Katrina Kaif: ಅನಂತ್ ಅಂಬಾನಿ ಮದುವೆ ಮುಗಿದ ಕೂಡಲೇ ಕೊರಗಜ್ಜನ ಸನ್ನಿಧಿಯಲ್ಲಿ ಕಂಡ ನಟಿ ಕತ್ರಿನಾ ಕೈಫ್

Written by Soma Shekar

Published on:

---Join Our Channel---

Katrina Kaif: ಬಾಲಿವುಡ್​ ನ ಸ್ಟಾರ್ ನಟಿ, ಜನಪ್ರಿಯ ನಟಿಯೂ ಆಗಿರುವ ಕತ್ರಿನಾ ಕೈಫ್ (Katrina Kaif) ಕರ್ನಾಟಕಕ್ಕೆ ಭೇಟಿ ನೀಡಿದ್ದು, ವಿಶೇಷ ಏನೆಂದರೆ ನಟಿಯು  ಮಂಗಳೂರಿನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾರೆ. ಈ ವೇಳೆ ನಟಿಯು ಸುಪ್ರಿಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊರಗಜ್ಜನ (Koragajja) ಸನ್ನಿಧಾನಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ನಟಿಯ  ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬಾಲಿವುಡ್ ನಲ್ಲಿ ಸ್ಟಾರ್ ಗಳಾಗಿರುವ ಸುನೀಲ್ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ (Shilpa Shetty) ಮಂಗಳೂರಿನ ಕಡೆಯವರು ಎನ್ನುವುದು ತಿಳದೇ ಇದೆ. ಅವರು ಆಗಾಗ ಇಲ್ಲಿನ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಈಗ ಕೊರಗಜ್ಜನ ಕುರಿತಾಗಿ ಇನ್ನಿತರೆ ಬಾಲಿವುಡ್​ ಸೆಲೆಬ್ರಿಟಿಗಳಿಗೆ ವಿಶೇಷವಾದ ನಂಬಿಕೆ ಮತ್ತು ಆಸ್ಥೆ ಮೂಡಿದೆ. ಈಗ ಅದೇ ನಂಬಿಕೆಯಿಂದ ಕತ್ರಿನಾ ಕೊರಗಜ್ಜನ ಸನ್ನಿಧಾನಕ್ಕೆ ಆಗಮಿಸಿದ್ದಾರೆ.

ಕತ್ರಿನಾ ಕೈಫ್ ಜೊತೆಗೆ ಹಿರಿಯ ಬಾಲಿವುಡ್ ನಟ ಸುನೀಲ್ ಶೆಟ್ಟಿ (Sunil Shetty) ಅವರ ಕುಟುಂಬ ಕೂಡಾ ಪುಣ್ಯಕ್ಷೇತ್ರಕ್ಕೆ ಆಗಮಿಸಿದೆ. ಸುನೀಲ್ ಶೆಟ್ಟಿ ಅವರ  ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ  ಹಾಗೂ ಅವರ ಅಳಿಯ, ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಅವರು ಭೇಟಿ ನೀಡಿದ್ದು, ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಸೇರಿರುವ ನಟಿ ಕತ್ರೀನಾ ಕೈಫ್ ಹಿಂದೂ ಸಮುದಾಯದವರಾದ ವಿಕ್ಕಿ ಕೌಶಲ್ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ನಟಿ ಹಿಂದೂ, ಮುಸ್ಲಿಂ ಎರಡೂ ಧರ್ಮವನ್ನು ಆಚರಿಸುತ್ತಿದ್ದು, ಇತ್ತೀಚೆಗೆ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ವಿಕ್ಕಿ ಹಾಗೂ ಕತ್ರೀನಾ ಭಾಗಿ ಆಗಿದ್ದರು, ಅದಾದ ನಂತರ ನೇರವಾಗಿ ಕತ್ರೀನಾ ಕೊರಗಜ್ಜನ ಸನ್ನಿಧಿಗೆ ಆಗಮಿಸಿ ಕೋಲದಲ್ಲಿ ಭಾಗವಹಿಸಿದ್ದಾರೆ.

Leave a Comment