Entertainment

Priyamani: ಜಬರ್ದಸ್ತ್ ಹಾಸ್ಯನಟನ ಜೊತೆ ಪ್ರಿಯಾಮಣಿ ಅಫೇರ್; ಬೆಳಕಿಗೆ ಬಂದ ಅಸಲಿ ಸತ್ಯಗಳು

Priyamani: ದಕ್ಷಿಣ ಸಿನಿಮಾ ರಂಗದ ಸ್ಟಾರ್ ಹೀರೋಯಿನ್ ಪ್ರಿಯಾಮಣಿ (Priyamani) ಪ್ರಸ್ತುತ ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿ ಬಾಲಿವುಡ್ (Bollywood) ಮತ್ತು ದಕ್ಷಿಣ ಸಿನಿಮಾ ರಂಗದಲ್ಲಿ ಅದ್ಭುತ ಪಾತ್ರಗಳಲ್ಲಿ ನಟಿಸುತ್ತಿದ್ದು ಸಾಕಷ್ಟು ಬ್ಯುಸಿಯಾಗಿರುವ ಜೊತೆಯಲ್ಲೇ ತೆಲುಗು ಕಿರುತೆರೆಯ ಶೋಗಳಲ್ಲಿ ಜಡ್ಜ್ ಆಗಿಯೂ ಕೆಲಸವನ್ನು ಮಾಡುತ್ತಾ ಕಿರುತೆರೆಯ ಪ್ರೇಕ್ಷಕರಿಗೂ ಹತ್ತಿರವಾಗಿದ್ದಾರೆ. ಸಿನಿಮಾ ಹಾಗೂ ಕಿರುತೆರೆ ಎರಡೂ ಕಡೆ ಸಾಕಷ್ಟು ಸಕ್ರಿಯವಾಗಿರುವ ಮೂಲಕ ಮತ್ತಷ್ಟು ಜನಪ್ರಿಯತೆಯನ್ನು ಮತ್ತು ಅಭಿಮಾನಿ ಬಳಗವನ್ನು ನಟಿ ಪಡೆದುಕೊಂಡಿದ್ದಾರೆ.

ಇವೆಲ್ಲವುಗಳ ನಡುವೆಯೇ ಜಬರ್ದಸ್ತ್ ಕಾಮಿಡಿ ಶೋ ನ ಸ್ಟಾರ್ ಹಾಸ್ಯ ನಟ ಹೈಪರ್ ಆದಿ (Hyper Aadi) ಶೋ ಒಂದರಲ್ಲಿ ಮೆಂಟರ್ ಆಗಿದ್ದು, ಆ ಶೋನಲ್ಲಿ ಅವರು ನಟಿ ಪ್ರಿಯಾಮಣಿ ಜೊತೆಗೆ ಒಳ್ಳೆಯ ಬಾಂಡಿಂಗ್ ಅನ್ನು ಹೊಂದಿದ್ದರು. ಪ್ರಿಯಾಮಣಿ ಆದಿ ಅವರನ್ನು ಬಾವ ಬಾವ ಅಂತ ಕರೆಯುತ್ತಿದ್ದರು. ಅವರ ತಮಾಷೆಯ ಎಪಿಸೋಡ್ ಗಳು ಕಾರ್ಯಕ್ರಮದ ಹೈಲೈಟ್ ಆಗಿದೆ ಅಂದ್ರೆ ಸುಳ್ಳಲ್ಲ. ‌

ಹೀಗೆ ಇಬ್ಬರ ನಡುವೆ ಸಾಕಷ್ಟು ಆತ್ಮೀಯತೆ ಬೆಳೆದಿದ್ದು ಮಾತ್ರವೇ ಅಲ್ಲದೇ ಒಂದ್ಸ ಪ್ರಿಯಾಮಣಿ ಆದಿಯ ತೊಡೆಯ ಮೇಲೆ ಕೂತಿದ್ದ ದೃಶ್ಯವನ್ನು ನೋಡಿದ ಮೇಲೆ ಇವರಿಬ್ಬರ ನಡುವೆ ಅಫೇರ್ ಇದೆ ಅಂತ ಗುಸುಗುಸು ಹಬ್ಬಿತ್ತು. ಈಗ ಇದೇ ವಿಚಾರವಾಗಿ ಆದಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸಂದರ್ಶನದ ವೇಳೆ ಆದಿ ಅವರನ್ನು ಪ್ರಿಯಾಮಣಿ ಜತೆಗಿನ ಅಫೇರ್ ಕುರಿತಾಗಿ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ.

ಆದಿ ಪ್ರಶ್ನೆಗಳಿಗೆ ಅವರು ಸ್ಪಷ್ಟ ಉತ್ತರವನ್ನು ನೀಡುತ್ತಾ, ”ಪ್ರಿಯಾಮಣಿ ಅವರು ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದರೂ ಸಹಾ ಸೆಟ್ ನಲ್ಲಿ ಅವರು ಎಲ್ಲರ ಜೊತೆಗೆ ಬಹಳ ಆತ್ಮೀಯವಾಗಿ ಮತ್ತು ಸ್ಪೋರ್ಟಿವ್ ಆಗಿ ಇರುತ್ತಾರೆ. ಅವರು ನನ್ನನ್ನ ಬಾವ ಅಂತಾ ಕರೆಯುತ್ತಾರೆ. ಅವರು ಏನೇ ಮಾಡಿದರೂ ಅದನ್ನು ಸ್ಪೋರ್ಟಿವ್ ಆಗೇ ತಗೋಳ್ತಾರೆ. ಅವರು ಸಣ್ಣ ಕಲಾವಿದರೊಂದಿಗೂ ಬೆರೆಯುತ್ತಾರೆ.

ಡ್ಯಾನ್ಸರ್ ಗಳ ಜೊತೆಗೆ ರೀಲ್ಸ್ ಗಳನ್ನು ಮಾಡ್ತಾರೆ ಅವರಿಗೆ ಪ್ರೋತ್ಸಾಹವನ್ನು ನೀಡ್ತಾರೆ. ಅವರು ವೃತ್ತಿ ಜೀವನದಲ್ಲಿ ಒಂದು ಹಂತ ನೋಡಿ ಬಂದಿದ್ದಾರೆ. ಸ್ಟಾರ್ ಇಮೇಜ್ ಅನುಭವಿಸಿದ್ದಾರೆ. ಸಣ್ಣ ಕಲಾವಿದರಿಗೆ ಪ್ರೋತ್ಸಾಹ ನೀಡೋದ್ರಲ್ಲಿ ಅವರು ಬೆಸ್ಟ್. ಅದನ್ನು ನೋಡಿ ನಮ್ಮ ನಡುವೆ ಅಫೇರ್ ಇದೆ ಎಂದು ಸುದ್ದಿ ಹರಡಿತ್ತು. ಆದರೆ ಅಸಲಿಗೆ ಅದೆಲ್ಲಾ ಏನಿಲ್ಲ ,ನಾವು ಒಳ್ಳೆ ಸ್ನೇಹಿತರು ಎಂದು ಆದಿ ಸ್ಪಷ್ಟನೆ ನೀಡಿದ್ದಾರೆ.

Soma Shekar

Recent Posts

Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…

16 hours ago

Chandini: ‘ಎ’ ನನ್ನ ಜೀವನ ಬದಲಿಸಿದ ಸಿನಿಮಾ: ರೀ ರಿಲೀಸ್ ವೇಳೆ ಎ ಸಿನಿಮಾ ನಟಿ ಚಾಂದಿನಿ ಮನಸ್ಸಿನ ಮಾತು

Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು…

17 hours ago

Tollywood Heroins: ಮೊದಲ ಸಿನಿಮಾದಿಂದಲೇ ಸ್ಟಾರ್ ಗಳಾದ ಈ ಇಬ್ಬರ ಅಬ್ಬರ ತಗ್ಗಿದ್ದೇಕೆ? ಚಾನ್ಸ್ ಸಿಕ್ತಿಲ್ಲ ಯಾಕೆ?

Tollywood Heroins: ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರಿಗೆ ಮೊದಲ ಸಿನಿಮಾದ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿಯಾಗುತ್ತದೆ ಮತ್ತು ಒಂದೇ…

20 hours ago

Amruthadhaare: ಗೌತಮ್ ಭೂಮಿಕಾ ಹೊರಟ ಕೂಡಲೇ ತನ್ನ ಅಸಲಿ ಮುಖ ತೋರಿಸಿದ ಜೈದೇವ್; ಮಲ್ಲಿ ಕಥೆ ಮುಗೀತಾ?

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಖುಷಿಯಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿನ ಪ್ರಕೃತಿ…

21 hours ago

Bhumika Ramesh: ಲಕ್ಷ್ಮೀ ಬಾರಮ್ಮ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಭೂಮಿಕಾ; ತೆಲುಗಲ್ಲಿ ಹೊಸ ಆಫರ್

Bhumika Ramesh: ಇತ್ತೀಚಿನ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ (Telugu Television) ಕನ್ನಡ ಕಲಾವಿದ್ದರದ್ದೇ ಪಾರುಪತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು…

22 hours ago

Lakshmi Nivasa: ಹುಚ್ಚು ಪ್ರೀತಿ, ಹೆಂಡ್ತಿ ಪರದಾಟಕ್ಕೆ ಖುಷಿ ಪಟ್ಟ ಜಯಂತ್; ಏನ್ ತಲೆನೋವು ಗುರು ಅಂದ್ರು ನೆಟ್ಟಿಗರು

Lakshmi Nivasa: ಸದ್ಯಕ್ಕಂತೂ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಜಯಂತ್ (Jayanth) ಮತ್ತು ಜಾಹ್ನವಿ (Jahnavi) ಕಥೆಯೇ…

1 day ago

This website uses cookies.