Shravani Subramanya: ಶ್ರೀವಲ್ಲಿ ಚಾಣಾಕ್ಷತನ, ಶ್ರಾವಣಿ ರೌದ್ರಾವತಾರ, ಬೆಚ್ಚಿ ನಡುಗಿನ ವಿಜಯಾಂಬಿಕಾ, ಮದನ್

Written by Soma Shekar

Published on:

---Join Our Channel---

Shravani Subramanya: ಕನ್ನಡ ಕಿರುತೆರೆಯಲ್ಲಿ ಆರಂಭವಾದ ಅಲ್ಪ ಸಮಯದಲ್ಲೇ ಟಾಪ್ ಸೀರಿಯಲ್ ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್. ಕಥೆಯಲ್ಲಿ ನಾಯಕಿ ಶ್ರಾವಣಿಯನ್ನ ಆ್ಯ ಕ್ಸಿ ಡೆಂಟ್ ಕೇಸ್ ನಲ್ಲಿ ಸಿಕ್ಕಿಹಾಕಿಸೋಕೆ ಶ್ರಾವಣಿ ಅವರ ಅತ್ತೆ ಮತ್ತು ಅತ್ತೆ ಮಗ ಮದನ್ ಪ್ಲಾನ್ ಮಾಡ್ತಾರೆ. ಆದ್ರೆ ಸುಬ್ಬು ತಾನೇ ಆ್ಯಕ್ಸಿಡೆಂಟ್ ಮಾಡಿದ್ದು ಅಂತ ಸುಳ್ಳು ಹೇಳಿ ಶ್ರಾವಣಿ ಬದಲಾಗಿ ತಾನು ಜೈಲಿಗೆ ಸೇರಿದ್ದಾನೆ.

ಈ ವಿಷಯ ತಿಳಿದು ತಮ್ಮ ಪ್ಲಾನ್ ಹಾಳಾಯ್ತು ಅನ್ನೋ ಕೋಪದಲ್ಲಿ ವಿಜಯಾಂಬಿಕಾ ಸುಬ್ಬುನ ಆ ಕೇಸ್ ನಲ್ಲಿ ಸಿಕ್ಕಿ ಹಾಕಿಸೋಕೆ ಪ್ಲಾನ್ ಮಾಡಿ ಇನ್ಸ್ಪೆಕ್ಟರ್ ಗೆ ಏನು ಮಾಡಬೇಕು ಅಂತ ಹೇಳಿದ್ದಾಳೆ. ಹೊರಗೆ ಹೆಂಗಸರನ್ನ ಕರ್ಕೊಂಡು ಬಂದು ಪ್ರತಿಭಟನೆ ಮಾಡ್ತಿದ್ದ ಶ್ರೀವಲ್ಲಿ ಮತ್ತು ಶ್ರಾವಣಿಗೆ ಇನ್ಸ್ಪೆಕ್ಟರ್, ಆ್ಯಕ್ಸಿಡೆಂಟ್ ಆದ ವ್ಯಕ್ತಿ ಸತ್ತಿದ್ದಾನೆ, ಪೋಸ್ಟ್ ಮಾರ್ಟಂ ಕೂಡ ಆಗಿದೆ, ಮನೇವ್ರು ಶವ ತಗೊಂಡು ಹೋಗಿದ್ದಾರೆ ಅಂತ ಹೇಳ್ತಾನೆ.‌

ಆದರೆ ಶ್ರೀವಲ್ಲಿ ಇನ್ಸ್ಪೆಕ್ಟರ್ ಫೋನ್ ನಲ್ಲಿ ಮಾತನಾಡಿದ್ದ ಎಲ್ಲಾ ವಿಷಯ ಕೇಳಿಸಿಕೊಂಡು ಶ್ರಾವಣಿಗೆ ಆ್ಯಕ್ಸಿಡೆಂಟ್ ಆಗಿರೋ ವ್ಯಕ್ತಿಗೆ ಹಣ ಕೊಡೋ ವಿಚಾರ, ಅವನಿಗೆ ಎಲ್ಲಿಗೆ ಬರೋಕೆ ಹೇಳಿದ್ದಾರೆ ಅಂತ ಎಲ್ಲಾ ವಿವರಿಸಿ, ಇಬ್ಬರೂ ಅಲ್ಲಿಗೆ ಹೋಗಿ ತಲೆ ಮರೆಸಿಕೊಳ್ಳೋಕೆ ಸಜ್ಜಾಗಿದ್ದ ಖದೀಮನನ್ನು ಹಿಡಿದು ಪೋಲಿಸ್ ಸ್ಟೇಷನ್ ಗೆ ಕರೆತಂದು ಇನ್ಸ್ಪೆಕ್ಟರ್ ಮುಂದೆ ನಿಲ್ಲಿಸಿದ್ದಾರೆ. ಆದರೆ ಇನ್ಸ್ಪೆಕ್ಟರ್ ಇವನು ಅವನಲ್ಲ ಅಂತ ವಾದ ಮಾಡೋಕೆ ಮುಂದಾಗ್ತಾನೆ.

ಆಗ ಶ್ರಾವಣಿ ಸರಿ ಹಾಗಿದ್ರೆ ನಮ್ಮ ಹತ್ರ ಇರೋ ಸಾಕ್ಷಿಗಳೆಲ್ಲಾ ಕೋರ್ಟ್ ನಲ್ಲಿ ಕೊಡ್ತೀವಿ ಅಂದಾಗ ಭಯಪಟ್ಟ ಇನ್ಸ್ಪೆಕ್ಟರ್ ಇದಕ್ಕೆಲ್ಲಾ ಕಾರಣ ಮದನ್ ಅನ್ನೋ ವಿಷಯ ಹೇಳಿದ್ದಾನೆ. ವಿಷಯ ತಿಳಿದ ಶ್ರಾವಣಿ ಕೋಪದಿಂದ ಉರಿದು ಬೀಳುವುದು ಮಾತ್ರವೇ ಅಲ್ಲದೇ ಮನೆಗೆ ಬಂದು ಮದನ್ ಕೆನ್ನೆಗೆ ರಪ ರಪ ಬಾರಿಸಿ, ಬಿಡಿಸಲು ಬಂದ ಅತ್ತೆಗೂ ಎಚ್ಚರಿಕೆ ಕೊಟ್ಟಿದ್ದಾಳೆ. ನನ್ನ ಹತ್ರ ಇರೋ ಸಾಕ್ಷಿ ಸಾಕು ಇವನು ಅಪರಾಧಿ ಅಂತ ಹೇಳೋಕೆ ಆದರೆ ನಾನು ಹಾಗೆ ಮಾಡಲ್ಲ.

ನಮ್ಮ ಅಪ್ಪ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯ ಸೌಧವನ್ನ ಕುಸಿಯೋತರ ಮಾಡೋದು ತನಗೆ ಇಷ್ಟ ಇಲ್ಲ, ದೇವ ರಂತಹ ಆ ವ್ಯಕ್ತಿಯ ಮನಸ್ಸಿಗೆ ನೋವನ್ನು ಉಂಟು ಮಾಡುವುದಿಲ್ಲ ಎಂದಿದ್ದು ಮಾತ್ರವೇ ಅಲ್ಲದೇ ಕಾಲ ಹೀಗೆ ಇರಲ್ಲ, ನಾನು ಇವತ್ತು ಕೊಟ್ಟಿದ್ದರ ಎರಡರಷ್ಟು ನಮ್ಮ ಅಪ್ಪ ಕೊಡ್ತಾರೆ ಅಂತ ಶ್ರಾವಣಿ ಎಚ್ಚರಿಕೆಯನ್ನ ಕೊಟ್ಟಿದ್ದಾಳೆ. ಶ್ರಾವಣಿ ರೌದ್ರಾವತಾರ ಕಂಡು ವಿಜಯಾಂಬಿಕೆ ಮತ್ತು ಮದನ್ ಬೆಚ್ಚಿ ಬಿದ್ದಿದ್ದಾರೆ.

Leave a Comment