Amruthadhaare Serial : ಅಮೃತಧಾರೆ ಸೀರಿಯಲ್ ನ (Amruthadhaare Serial) ಇತ್ತೀಚಿನ ಎಪಿಸೋಡ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡಿದೆ. ಒಂದು ಕಡೆ ಮಲ್ಲಿಯನ್ನು ಕಾಪಾಡೋದಕ್ಕೆ ಮಹಿಮಾ ಮಾಡಿದ ಪ್ರಯತ್ನ, ಜೈದೇವ್ ಮತ್ತು ಶಕುಂತಲಾಗೆ ತಾವು ಮಾಡಿದ ಪ್ಲಾನ್ ಫ್ಲಾಪ್ ಆಯ್ತಲ್ವಾ ಅನ್ನೋ ವೇದನೆ ಇವೆಲ್ಲವುಗಳಿಗೆ ವಿಭಿನ್ನವಾಗಿ ಚಿಕ್ಕಮಗಳೂರಿನಲ್ಲಿ (Chikkamagaluru) ಗೌತಮ್, ಭೂಮಿಕಾ ಮತ್ತು ಆನಂದ್ ಅವರ ಪತ್ನಿ ಕಾಣಿಸಿಕೊಳ್ತಿರೋ ಎಪಿಸೋಡ್ ಗಳಂತೂ ಮನರಂಜನೆ ನೀಡ್ತಿವೆ.
![](https://news9kannada.com/wp-content/uploads/2024/05/20240521_104518-1024x576.webp)
ಚಿಕ್ಕಮಗಳೂರಿನಲ್ಲಿ ಭೂಮಿಕಾ (Bhumika) ಮತ್ತು ಗೌತಮ್ ಗೆ (Gowtham) ಒಂದಷ್ಟು ಸುಂದರವಾದ ಕ್ಷಣಗಳನ್ನು ಕಳೆಯೋ ಅವಕಾಶವನ್ನ ಮಾಡಿಕೊಟ್ಟಿದ್ದಾರೆ ಗೌತಮ್ ಅವರ ಅಜ್ಜಿ. ಅಲ್ಲದೇ ಅವರ ಕಾಳಜಿ ವಹಿಸೋಕೆ ಗೌತಮ್ ನ ಗೆಳೆಯ ಆನಂದ್ ಪತ್ನಿ ಸಮೇತ ಎಸ್ಟೇಟ್ ನಲ್ಲಿ ಹಾಜರಿದ್ದು, ಗೆಳೆಯನ ಕಡೆಗೆ ಗಮನವನ್ನು ನೀಡಿ, ಗೆಳೆಯ ತನ್ನ ಪ್ರೀತಿಯನ್ನು ಭೂಮಿಕಾಗೆ ಹೇಳೋಕೆ ಸಹಾಯ ಮಾಡ್ತಾ ಇದ್ದಾನೆ.
![](https://news9kannada.com/wp-content/uploads/2024/05/20240521_104542-1024x576.webp)
ಈ ಮಧ್ಯೆ ಗೌತಮ್ ಭೂಮಿಕಾಗೆ ತಮ್ಮ ಎಸ್ಟೇಟ್ ನ ತೋರಿಸೋಕೆ ಕರೆದುಕೊಂಡು ಹೋಗಿದ್ದು, ಈ ವೇಳೆ ಕಾಫಿ ಫ್ಯಾಕ್ಟರಿಗೆ (coffee factory) ಕರೆದುಕೊಂಡು ಬಂದಿದ್ದು, ಅದರ ಬಗ್ಗೆ ಒಂದಷ್ಟು ವಿವರಗಳನ್ನು ಹೇಳಿ ಈ ಬ್ಯುಸಿನೆಸ್ ನಿಂದಾನೇ ಇವತ್ತು ನಾವು ಇಷ್ಟು ಬೆಳೆದಿರೋದು ಅಂತ ಹೇಳಿದ್ದಾನೆ. ಭೂಮಿಕಾ ಫ್ಯಾಕ್ಟರಿಯನ್ನು ನೋಡಿ ಬಹಳ ಖುಷಿಯಾಗಿದ್ದಾಳೆ.
![](https://news9kannada.com/wp-content/uploads/2024/05/20240521_104633-1024x576.webp)
ಕಾಫಿ ಫ್ಯಾಕ್ಟರಿ ಗೆ ಭಾಗ್ಯ ಕಾಫಿ ವರ್ಕ್ಸ್ ಅನ್ನೋ ಹೆಸರನ್ನು ನೋಡಿದ ಭೂಮಿಕಾ ಆ ಹೆಸರು ಯಾರದ್ದು ಅಂತ ಕೇಳಿದ್ದಾಳೆ. ಆನಂದ್ ಅದಕ್ಕೆ ಅದು ಗೌತಮ್ ಅವರ ತಾಯಿಯ ಹೆಸರು ಅಂತ ಹೇಳಿದ್ದನ್ನು ಕೇಳಿ ಭೂಮಿಕಾಗೆ ಆಶ್ಚರ್ಯ ಆಗಿದೆ. ಇಲ್ಲಿವರೆಗೆ ಗೌತಮ್ ಅವರ ತಾಯಿಯ ಬಗ್ಗೆ ಏನೂ ಗೊತ್ತಿಲ್ಲದ ಭೂಮಿಕಾಗೆ ಮೊದಲ ಸಲ ಗೌತಮ್ ಅವರ ತಾಯಿ ಹೆಸರು ಗೊತ್ತಾಗಿದೆ.
![](https://news9kannada.com/wp-content/uploads/2024/05/20240521_104607-1024x576.webp)
ಆಗ ಭೂಮಿಕಾ, ಗೌತಮ್ ಅವ್ರೇ ಕಾಫಿ ಫ್ಯಾಕ್ಟರಿಗೆ ನಿಮ್ಮ ತಾಯಿ ಹೆಸರನ್ನ ಇಟ್ಟಿದ್ದೀರಾ, ನಾನು ಅವರ ಬಗ್ಗೆ ತಿಳ್ಕೋಬಹುದಾ ಅಂತ ಪ್ರಶ್ನೆಯನ್ನ ಕೇಳಿದ್ದಾಳೆ. ಭೂಮಿಕಾಗೆ ಗೌತಮ್ ತನ್ನ ತಾಯಿಯ ಬಗ್ಗೆ ಹೇಳ್ತಾನಾ? ಅಥವಾ ಯಾವುದಾದ್ರೂ ನೆಪವೊಡ್ಡಿ ಆ ಮಾತನ್ನ ಬದಲಿಸಿ ಬಿಡ್ತಾನಾ? ಅನ್ನೋದು ಈಗ ಎಲ್ಲರ ಪ್ರಶ್ನೆಯಾಗಿದೆ. ಉತ್ತರಕ್ಕಾಗಿ ಕಾದು ನೋಡಬೇಕಾಗಿದೆ.