Ranav Ksheerasagar: ದೊಡ್ಮನೆ ಕುಡಿ ಯುವರಾಜ್ ಕುಮಾರ್ (Yuvaraj Kumar) ನಾಯಕನಾಗಿ ಸ್ಯಾಂಡಲ್ವುಡ್ ಗೆ ಯುವ ಸಿನಿಮಾದ ಮೂಲಕ ಭರ್ಜರಿ ಎಂಟ್ರಿಯನ್ನು ನೀಡಿದ್ದಾರೆ. ಮಾರ್ಚ್ 29 ರಂದು ತೆರೆ ಕಂಡ ಈ ಸಿನಿಮಾ ದೊಡ್ಡ ಯಶಸ್ಸನ್ನ ಪಡೆದುಕೊಂಡು ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ. ಮಾಸ್ ಮತ್ತು ಫ್ಯಾಮಿಲಿ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿರುವ ಯುವ ಸಿನಿಮಾವನ್ನು ಸಂತೋಷ್ ಆನಂದ್ರಾಮ್ ಅವರು ನಿರ್ದೇಶನ ಮಾಡಿದ್ದು, ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
![](https://news9kannada.com/wp-content/uploads/2024/04/IMG-20240409-WA0019-1024x683.webp)
ಮಾಸ್ ಸಿನಿಮಾ ಎಂದ ಮೇಲೆ ಹೀರೋಗೆ ಪೈಪೋಟಿ ನೀಡುವಂತ ವಿಲನ್ ಗಳು ಇರಲೇಬೇಕು. ಆಗಲೇ ನಾಯಕನ ಖದರ್ ಹೆಚ್ಚಾಗೋದು. ಯುವ ಸಿನಿಮಾದಲ್ಲೂ ವಿಲನ್ ಗಳಿಗೆ ಕೊರತೆಯೇನಿಲ್ಲ.
![](https://news9kannada.com/wp-content/uploads/2024/04/IMG-20240409-WA0021-819x1024.webp)
ಯುವ ಸಿನಿಮಾದಲ್ಲೊಬ್ಬ ಯುವ ವಿಲನ್ ಖದರ್ ಆಗಿ ಕಂಡಿದ್ದು, ಎಲ್ಲರ ಗಮನವನ್ನು ಸೆಳೆದಿದ್ದಾರೆ. ಸ್ಮಾರ್ಟ್ ಅಂಡ್ ಡ್ಯಾಷಿಂಗ್ ಹಾಗೂ ಖಡಕ್ ಲುಕ್ ನಲ್ಲಿ ಮಿಂಚಿರುವ ಈ ನಟನ ಹೆಸರು ರಣವ್ ಕ್ಷೀರಸಾಗರ್ (Ranav Ksheerasagar).
![](https://news9kannada.com/wp-content/uploads/2024/04/IMG-20240409-WA0023-768x1024.webp)
ಯುವ ಸಿನಿಮಾದಲ್ಲಿ ನಾಯಕನ ಎದುರು ಟಕ್ಕರ್ ನೀಡುವ, ಹೊಡೆದಾಡುವ ಸ್ಟೂಡೆಂಟ್ ಗ್ಯಾಂಗ್ ಸ್ಟರ್ ಆಗಿ ತೆರೆಯ ಮೇಲೆ ಅಬ್ಬರಿಸಿದ್ದಾರೆ ರಣವ್. ತೆರೆಯ ಮೇಲೆ ರಗಡ್ ಆಗಿ ಕಂಡಿರುವ ರಣವ್ ರಿಯಲ್ ಲೈಫ್ ನಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಮತ್ತು ಸೆನ್ಸಿಬಲ್ ವ್ಯಕ್ತಿ ಆಗಿದ್ದಾರೆ.
![](https://news9kannada.com/wp-content/uploads/2024/04/IMG-20240409-WA0026-768x1024.webp)
ಶಾಲಾ ದಿನಗಳಿಂದಲೇ ನಟನೆಯ ಗೀಳನ್ನು ಹಚ್ಚಿಕೊಂಡಿದ್ದ ರಣವ್ ಅವರು ಬೇಸಿಗೆ ಶಿಬಿರಗಳಲ್ಲಿ ರಂಗಭೂಮಿಯೊಡನೆ ನಂಟನ್ನು ಬೆಳೆಸಿಕೊಂಡರು. ಮೊದಲು ಬಣ್ಣ ಹಚ್ಚಿದ್ದು ಪ್ರಹ್ಲಾದನ ತಂದೆ ಹಿರಣ್ಯ ಕಷಿಪುವಿನಂತಹ ಅದ್ಭುತ ಪಾತ್ರಕ್ಕೆ.
![](https://news9kannada.com/wp-content/uploads/2024/04/IMG-20240409-WA0028-768x1024.webp)
ಸಿನಿಮಾ ರಂಗದಲ್ಲಿ ಅವರು ಮೊದಲು ಬಣ್ಣ ಹಚ್ಚಿದ್ದು ಪುನೀತ್ ರಾಜ್ಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ. ಈಗ ವಿಶೇಷವೆಂದರೆ ಅಂದು ಹಿರಣ್ಯ ಕಷಿಪು ಪಾತ್ರದಲ್ಲಿ ಅಬ್ಬರಿಸಿದ್ದ ಡಾ.ರಾಜ್ಕುಮಾರ್ ಅವರ ಮೊಮ್ಮಗನ ಚೊಚ್ಚಲ ಸಿನಿಮಾದಲ್ಲಿ ರಣವ್ ಖಳನಾಯಕನಾಗಿ ಮಿಂಚಿದ್ದಾರೆ.
![](https://news9kannada.com/wp-content/uploads/2024/04/IMG-20240409-WA0030-768x1024.webp)
ರಣವ್ ಅವರ ಪ್ರತಿಭೆ ನಾಟಕ ಮತ್ತು ಸಿನಿಮಾ ರಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ. ರಣವ್ ತಮ್ಮ ಮಾನವೀಯತೆ ಮತ್ತು ಮಾನವ ಕುಲಕ್ಕೆ ಸಲ್ಲಿಸಿದ ಸೇವೆಯಿಂದಾಗಿ ಹಿಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
![](https://news9kannada.com/wp-content/uploads/2024/04/IMG-20240409-WA0031-768x1024.webp)
ಕನ್ನಡ ಚಿತ್ರರಂಗಕ್ಕೆ ಖಳನಾಯಕರಾಗಿ ಎಂಟ್ರಿ ನೀಡಿ, ಅನಂತರ ಜನ ಮೆಚ್ಚಿದ ನಾಯಕರಾದವರು ಟೈಗರ್ ಪ್ರಭಾಕರ್, ಶಶಿಕುಮಾರ್, ದೇವರಾಜ್ ರಂತಹ ನಾಯಕರ ಹಾದಿಯಲ್ಲಿ ಹೆಜ್ಜೆ ಇಡಲು ಮುಂದಾಗಿರುವ ರಣವ್ ಅವರಲ್ಲೂ ನಾಯಕನಾಗುವ ಲಕ್ಷಣಗಳು ಸ್ಪಷ್ಟವಾಗಿ ಕಂಡಿವೆ.