Amruthadhaare Serial : ಅಮೃತಧಾರೆ ಸೀರಿಯಲ್ ನಲ್ಲಿ (Amruthadhaare Serial) ಮತ್ತೆ ಹೊಸದೊಂದು ಟ್ವಿಸ್ಟ್ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ. ಕೆಲವೇ ದಿನಗಳ ಹಿಂದಿನ ಎಪಿಸೋಡ್ ಗಳಲ್ಲಿ ಗೌತಮ್ ಮತ್ತು ಭೂಮಿಕಾ ಅವರನ್ನು ದೂರ ಇಡಬೇಕಂತ ಮಸಲತ್ತು ಮಾಡಿ ಶಾಸ್ತ್ರಿಗಳಿಂದ ಸುಳ್ಳು ಜಾತಕವನ್ನು ಹೇಳಿಸಿ, ಗೌತಮ್ ತಲೆ ಕೆಡಿಸಿದ್ದಾಳೆ ಶಕುಂತಲಾದೇವಿ. ಭೂಮಿಕಾ ಮೇಲಿನ ಪ್ರೀತಿಯಿಂದಾಗಿ ಗೌತಮ್ ಇದ್ಯಾವುದು ಭೂಮಿಕಾಗೆ ಗೊತ್ತಾಗೋದು ಬೇಡ ಅಂತ ಏನನ್ನೂ ಹೇಳದೇ, ಭೂಮಿಕಾಗಾಗಿ ದೇವಾಲಯದಲ್ಲಿ ಉರುಳು ಸೇವೆ, ನೆಲದ ಮೇಲೆ ಊಟ ಮಾಡೋಂತ ಪೂಜೆಗಳನ್ನು ಮಾಡು ಆರೋಗ್ಯ ಹಾಳು ಮಾಡಿಕೊಂಡಿದ್ದು, ಭೂಮಿಕಾ ಭಾವುಕಳಾಗುವಂತೆ ಮಾಡಿದೆ.
![](https://news9kannada.com/wp-content/uploads/2024/04/20240411_161122-1024x576.webp)
ಆದರೆ ಇವೆಲ್ಲವುಗಳ ನಂತರ ಕಥೆಯಲ್ಲಿ ಟ್ವಿಸ್ಟ್ ಅನ್ನೋ ಹಾಗೆ ಶಕುಂತಲಾ ದೇವಿಯ ಕುತಂತ್ರ ಹಾಗೂ ಕುಯುಕ್ತಿಯ ಬಗ್ಗೆ ತಿಳ್ಕೊಂಡ ಮಲ್ಲಿ ಭೂಮಿಕಾಗೆ ಎಲ್ಲಾ ವಿಚಾರವನ್ನು ಹೇಳಿದ್ದಾಗಿದೆ. ಶಕುಂತಲಾ ದೇವಿ ಹೇಗೆ, ಯಾಕೆ ಸುಳ್ಳು ಜಾತಕ ಹೇಳಿಸಿದ್ದಾಳೆ ಅನ್ನೋದನ್ನ ಮಲ್ಲಿ ಭೂಮಿಕಾಗೆ ತಿಳಿಸಿದ್ದಾಳೆ. ಭೂಮಿಕಾಗೆ ಗೌತಮ್ ದೇವಸ್ಥಾನದಲ್ಲಿ ಕಷ್ಟಪಟ್ಟಿದ್ದರ ಹಿಂದಿನ ಅಸಲಿ ವಿಚಾರ ಗೊತ್ತಾಗಿದೆ.
![](https://news9kannada.com/wp-content/uploads/2024/04/20240411_161430-1024x576.webp)
ಅಲ್ಲದೇ ಭೂಮಿಕಾ ಮತ್ತು ಅವರ ತಾಯಿ ಮಂದಾಕಿನಿ ತಮ್ಮ ಗುರುಗಳ ಹತ್ರ ಹೋಗಿ ಮತ್ತೊಮ್ಮೆ ಜಾತಕವನ್ನು ತೋರಿಸಿ, ವಿಷಯ ಏನಂತ ಹೇಳಿದ್ದಾರೆ. ಮಂದಾಕಿನಿ ಅವರು ಇದೊಂದರ ಮರು ಮೌಲ್ಯ ಮಾಪನದ ತರ ಅಂತ ಹೇಳಿದ್ದಾರೆ. ಜಾತಕ ನೋಡಿದ ಗುರುಗಳು ನಾನು ಈ ಹಿಂದೆ ಹೇಳಿದ ಹಾಗೆ ಅವರಿಬ್ಬರ ಜಾತಕ ಅದ್ಭುತವಾಗಿದೆ ಮತ್ತು ಅದರಲ್ಲಿ ಯಾವುದೇ ರೀತಿಯ ದೋಷಗಳು ಇಲ್ಲವೆಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
![](https://news9kannada.com/wp-content/uploads/2024/04/bhumika_1712806704279_1712806712130-jpeg.webp)
ಅಲ್ಲದೇ ಭೂಮಿಕಾ ಕೂಡಾ ಅತ್ತೆ ಶಕುಂತಲಾ ದೇವಿಗೆ ಮಾತ್ರೆ ಕೊಟ್ಟು ಪರೀಕ್ಷೆ ಮಾಡಿದ್ದಾಳೆ. ಶಕುಂತಲಾ ದೇವಿ ಮಾತ್ರೆ ನುಂಗ್ತಿಲ್ಲ, ಮಾತ್ರೆ ನುಂಗೋ ತರ ನಾಟಕ ಆಡ್ತಾ ಇದ್ದಾಳೆ ಅನ್ನೋದು ಕೂಡಾ ಸ್ಪಷ್ಟವಾಗಿದೆ. ಇನ್ನು ಭೂಮಿಕಾ ಮುಂದೆ ಏನ್ಮಾಡ್ತಾಳೆ? ಭೂಮಿಕಾ ತನ್ನ ಆಟವನ್ನು ಪ್ರಾರಂಭಿಸೋಕೆ ಇದು ಸೂಕ್ತ ಸಮಯ ಅಂತಿದ್ದಾರೆ ನೆಟ್ಟಿಗರು. ಅಲ್ಲದೇ ಭೂಮಿಕಾ ಶಕುಂತಲಾ ದೇವಿಗೆ ಹೇಗೆ ಬುದ್ಧಿ ಕಲಿಸ್ತಾಳೆ ಅನ್ನೋದನ್ನ ನೋಡೋಕೆ ಪ್ರೇಕ್ಷಕರು ಕುತೂಹಲರಾಗಿದ್ದಾರೆ.