Shravani Subramanya: ನುಚ್ಚು ನೂರಾದ ಶ್ರಾವಣಿ ಕನಸು, ಮರ್ಯಾದೆ ಉಳಿಸಿದ್ರು ಕರಗಲಿಲ್ಲ ವೀರೇಂದ್ರನ ಮನಸ್ಸು

Written by Soma Shekar

Published on:

---Join Our Channel---

Shravani Subramanya: ಶ್ರಾವಣಿ ಸುಬ್ರಮಣ್ಯ (Shravani Subramanya) ಸೀರಿಯಲ್ ನಲ್ಲಿ ಪ್ರೆಸ್ ಕಾನ್ಫರೆನ್ಸ್ ವೇಳೆಯಲ್ಲಿ ಪತ್ರಕರ್ತನ ವೇಷದಲ್ಲಿ ಕುಳಿತ ವಿಲನ್ ಕಡೆಯವನು ಶ್ರಾವಣಿಯ ಕುರಿತಾಗಿ ವೀರೇಂದ್ರ ಸರ್ದೇಸಾಯಿ ಬಳಿ ಪ್ರಶ್ನೆಗಳನ್ನು ಕೇಳಿ ಮುಜುಗರವನ್ನು ಉಂಟು ಮಾಡುತ್ತಾನೆ. ಆ ಸಂದರ್ಭದಲ್ಲಿ ಅಲ್ಲಿಗೆ ಬರುವ ಶ್ರಾವಣಿ ಎಲ್ಲರ ಮುಂದೆ ಅಪ್ಪನ ಬಗ್ಗೆ ಹಾಡಿ ಹೊಗಳಿ ಅಪ್ಪಂದಿರ ದಿನ ಇವತ್ತು ಅಂತ ಹೇಳಿ ತನ್ನ ಅಪ್ಪನಿಗೆ ಪ್ರೀತಿಯ ಕೈತುತ್ತನ್ನ ನೀಡಿ ಸಂತೋಷ ಪಡ್ತಾಳೆ.

ಇಂತಹದೊಂದು ಖುಷಿಗೆ ಕಾರಣವಾದ ಸುಬ್ಬುಗೆ ಅವಳು ಧನ್ಯವಾದಗಳನ್ನ ಸಹಾ ಹೇಳ್ತಾಳೆ. ಇದೆಲ್ಲಾ ನಡೆದ ಮೇಲೆ ಸಾರ್ವಜನಿಕವಾಗಿ ತನ್ನ ಮರ್ಯಾದೆಯನ್ನು ಕಾಪಾಡಿದ ಶ್ರಾವಣಿ ಮೇಲೆ ವೀರೇಂದ್ರನ (Veerendra) ಆಲೋಚನೆ ಮತ್ತು ಅಭಿಪ್ರಾಯಗಳು ಬದಲಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದ ಪ್ರೇಕ್ಷಕರಿಗೆ ದೊಡ್ಡ ಶಾಕ್ ಆಗಿದೆ. ಏಕೆಂದರೆ ಎಲ್ಲಾ ನಿರೀಕ್ಷೆಗಳು ಸುಳ್ಳಾಗಿದೆ. ಶ್ರಾವಣಿಯ ಆಸೆಗಳು ಮತ್ತು ಕನಸುಗಳು ಮತ್ತೆ ನುಚ್ಚು ನೂರಾಗಿದೆ.

ಪ್ರೆಸ್ ಕಾನ್ಫರೆನ್ಸ್ ನಿಂದ ಬಂದ ಮೇಲೆ ವೀರೇಂದ್ರ ಆಡುವ ಮಾತುಗಳನ್ನು ಕೇಳಿ ಸಹೋದರ ಸುರೇಂದ್ರ ಚಿಂತೆಗೀಡಾಗ್ತಾನೆ. ಮಾರನೇ ದಿನ ವೀರೇಂದ್ರ ಮಂಕಾಗಿರೋದನ್ನ ನೋಡಿ ಯಾಕೆ ಹೀಗಿರೋದು ಅಂತ ಸುರೇಂದ್ರ ವಿಚಾರ ಮಾಡ್ತಾನೆ. ವೀರೇಂದ್ರ ಆಗ ಅವಳ ನೆರಳು ಕೂಡಾ ನನ್ನ ಮೇಲೆ ಬೀಳಬಾರದು ಅಂದುಕೊಂಡಿದ್ದೆ. ಆದರೆ ನಿನ್ನೆ ಅವಳು ಅಷ್ಟೆಲ್ಲಾ ಮಾತಾಡ್ತಿದ್ರು ಏನು ಮಾಡಲಾಗದ ಅಸಹಾಯಕ ಸ್ಥಿತಿ ತಲುಪಿದ್ದೆ.

ಅವಳು ತಿನಿಸಿದ ಒಂದೊಂದು ತುತ್ತು ವಿಷ ಆಗಿತ್ತು ಅಂತ ಹೇಳ್ತಾನೆ.‌ ಈ ಮಾತನ್ನು ಕೇಳಿ ವಿಜಯಾಂಬಿಕೆ ಮತ್ತು ಮದನ್ ಖುಷಿಪಡುವಾಗಲೇ ಇದನ್ನೆಲ್ಲಾ ನೋಡಿ ಬೇಸರ ಕಟ್ಕೊಂಡಿದ್ದಾಳೆ ಶ್ರಾವಣಿ. ಅಪ್ಪನ ಹತ್ರ ಬಂದು, ಇತ್ತೀಚಿಗೆ ನಡೆದಿದ್ದೆಲ್ಲಾ ನೋಡಿ ನೀವು ನನ್ನ ವಿಚಾರದಲ್ಲಿ ಬದಲಾಗ್ತಾ ಇದ್ದೀರಿ ಅಂದ್ಕೊಂಡಿದ್ದೆ. ಆದರೆ ಇವತ್ತು ನಿಮ್ಮ ಮಾತು ಕೇಳಿ ನನಗೆ ಎಲ್ಲಾ ಅರ್ಥ ಆಯ್ತು. ಇನ್ಯಾವತ್ತೂ ನಾನು ನಿಮಗೆ ತೊಂದರೆ ಕೊಡಲ್ಲ ಕ್ಷಮಿಸಿ ಅಂತ ಹೇಳ್ತಾಳೆ.

ಎಲ್ಲರ ಎದುರು ತನ್ನ ಮಾನವನ್ನ ಉಳಿಸಿದ್ರೂ ಕೂಡಾ ವೀರೇಂದ್ರನಿಗೆ ಶ್ರಾವಣಿ ಮೇಲೆ ಸ್ವಲ್ಪ ಕೂಡಾ ಪ್ರೀತಿ ಮೂಡಲಿಲ್ಲ. ಇನ್ನು ಮುಂದೆ ಶ್ರಾವಣಿ ಅಪ್ಪನ ಮನಸ್ಸನ್ನು ಗೆಲ್ಲೋದಕ್ಕೆ ಪ್ರಯತ್ನವನ್ನು ಮಾಡ್ತಾಳಾ ಅಥವಾ ಕಾಲವೇ ಎಲ್ಲದಕ್ಕೂ ಉತ್ತರವನ್ನು ಹೇಳುತ್ತಾ ಅಂದ್ಕೊಂಡು ಸುಮ್ಮನೆ ಆಗ್ತಾಳಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment