Priyamani: ದಕ್ಷಿಣ ಸಿನಿಮಾ ರಂಗದ ಸ್ಟಾರ್ ಹೀರೋಯಿನ್ ಪ್ರಿಯಾಮಣಿ (Priyamani) ಪ್ರಸ್ತುತ ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿ ಬಾಲಿವುಡ್ (Bollywood) ಮತ್ತು ದಕ್ಷಿಣ ಸಿನಿಮಾ ರಂಗದಲ್ಲಿ ಅದ್ಭುತ ಪಾತ್ರಗಳಲ್ಲಿ ನಟಿಸುತ್ತಿದ್ದು ಸಾಕಷ್ಟು ಬ್ಯುಸಿಯಾಗಿರುವ ಜೊತೆಯಲ್ಲೇ ತೆಲುಗು ಕಿರುತೆರೆಯ ಶೋಗಳಲ್ಲಿ ಜಡ್ಜ್ ಆಗಿಯೂ ಕೆಲಸವನ್ನು ಮಾಡುತ್ತಾ ಕಿರುತೆರೆಯ ಪ್ರೇಕ್ಷಕರಿಗೂ ಹತ್ತಿರವಾಗಿದ್ದಾರೆ. ಸಿನಿಮಾ ಹಾಗೂ ಕಿರುತೆರೆ ಎರಡೂ ಕಡೆ ಸಾಕಷ್ಟು ಸಕ್ರಿಯವಾಗಿರುವ ಮೂಲಕ ಮತ್ತಷ್ಟು ಜನಪ್ರಿಯತೆಯನ್ನು ಮತ್ತು ಅಭಿಮಾನಿ ಬಳಗವನ್ನು ನಟಿ ಪಡೆದುಕೊಂಡಿದ್ದಾರೆ.
ಇವೆಲ್ಲವುಗಳ ನಡುವೆಯೇ ಜಬರ್ದಸ್ತ್ ಕಾಮಿಡಿ ಶೋ ನ ಸ್ಟಾರ್ ಹಾಸ್ಯ ನಟ ಹೈಪರ್ ಆದಿ (Hyper Aadi) ಶೋ ಒಂದರಲ್ಲಿ ಮೆಂಟರ್ ಆಗಿದ್ದು, ಆ ಶೋನಲ್ಲಿ ಅವರು ನಟಿ ಪ್ರಿಯಾಮಣಿ ಜೊತೆಗೆ ಒಳ್ಳೆಯ ಬಾಂಡಿಂಗ್ ಅನ್ನು ಹೊಂದಿದ್ದರು. ಪ್ರಿಯಾಮಣಿ ಆದಿ ಅವರನ್ನು ಬಾವ ಬಾವ ಅಂತ ಕರೆಯುತ್ತಿದ್ದರು. ಅವರ ತಮಾಷೆಯ ಎಪಿಸೋಡ್ ಗಳು ಕಾರ್ಯಕ್ರಮದ ಹೈಲೈಟ್ ಆಗಿದೆ ಅಂದ್ರೆ ಸುಳ್ಳಲ್ಲ.
ಹೀಗೆ ಇಬ್ಬರ ನಡುವೆ ಸಾಕಷ್ಟು ಆತ್ಮೀಯತೆ ಬೆಳೆದಿದ್ದು ಮಾತ್ರವೇ ಅಲ್ಲದೇ ಒಂದ್ಸ ಪ್ರಿಯಾಮಣಿ ಆದಿಯ ತೊಡೆಯ ಮೇಲೆ ಕೂತಿದ್ದ ದೃಶ್ಯವನ್ನು ನೋಡಿದ ಮೇಲೆ ಇವರಿಬ್ಬರ ನಡುವೆ ಅಫೇರ್ ಇದೆ ಅಂತ ಗುಸುಗುಸು ಹಬ್ಬಿತ್ತು. ಈಗ ಇದೇ ವಿಚಾರವಾಗಿ ಆದಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸಂದರ್ಶನದ ವೇಳೆ ಆದಿ ಅವರನ್ನು ಪ್ರಿಯಾಮಣಿ ಜತೆಗಿನ ಅಫೇರ್ ಕುರಿತಾಗಿ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ.
ಆದಿ ಪ್ರಶ್ನೆಗಳಿಗೆ ಅವರು ಸ್ಪಷ್ಟ ಉತ್ತರವನ್ನು ನೀಡುತ್ತಾ, ”ಪ್ರಿಯಾಮಣಿ ಅವರು ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದರೂ ಸಹಾ ಸೆಟ್ ನಲ್ಲಿ ಅವರು ಎಲ್ಲರ ಜೊತೆಗೆ ಬಹಳ ಆತ್ಮೀಯವಾಗಿ ಮತ್ತು ಸ್ಪೋರ್ಟಿವ್ ಆಗಿ ಇರುತ್ತಾರೆ. ಅವರು ನನ್ನನ್ನ ಬಾವ ಅಂತಾ ಕರೆಯುತ್ತಾರೆ. ಅವರು ಏನೇ ಮಾಡಿದರೂ ಅದನ್ನು ಸ್ಪೋರ್ಟಿವ್ ಆಗೇ ತಗೋಳ್ತಾರೆ. ಅವರು ಸಣ್ಣ ಕಲಾವಿದರೊಂದಿಗೂ ಬೆರೆಯುತ್ತಾರೆ.
ಡ್ಯಾನ್ಸರ್ ಗಳ ಜೊತೆಗೆ ರೀಲ್ಸ್ ಗಳನ್ನು ಮಾಡ್ತಾರೆ ಅವರಿಗೆ ಪ್ರೋತ್ಸಾಹವನ್ನು ನೀಡ್ತಾರೆ. ಅವರು ವೃತ್ತಿ ಜೀವನದಲ್ಲಿ ಒಂದು ಹಂತ ನೋಡಿ ಬಂದಿದ್ದಾರೆ. ಸ್ಟಾರ್ ಇಮೇಜ್ ಅನುಭವಿಸಿದ್ದಾರೆ. ಸಣ್ಣ ಕಲಾವಿದರಿಗೆ ಪ್ರೋತ್ಸಾಹ ನೀಡೋದ್ರಲ್ಲಿ ಅವರು ಬೆಸ್ಟ್. ಅದನ್ನು ನೋಡಿ ನಮ್ಮ ನಡುವೆ ಅಫೇರ್ ಇದೆ ಎಂದು ಸುದ್ದಿ ಹರಡಿತ್ತು. ಆದರೆ ಅಸಲಿಗೆ ಅದೆಲ್ಲಾ ಏನಿಲ್ಲ ,ನಾವು ಒಳ್ಳೆ ಸ್ನೇಹಿತರು ಎಂದು ಆದಿ ಸ್ಪಷ್ಟನೆ ನೀಡಿದ್ದಾರೆ.
Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…
Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು…
Tollywood Heroins: ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರಿಗೆ ಮೊದಲ ಸಿನಿಮಾದ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿಯಾಗುತ್ತದೆ ಮತ್ತು ಒಂದೇ…
Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಖುಷಿಯಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿನ ಪ್ರಕೃತಿ…
Bhumika Ramesh: ಇತ್ತೀಚಿನ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ (Telugu Television) ಕನ್ನಡ ಕಲಾವಿದ್ದರದ್ದೇ ಪಾರುಪತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು…
Lakshmi Nivasa: ಸದ್ಯಕ್ಕಂತೂ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಜಯಂತ್ (Jayanth) ಮತ್ತು ಜಾಹ್ನವಿ (Jahnavi) ಕಥೆಯೇ…
This website uses cookies.