನೋ ಎನ್ನುವ ನಿರೀಕ್ಷೆಗಳು ಈಗ ಮೂಡಿದೆ. ಟಾಲಿವುಡ್ ನಲ್ಲಿ ಇತ್ತೀಚಿನ‌ ದಿನಗಳಲ್ಲಿ ಪೂಜಾ ಹೆಗ್ಡೆ ನಂತರ ಸಾಲು ಸಾಲು ಸಿನಿಮಾಗಳ ಸೋಲನ್ನು ಕಂಡ ನಟಿಯಾಗಿದ್ದಾರೆ ಶ್ರೀಲೀಲಾ.

Leave a Comment