SeethaRama: ಭಾರ್ಗವಿಯ ಕುತಂತ್ರಕ್ಕೆ ಬಲಿಯಾದ ಅಶೋಕ; ಪ್ರಜ್ಞೆ ತಪ್ಪಿದ ಅಶೋಕನ ರಕ್ಷಣೆಗೆ ಯಾರು ಬರ್ತಾರೆ?

Written by Soma Shekar

Published on:

---Join Our Channel---

SeethaRama : ಸೀತಾಳ ಮನೆಗೆ ದೇಸಾಯಿ ಕುಟುಂಬದವರೆಲ್ಲರೂ ಆಗಮಿಸಿದ್ದಾರೆ. ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಬಹಳ ಖುಷಿಯಿಂದ ಮಾಡುತ್ತಿದ್ದಾರೆ ಸೂರ್ಯ ಪ್ರಕಾಶ್. ಸಿಹಿಯ ಸಂತೋಷವಂತೂ ಅವಳ ಮುಖದಲ್ಲೇ ಕಾಣುತ್ತಿದ್ದು, ಎಲ್ಲವೂ ತನ್ನದೇ ಜವಾಬ್ದಾರಿ ಎನ್ನುವಂತೆ ಸಂಭ್ರಮದಿಂದ ಓಡಾಡುತ್ತಿದ್ದಾಳೆ. ಸೀತಾರಾಮನ (SeethaRama) ಮದುವೆಯ ಖುಷಿ ಮನಸ್ಸಿನಲ್ಲಿ ಇಲ್ಲದೇ ಹೋದರೂ ಎಲ್ಲರ ಮುಂದೆ ಸಂತೋಷವಾಗಿರುವಂತೆ ನಟಿಸುತ್ತಿದ್ದಾಳೆ ಭಾರ್ಗವಿ.

ಭಾರ್ಗವಿ (Bhargavi) ಸೀತಾಗೆ ಸೀರೆಯನ್ನು ಕೊಟ್ಟು ಉಡಲು ಹೇಳಿದ್ದು, ಇದೇ ವೇಳೆ ಅದು ರಾಮನು ತಂದ ಸೀರೆ ಎಂದು ಹೇಳಿದ್ದು, ಎಲ್ಲರೂ ರಾಮನ ಸೆಲೆಕ್ಷನ್ ಗೆ ಮೆಚ್ಚುಗೆ ನೀಡಿದ್ದಾರೆ. ಅನಂತರ ರಾಮ್ ಮತ್ತು ಸೀತಾ ಇಬ್ಬರೂ ಪ್ರತ್ಯೇಕವಾಗಿ ಮಾತನಾಡಲು ಹೋದಾಗ ಸೀತಾ ಸಿಹಿಯ ಬಗ್ಗೆ ತಿಳಿದುಕೊಳ್ಳೋ ಆಸಕ್ತಿ ಇಲ್ವಾ ಅಂತ ಕೇಳ್ತಾಳೆ. ಆದರೆ ರಾಮ್ ನನ್ನ ಹಿಂದಿನ ಕಥೆ ಏನಂತ ನೀವು ಇದುವರೆಗೂ ಕೇಳಿಲ್ಲ ಅಂತಾನೆ.

ಅಲ್ಲದೇ ಹಳೆ ಕಥೆಯನ್ನು ಕೆದಕುವುದರಿಂದ ಪ್ರಯೋಜನ ಏನಿಲ್ಲ, ಅದನ್ನು ಬಿಟ್ಟು ಮುಂದೆ ಸಾಗೋದು ಒಳ್ಳೆಯದು. ನನಗೆ ನಿಮ್ಮ ಪಾಸ್ಟ್ ನ ತಿಳಿದುಕೊಳ್ಳೋ ಕುತೂಹಲ ಇಲ್ಲ ಎಂದಿದ್ದಾರೆ. ಇದೇ ವೇಳೆ ಮತ್ತೊಂದು ಕಡೆ ಅಶೋಕ್ ಚಾಂದಿನಿ ಎಲ್ಲಿದ್ದಾಳೆ, ಅವಳ ಉದ್ದೇಶ ಏನಂತ ತಿಳಿಯೋ ಪಣವನ್ನು ತೊಟ್ಟಿದ್ದಾನೆ. ಪ್ರಿಯಾ ಹತ್ತಿರ ಈ ವಿಷಯವನ್ನು ಮಾತನಾಡಿದ್ದಾನೆ ಅಶೋಕ್. ಪ್ರಿಯಾ ಅಶೋಕ್ ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾಳೆ.

ಚರಣ್‌ ಮನೆಯಲ್ಲೇ ಆಶ್ರಯ ಪಡೆದಿರೋ ರುದ್ರಪ್ರತಾಪ್ ನ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳ್ಕೊಂಡ ಚರಣ್ ಅಶೋಕನನ್ನು ಭೇಟಿ ಮಾಡಿ ಅವನಿಗೆ ಎಲ್ಲಾ ವಿಷಯ ಹೇಳಿದ್ದು, ಅಶೋಕ್ ಕಾರನ್ನು ಹತ್ತೋ ವೇಳೆಗೆ ಅವನ ಮೇಲೆ ಹಲ್ಲೆ ನಡೆಸಲಾಗಿದೆ. ಅಪರಿಚಿತ ವ್ಯಕ್ತಿ ಅಶೋಕನ ತಲೆಗೆ ಹೊಡೆದು ಪರಾರಿಯಾಗಿದ್ದಾನೆ. ಅಶೋಕ ನೆಲಕ್ಕುರುಳಿ ಪ್ರಜ್ಞೆ ತಪ್ಪಿದ್ದಾನೆ. ಇದರ ಹಿಂದಿನ ರೂವಾರಿ ಯಾರು? ಭಾರ್ಗವಿಯೋ ಅಥವಾ ರುದ್ರ ಪ್ರತಾಪನೋ ಕಾದು ನೋಡಬೇಕಾಗಿದೆ.

Leave a Comment