Bhagya Lakshmi: ಭಾಗ್ಯ ಸತ್ಯ ಬಯಲಾಯ್ತು, ಗೆಟ್ ಔಟ್ ಎಂದು ಸಿಟ್ಟಾದ ಸೂಪರ್ ವೈಸರ್, ಕಣ್ಣೀರಲ್ಲಿ ಭಾಗ್ಯ

Written by Soma Shekar

Published on:

---Join Our Channel---

Bhagya Lakshmi: ಭಾಗ್ಯಲಕ್ಷ್ಮಿ (Bhagya Lakshmi) ಸೀರಿಯಲ್ ನಲ್ಲಿ ಭಾಗ್ಯ ಸ್ಟಾರ್ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ವಿಷಯ ಮನೆಯವರಿಗೆ ಗೊತ್ತಿಲ್ಲ. ಭಾಗ್ಯ ಮೇಲೆ ಕೋಪ ಮಾಡ್ಕೊಂಡಿದ್ದ ಹಿತಾ ಕೂಡಾ ಭಾಗ್ಯ ಬಗ್ಗೆ ತಿಳ್ಕೊಂಡು ಅವಳಿಗೆ ಸಹಾಯವನ್ನ ಮಾಡ್ತಿದ್ದಾಳೆ. ಭಾಗ್ಯ ಕೆಲಸ ಮಾಡೋ ಹೋಟೆಲ್ನಲ್ಲಿ ಅವರ ಹೋಟೆಲ್ನ ಸ್ಪೆಷಲ್ ಫುಡ್ ಅಂತ ಫೇಮಸ್ ಆಗಿರೋ ಫುಡ್ ಅನ್ನು ಪಕ್ಕದ ಹೋಟೆಲಿನಿಂದ ತಗೊಂಡ್ ಬರೋ ಕೆಲಸವನ್ನು ಹೇಳಿ ಹಿತಾ ಭಾಗ್ಯನ ಕಳಿಸ್ತಾಳೆ. ಆದರೆ ಭಾಗ್ಯ ಬರಿ ಕೈಯಲ್ಲಿ ವಾಪಸ್ ಬರೋದನ್ನ ನೋಡಿ ಸೂಪರ್ ವೈಸರ್ ಗಾಬರಿ ಆಗಿದ್ದಾನೆ.

ಬರಿ ಕೈಯಲ್ಲಿ ಬಂದ ಭಾಗ್ಯಳನ್ನ ಫುಡ್ ಎಲ್ಲಿ ಅಂತ ಪ್ರಶ್ನೆ ಮಾಡಿದಾಗ ಭಾಗ್ಯ ನಡೆದ ವಿಚಾರವನ್ನು ತಿಳಿಸುತ್ತಾಳೆ. ಆದರೆ ಸೂಪರ್ ವೈಸರ್ ಗೆ ಅದರಿಂದ ಸಮಾಧಾನ ಆಗೋದಿಲ್ಲ. ಅವನು ಸಿಟ್ಟಿನಿಂದ ಹೋಟೆಲ್ ಗೆ ಬಂದಿರೋರು ಖ್ಯಾತ ಪತ್ರಕರ್ತರು, ಅವರು ಇಲ್ಲಿನ ಸ್ಪೆಷಲ್ ಫುಡ್ ತಿಂದು ರಿವ್ಯೂ ಬರೆದ್ರೆ ನಮ್ಮ ಹೋಟೆಲ್ ಗೆ ಇನ್ನೂ ಕಸ್ಟಮರ್ಸ್ ಹೆಚ್ಚಾಗಿ ಬರ್ತಾರೆ. ಆದರೆ ಇಲ್ಲಿ ಅವರು ಕೇಳಿದ ಫುಡ್ ಸಿಗ್ಲಿಲ್ಲ ಅಂದ್ರೆ ಅವರು ನೆಗೆಟಿವ್ ಆಗಿ ಬರೆದರೆ ಏನ್ ಮಾಡೋದು. ಆ ಚಿಕ್ಕ ಹೋಟೆಲ್ ಅವರು ಕೊಡಲ್ಲ ಅಂದ್ರೆ ನೀವು ಯಾಕೆ ಸುಮ್ಮನೆ ಬರಬೇಕಾಗಿತ್ತು.

ಅವರಿಗೆ ನಾವು ದುಡ್ಡು ಕೊಡ್ತೀವಿ ಕೊಡೋವರ್ಗೋ ಬಿಡೋದಿಲ್ಲ ಅಂತ ಹಠಮಾಡಿ ಕೂರಬೇಕಾಗಿತ್ತು. ನಿಮ್ಮಿಂದ ಹೋಟೆಲ್ ಗೆ ಸಮಸ್ಯೆ ಆದರೆ ನಾನು ಸುಮ್ಮನಿರೋದಿಲ್ಲ ಅಂತ ಭಾಗ್ಯಾಗೆ ಎಚ್ಚರಿಕೆ ಕೊಟ್ಟಿದ್ದಾನೆ. ಸೂಪರ್ ವೈಸರ್ ಗಾಬರಿಯನ್ನು ನೋಡಿದ ಭಾಗ್ಯ ಅದು ಯಾವ ತಿಂಡಿ ಅಂತ ಕೇಳಿ, ಅದರ ಚಿತ್ರವನ್ನು ನೋಡಿ, ಇಷ್ಟಕ್ಕೆ ಯಾಕೆ ಟೆನ್ಶನ್ ಮಾಡ್ಕೋತೀರಾ ? ನಾನು ಮನೆಯಲ್ಲಿ ಆಗಾಗ ಮಾಡ್ತಿರ್ತೀನಿ, ನನ್ ಮಗನಿಗೆ ಬಹಳ ಇಷ್ಟ ನೀವು ಇದಕ್ಕೆ ಬೇರೆ ಹೆಸರನ್ನು ಇಟ್ಟಿದ್ದೀರ

ನಾನು ಇಲ್ಲೇ ಮಾಡ್ತೀನಿ ಅಂತ ಹೇಳ್ತಾಳೆ. ಆದರೆ ಸೂಪರ್ ವೈಸರ್ ಇನ್ನಷ್ಟು ಕೋಪಗೊಳ್ಳುತ್ತಾನೆ
ನಿಮ್ಮ ಕೆಲಸ ಆರ್ಡರ್ ತಗೊಳೋದಷ್ಟೇ, ಅಡುಗೆ ವಿಷಯಕ್ಕೆ ಬರಬೇಡಿ, ನಿಮ್ಮ ಮಾತು ಕೇಳ್ತಿದ್ರೆ ಹೋಟೆಲ್ ಮ್ಯಾನೇಜ್ಮೆಂಟ್ ಮಾಡಿ ಇಂಟರ್ನ್ ಶಿಪ್ ಮುಗಿಸಿ ಬಂದಿರೋ ತರ ಕಾಣ್ತಿಲ್ಲ ಅಂತಾರೆ. ಆಗ ಅಲ್ಲಿಗೆ ಬರುವ ಹೋಟೆಲ್ ಉದ್ಯೋಗಿ ಇವಳು ಭಗಾಯ ಅಲ್ಲ, ಅಂತ ಹೇಳಿದಾಗ ಸೂಪರ್ ವೈಸರ್ ಮುಂದೆ ಭಾಗ್ಯ ಸತ್ಯವನ್ನ ಹೇಳ್ತಾಳೆ. ಸೂಪರ್ ವೈಸರ್ ಮತ್ತೊಬ್ಬರ ಹೆಸರಲ್ಲಿ ಕೆಲಸ ಮಾಡೋಕೆ ಎಷ್ಟು ಧೈರ್ಯ ಅಂತ ಗದರಿಸುತ್ತಾನೆ.

ಭಾಗ್ಯ ತನ್ನ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡು, ಏನು ಕೆಲಸ ಕೊಟ್ರು ನಾನು ಮಾಡ್ತೀನಿ ಅಂತ ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದರೆ ಸೂಪರ್ ವೈಸರ್ ಅವಳ ಮಾತುಗಳನ್ನು ಕೇಳುವ ಅರ್ಥ ಮಾಡಿಕೊಳ್ಳೋ ಪರಿಸ್ಥಿತಿಯಲ್ಲಿ ಇಲ್ಲ. ಅಲ್ಲದೇ ಕೆಲಸ ಬಿಟ್ಟು ಹೋಗು ಅಂತ ಹೇಳಿದ್ದಾರೆ. ಕಣ್ಣೀರು ಹಾಕುತ್ತಾ ಭಾಗ್ಯ ಅಲ್ಲಿಂದ ಹೊರಡ್ತಾಳೆ. ಭಾಗ್ಯ ಕೆಲಸವನ್ನು ಕಳೆದುಕೊಳ್ತಾಳಾ? ಅಥವಾ ಒತ್ತು ಶಾವಿಗೆ ಮತ್ತು ಮಾವಿನ ಹಣ್ಣಿನ ರಸಾಯನ ಮಾಡಿ ಮತ್ತೆ ಹೋಟೆಲ್ ನಲ್ಲಿ ಕೆಲಸವನ್ನು ಪಡೆದುಕೊಳ್ತಾಳಾ ಕಾದು ನೋಡಬೇಕಾಗಿದೆ.

Leave a Comment