Amruthadhaare: ಗೌತಮ್ ಭೂಮಿಕಾ ಹೊರಟ ಕೂಡಲೇ ತನ್ನ ಅಸಲಿ ಮುಖ ತೋರಿಸಿದ ಜೈದೇವ್; ಮಲ್ಲಿ ಕಥೆ ಮುಗೀತಾ?

Written by Soma Shekar

Published on:

---Join Our Channel---

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಖುಷಿಯಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಅಲ್ಲಿ ಒಂದಷ್ಟು ಸುಂದರ ಕ್ಷಣಗಳನ್ನು ಕಳೆಯುವ ನಿರೀಕ್ಷೆಯಲ್ಲಿದ್ದಾರೆ. ಹಾಗೆ ಎಸ್ಟೇಟ್ ಸಮಸ್ಯೆ ಬಗೆಹರಿಸಿ ಅದನ್ನು ಭೂಮಿಕಾ ಹೆಸರಿಗೆ ಮಾಡುವ ನಿರ್ಧಾರವನ್ನು ಕೂಡಾ ಮಾಡಿದ್ದಾನೆ ಗೌತಮ್. ಭೂಮಿಕಾ ಮತ್ತು ಗೌತಮ್ ಆ ಕಡೆ ಹೊರಟ ಕೂಡಲೇ ಇಲ್ಲಿ ಹೊಸದೊಂದು ಕುತಂತ್ರಕ್ಕೆ ವೇದಿಕೆ ಸಜ್ಜಾಗಿದೆ.

ಮಲ್ಲಿ (Malli) ಹಾಗೂ ಮಲ್ಲಿಯ ಹೊಟ್ಟೆಯಲ್ಲಿರೋ ಮಗುವಿನ ರಕ್ಷಣೆ ಜವಾಬ್ದಾರಿಯನ್ನು ಭೂಮಿಕಾ ವಹಿಸಿಕೊಂಡು ಜಾಗ್ರತೆ ವಹಿಸಿದ್ದಳು. ಇನ್ನು ಜೈದೇವ್ ಕೂಡಾ ಎಲ್ಲರೂ ತನ್ನನ್ನ ಬದಲಾಗಿದ್ದೇನೆ ಅಂತ ನಂಬಬೇಕೆನ್ನುವ ಕಾರಣದಿಂದ ನಾಟಕ ಮಾಡ್ತಾ ಗೌತಮ್, ಭೂಮಿಕಾ ಮತ್ತು ಮಲ್ಲಿಯನ್ನ ನಂಬಿಸೋದ್ರಲ್ಲಿ ಬಹುತೇಕ ಸಕ್ಸಸ್ ಕೂಡಾ ಆಗಿದ್ದಾಗಿದೆ.

ಗೌತಮ್ ಮತ್ತು ಭೂಮಿಕಾ ಹೋದ ಕೂಡಲೇ ಶಕುಂತಲಾ (Shakuntala), ನಿನ್ನ ಕಾವಲು ಕಾಯೋ ಅಕ್ಕ ಹೊರಟ್ದಿದ್ದಾಯ್ತು, ಇನ್ನು ನಿನ್ನ ಕಳಿಸೋ ಸಮಯ ಅಂತ ಆಲೋಚನೆ ಮಾಡಿದ್ದಾಳೆ. ಅಲ್ಲಿಗೆ ಮಲ್ಲಿಗೆ ಒಂದು ಗತಿಯನ್ನು ಕಾಣಿಸೋಕೆ ಸಜ್ಜಾಗಿದ್ದಾಳೆ ಶಕುಂತಲಾದೇವಿ. ಎಲ್ಲಾ ಪ್ಲ್ಯಾನ್ ಮಾಡಿದ್ದೀನಿ ಅಂತ ಶಕುಂತಲಾ ಹೇಳೋವಾಗ್ಲೇ ಅಲ್ಲಿಗೆ ಬರ್ತಾನೆ ಜೈದೇವ್.

ನಿನ್ನ ಪ್ಲಾನ್ ಸಕ್ಸಸ್ ಆಗೋಕೆ ನಾನು ಬಿಡಲ್ಲ ಅಂತ ಮೊದಲು ಆತಂಕ ಉಂಟು ಮಾಡೋ ಅವ್ನು ನಂತರ, ಈ ನಿನ್ನ ಮಗ ಬದಲಾದೆ ಅಂದ್ಕೊಂಡ್ಯ. ಬದಲಾಗೋ ಜನ್ಮನ ಇದು. ನಿನ್ನ ಮಗ ಹೇಗೆ ಬದಲಾದ ಎಂದು ತಿಳ್ಕೊಂಡೆ ಅಂತ ತನ್ನ ಅಮ್ಮನ ಮುಂದೆ ತನ್ನ ಅಸಲಿ ರೂಪ ತೋರಿಸ್ತಾ, ಮಲ್ಲಿಗೆ, ಗೌತಮ್‌, ಭೂಮಿಕಾಗೆ ನನ್ನ ಮೇಲೆ ನಂಬಿಕೆ ಬರ್ಸೋದಕ್ಕೆ ಇದೆಲ್ಲಾ ಮಾಡಿದ್ದಾಗಿ ಹೇಳಿದ್ದಾನೆ.

ಜೈದೇವ್ (Jaidev), ಶಕುಂತಲಾ ಈಗ ಮಲ್ಲಿ ಪ್ರಾಣಕ್ಕೆ ಕುತ್ತು ತರೋದಕ್ಕೆ ಸಿದ್ಧವಾಗಿದ್ದಾರೆ. ಮಲ್ಲಿನ ಈಗ ಕಾಪಾಡೋದು ಯಾರು? ಅಮ್ಮ ಮಗ ತಮ್ಮ ಕುತಂತ್ರದಲ್ಲಿ ಸಕ್ಸಸ್ ಆಗೇ ಬಿಡ್ತಾರಾ? ಇಂತಹ ಒಂದಷ್ಟು ಪ್ರಶ್ನೆಗಳು ಈಗ ಪ್ರೇಕ್ಷಕರನ್ನ ಕಾಡ್ತಾ ಇದೆ. ಇದಕ್ಕೆಲ್ಲಾ ಉತ್ತರ ಇವತ್ತಿನ ಎಪಿಸೋಡ್ ನಲ್ಲಿ ಸಿಗಬಹುದು ಅನ್ನೋ ನಿರೀಕ್ಷೆಗಳು ಇವೆ.

Leave a Comment