Malashree: ಸ್ಯಾಂಡಲ್ವುಡ್ ನ ಕನಸಿನ ರಾಣಿ ಎಂದೇ ಹೆಸರನ್ನು ಪಡೆದಿರುವ ನಟಿ ಮಾಲಾಶ್ರೀ (Malashree) ಅವರಿಗೆ ಕನ್ನಡ ಸಿನಿಮಾ ರಂಗದಲ್ಲೊಂದು ವಿಶೇಷವಾದ ಸ್ಥಾನ ಮಾನವಿದೆ. ಮಾಲಾಶ್ರೀ ಅವರು ಮೂಲತಃ ತೆಲುಗಿನಿಂದ ಬಂದವರು, ತೆಲುಗು ಸಿನಿಮಾಗಳಲ್ಲೂ ನಟಿಸಿದವರು. ಆದರೆ ನಟಿ ಹೆಚ್ಚು ಜನಪ್ರಿಯತೆ ಪಡೆದಿದ್ದು, ಸ್ಟಾರ್ ನಟಿಯಾಗಿ ಜನ ಮನ ಗೆದ್ದು, ಜನರ ಅಚ್ಚು ಮೆಚ್ಚಿನ ನಟಿಯಾಗಿದ್ದ ಮಾತ್ರ ಕನ್ನಡದಲ್ಲಿ ಎನ್ನುವುದು ಅಕ್ಷರಶಃ ಸತ್ಯ.
![](https://news9kannada.com/wp-content/uploads/2024/03/FB_IMG_1711777797273.jpg)
ಮಾಲಾಶ್ರೀ ಅವರು ಕನ್ನಡ ಸಿನಿಮಾ ರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡವರು. ಈಗ ಅವರ ಮಗಳು ಆರಾಧನಾ ರಾಮ್ ಅವರು ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಯನ್ನು ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
![](https://news9kannada.com/wp-content/uploads/2024/03/FB_IMG_1711777793573.jpg)
ಆರಾಧನಾ ಅವರ ಮೊದಲ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿದ್ದು, ಆರಾಧನಾ ಸ್ಯಾಂಡಲ್ವುಡ್ ನ ಭವಿಷ್ಯದ ಭರವಸೆಯ ನಟಿ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದು, ಅಪಾರ ಸಿನಿ ಪ್ರೇಮಿಗಳ ಹೃದಯವನ್ನು ಗೆದ್ದು ಬೀಗುತ್ತಿದ್ದಾರೆ. ಅಭಿಮಾನಿಗಳು ಆರಾಧನಾ ಅವರ ಮುಂದಿನ ಸಿನಿಮಾ ನಿರೀಕ್ಷೆಯಲ್ಲಿದ್ದಾರೆ.
![](https://news9kannada.com/wp-content/uploads/2024/03/FB_IMG_1711777791184.jpg)
ಸಿನಿಮಾದ ನಂತರ ಇದೀಗ ಮಾಲಾಶ್ರೀ ಮತ್ತು ಅವರ ಮಗಳು ಆರಾಧನಾ ಅವರು ಮುಂಬೈ ಮಹಾನಗರಕ್ಕೆ ಭೇಟಿಯನ್ನು ನೀಡಿದ್ದು, ಅಲ್ಲಿನ ಸುಪ್ರಸಿದ್ಧ ಸಿದ್ಧಿ ವಿನಾಯದ ದೇಗುಲಕ್ಕೆ ಭೇಟಿಯನ್ನು ನೀಡಿ ದೇವರ ದರ್ಶನವನ್ನು ಮಾಡಿದ್ದಾರೆ.
![](https://news9kannada.com/wp-content/uploads/2024/03/FB_IMG_1711777788702.jpg)
ಮಾಲಾಶ್ರೀ ಮತ್ತು ಆರಾಧನಾ ಅವರು ಸಿದ್ಧಿ ವಿನಾಯಕ ದರ್ಶನವನ್ನು ಮಾಡಿದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಗಳನ್ನು ನೀಡುತ್ತಾ ಕಾಮೆಂಟ್ ಗಳನ್ನು ಸಹಾ ಮಾಡುತ್ತಿದ್ದಾರೆ.