Sathya: ಕಾರ್ತಿಕ್ ನಿರಪರಾಧಿ, ಸತ್ಯಳನ್ನ ಹೊರ ಹಾಕಿದ್ದ ಸೀತಮ್ಮ, ಉದ್ಯೋಗಕ್ಕೆ ಸತ್ಯ ರಾಜೀನಾಮೆ; ಮುಂದೇನು?

Written by Soma Shekar

Published on:

---Join Our Channel---

Sathya Serial: ಸತ್ಯ ಸೀರಿಯಲ್ ನಲ್ಲಿ (Sathya Serial) ಇತ್ತೀಚಿನ ಎಪಿಸೋಡ್ ಗಳು ಭರ್ಜರಿ ಕುತೂಹಲವನ್ನು ಮೂಡಿಸಿತ್ತು. ಪೊಲೀಸ್ ಅಧಿಕಾರಿಯಾದ ಸತ್ಯ ಕರ್ತವ್ಯ ನಿಷ್ಠೆ ಅನ್ನೋ ಕಾರಣಕ್ಕೆ ಗಂಡನ್ನ ಅರೆಸ್ಟ್ ಮಾಡಿದ್ಲು, ಇದು ಒಂದು ಕಡೆ ಅತ್ತೆ ಮನೇಲಿ ಮತ್ತೊಂದು ಕಡೆ ಅಮ್ಮನ ಮನೇಲೂ ಸಹಾ ಅಸಮಾಧಾನ ಉಂಟು ಮಾಡಿತ್ತು. ಒಂದು ಹಂತದಲ್ಲಿ ಸತ್ಯಳ ಅತ್ತೆ ಸೀತಮ್ಮ ಸೊಸೆ ಕೆನ್ನೆಗೆ ಬಾರಿಸಿ ಮನೆಯಿಂದ ಹೊರಗೇ ಹಾಕಿದ್ರೆ, ಸತ್ಯಳ ತಾಯಿ ಜಾನಕಮ್ಮ (Janakamma) ಮಗಳಿಗೆ ಆ ಕೆಲಸಕ್ಕೆ ರಾಜೀನಾಮೆ ಕೊಡಬೇಕು ಅಂತಾನೇ ತಾಕೀತು ಮಾಡಿದ್ರು. ಆದರೆ ಎಲ್ಲದನ್ನ ಎದುರಿಸಿ ಗಂಡನ್ನ ನಿರಪರಾಧಿ ಅಂತ ಪ್ರೂವ್ ಮಾಡೋ ಪಣ ತೊಟ್ಟಿದ್ಲು ಸತ್ಯ.

ಸತ್ಯ ತಾನು ಅಂದುಕೊಂಡಿದ್ದನ್ನ ಈಗ ಸಾಧಿಸಿದ್ದಾಳೆ. ಮೆಡಿಕಲ್ ಮಾಫಿಯಾದಲ್ಲಿ ತನ್ನ ಗಂಡನ್ನ ಸಿಕ್ಕಿ ಹಾಕ್ಸಿದ್ದಾರೆ, ಕಾರ್ತಿಕ್ ನಿರಪರಾಧಿ ಅಂತ ತೋರಿಸಿದ್ದಾಳೆ. ಈ ಮಾತನ್ನ ಕೇಳಿ ಅತ್ತೆ ಮನೆ ಮತ್ತು ತವರು ಮನೆಯಲ್ಲಿ ಮತ್ತೆ ಸಂತೋಷ ಉಂಟಾಗಿದೆ. ಆದ್ರೆ ಇದೇ ವೇಳೆ ಸೀತಮ್ಮನಿಗೆ ತಾನು ಮಾಡಿದ ತಪ್ಪು ನೆನಪಾಗಿದೆ. ಮನಸ್ಸಿನಲ್ಲಿ ಪಶ್ಚಾತ್ತಾಪ ಅನ್ನೋದು ಕಾಡೋಕೆ ಶುರುವಾಗಿದೆ.

ಆತುರದಲ್ಲಿ ಅವಳ ಮೇಲೆ ಕೈ ಮಾಡಿ ಮನೆಯಿಂದ ಹೊರಗೆ ಹಾಕಿಬಿಟ್ಟೆ, ಈಗ ಅವಳನ್ನ ಹೇಗೆ ಎದುರಿಸೋದೆ ಅನ್ನೋ ತಪ್ಪಿತಸ್ಥ ಭಾವನೆ ಸೀತಮ್ಮನ (Seethamma) ಕಾಡತೊಡಗಿದೆ. ಅಲ್ಲದೇ ಸತ್ಯ ಮಾದ್ಯಮಗಳ ಎದುರು ತನ್ನ ಮಗ ಕಾರ್ತಿಕ್ ನಿರಪರಾಧಿ ಅಂತ ಹೇಳಿದ ಸತ್ಯಳ ಮಾತು ಒಂದು ಕಡೆ ಸೀತಮ್ಮನಿಗೆ ಸಮಾಧಾನ ನೀಡಿದೆ ಆದರೂ ತಾನು ಸತ್ಯ ಪರವಾಗಿ ಕಟುವಾಗಿ ನಡ್ಕೊಂಡಿದ್ದು ನೆನಪಾಗಿ ಅವರಿಗೆ ಬೇಸರದ ಜೊತೆಗೆ ಪಶ್ಚಾತ್ತಾಪ ಕೂಡಾ ಆಗ್ತಿದೆ.

ಇನ್ನೊಂದು ಕಡೆ ಸತ್ಯ ಮಾದ್ಯಮಗಳ ಮುಂದೆ ಮಾತನಾಡ್ತಾ ನಾನು ನನ್ನ ಗಂಡನ್ನ ನಿರಪರಾಧಿ ಅಂತ ಸಾಬೀತು ಮಾಡಬೇಕಾಗಿತ್ತು ಅದು ಆಗಿದೆ. ಈಗ ನನ್ನ ಅಮ್ಮ ಮತ್ತು ಆಸೆ ಪಟ್ಟ ಹಾಗೆ ನಾನು ನನ್ನ ಉದ್ಯೋಗಕ್ಕೆ ರಾಜೀನಾಮೆ ಕೊಡ್ತೀನಿ ಅಂತ ಹೇಳಿದ್ದಾಳೆ ಸತ್ಯ. ಸತ್ಯ ರಾಜೀನಾಮೆ ಕೊಡೋದನ್ನ ಸೀತಮ್ಮ ಮತ್ತೆ ಜಾನಕಮ್ಮ ತಪ್ಪಿಸ್ತಾರಾ? ತಾವು ಮಾಡಿದ್ದು ತಪ್ಪು ಅಂತ ಸತ್ಯ ಹತ್ರ ಮಾತನಾಡ್ತಾರಾ ಕಾದು ನೋಡಬೇಕಾಗಿದೆ.

Leave a Comment