Current affairs

Actor Kishore: ನರಸತ್ತ ಚುನಾವಣಾ ಆಯೋಗದ ಬೆಂಬಲವೆಂದು ಗಂಭೀರ ಆರೋಪ ಮಾಡಿದ ನಟ ಕಿಶೋರ್; ಮೋದಿ ವಿರುದ್ಧ ಅಸಮಾಧಾನ

Actor Kishore : ನಟ ಕಿಶೋರ್ (Actor Kishore) ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಚುನಾವಣಾ ಆಯೋಗ (Election Commission) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತಾಗಿ ಅಸಮಾಧಾನ ಹೊರ ಹಾಕುತ್ತಾ ಒಂದು ದೀರ್ಘವಾದ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ‌ಆಗಾಗ ಕೇಂದ್ರ ಸರ್ಕಾರದ ಕುರಿತಾಗಿ ತಮ್ಮ ಅಸಮಾಧಾನವನ್ನು ಹಂಚಿಕೊಳ್ಳುವ ನಟ ಈಗ ಮತ್ತೊಮ್ಮೆ ಬೇಸರವನ್ನು ಹೊರ ಹಾಕಿದ್ದು ತಮ್ಮ ಪೋಸ್ಟ್ ನಲ್ಲಿ ಚುನಾವಣಾ ಆಯೋಗವು ಮೋದಿ ಬೆಂಬಲಕ್ಕಿದೆ ಎನ್ನುವ ಮಾತನ್ನು ಹೇಳಿದ್ದಾರೆ.

ಕಿಶೋರ್ ತಮ್ಮ ಪೋಸ್ಟ್ ನಲ್ಲಿ, ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅದನ್ನು ಮೆಚ್ಚಬೇಕು.. ಇಲ್ಲಾ ಪೈಪೋಟಿ ಮಾಡಲೇಬೇಕೆಂದರೆ ಅವರಿಗಿಂತ ಒಳ್ಳೆಯದನ್ನೇನಾದರೂ ಮಾಡಬೇಕು. MSP, ಸೇನಾ ಭರ್ತಿ, ಉದ್ಯೊಗ ಖಾತ್ರಿ, ಆರೋಗ್ಯ ಮತ್ತು ವಿದ್ಯಾಭದ್ರತೆ, ಬಡತನ ಮಹಿಳಾ ಭತ್ತೆ, ವೃದ್ಧಾಪ್ಯ ಸ್ಥಿರತೆ ಯಂತಹ ಅತ್ಯಾವಶ್ಯಕ ಗ್ಯಾರಂಟಿಗಳ ಜೊತೆ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ನ್ಯಾಯಾಂಗದ ಸಮಾನ ಅಧಿಕಾರದ ಭರವಸೆ , ಪ್ರಜಾಪ್ರಭುತ್ವವನ್ನು ಪ್ರಭಲಗೊಳಿಸುವ ಭರವಸೆಗಳು ಪ್ರಬುದ್ಧ ಪ್ರಗತಿಶೀಲ ಜನಪರ ಪ್ರಣಾಳಿಕೆಯೆಂದು ಎಲ್ಲರೂ ಶ್ಲಾಘನೀಯ ಎನ್ನುತ್ತಿರುವಾಗ.

ಈ ಕಾಮಾಲೆ ಕಣ್ಣಿನ ಸುಳ್ಳ ಭ್ರಷ್ಠ ಮನುಷ್ಯನಿಗೆ ಅದರಲ್ಲೂ , 48 ಪುಟದಲ್ಲಿ ನಮಗೆ ಎಲ್ಲೂ ಕಾಣದ ಹಿಂದೂ-ಮುಸ್ಲಿಂ ಕಾಣಿಸಿದರೆ ಏನು ಮಾಡುವುದು ?? (ಇಂಟರ್ನೆಟ್ಟಿನಲ್ಲಿ ಎಲ್ಲರಿಗೂ ಪರಿಶೀಲಿಸಲು ಲಭ್ಯವಿದೆ) ಅದಲ್ಲದೇ ಇದು ಇವನದ್ದೇ ವಿಚಾರಧಾರೆಯ ಮುಸ್ಲಿಂ ಲೀಗ್ ಎನ್ನುತ್ತಾನೆ.. ಪ್ರಬುದ್ಧ ಪ್ರಗತಿಶೀಲ ಜನಪರ ಕೆಲಸದಿಂದ ದೇಶ ಹಾಳಾಗುತ್ತದೆಂದು ಹೇಳುತ್ತಾನೆ. ಅವರು ಮೋದಾನಿಯ ದಾನವೀ ಶಕ್ತಿಯೆಂದರೆ ಇವನು ಅದನ್ನೇ ತಿರುಚಿ ಅವರು ಸ್ತ್ರೀ ಶಕ್ತಿಯ ವಿರೋಧಿಗಳು ಎನ್ನುತ್ತಾನೆ.

ಮಾಡಿದ ಕೆಲಸದ ಮೇಲೆ ಓಟು ಕೇಳುವ ಯೋಗ್ಯತೆಯಿಲ್ಲದೇ ಕಡೇ ಪಕ್ಷ ಇನ್ನೊಬ್ಬರಿಂದ ನೋಡಿ ಕಲಿಯಲು ಕೂಡ ಬರದೇ, ಎಲ್ಲದಕ್ಕೂ ಬರೀ ದ್ವೇಷದ ಬಣ್ಣ ಹಚ್ಚುವ, ಚುನಾವಣಾ ನೀತಿ ಸಂಹಿತೆಯನ್ನು ಧೂಳೀಪಟ ಮಾಡುವ ಹೊಲಸು ಕೆಲಸವಷ್ಟೇ.. ನರಸತ್ತ ಚುನಾವಣಾ ಆಯೋಗ ಬೆಂಬಲಕ್ಕಿರುವಾಗ ಕೆಲಸ ಮಾಡುವುದಕ್ಕಿಂತ ಸುಳ್ಳು ಹೇಳುವುದು ಅವನಿಗೆ ಸಲೀಸಲ್ಲವೇ..
ಯಾರೇ ಅಧಿಕಾರಕ್ಕೆ ಬರಲಿ ದೇಶ ನಮ್ಮದು. ಧರ್ಮ ದ್ವೇಷ ಹಣದ ಮಂಕುಬೂದಿಗೆ ಮರುಳಾಗಿ ಪ್ರಶ್ನಿಸದೆ ಬಿಟ್ಟರೆ, ಇದೇಗತಿ ಎಂದು ಬರೆದುಕೊಂಡಿದ್ದಾರೆ.

Soma Shekar

Recent Posts

Prabhas: ವಿಶೇಷ ವ್ಯಕ್ತಿ, ವೈರಲ್ ಆಗ್ತಿದೆ ಪ್ರಭಾಸ್ ಪೋಸ್ಟ್, ಥ್ರಿಲ್ ಆದ ಫ್ಯಾನ್ಸ್ , ಶೀಘ್ರದಲ್ಲೇ ತಿಳಿಸ್ತೀನಿ ಅಂದ ನಟ

Prabhas : ಬಾಹುಬಲಿ (Bahubali) ಸಿನಿಮಾ ಖ್ಯಾತಿಯ ನಟ ಪ್ರಭಾಸ್ (Prabhas) ವಿಚಾರ ಬಂದಾಗಲೆಲ್ಲಾ ಅಲ್ಲಿ ಒಂದು ವಿಷಯ ಹೆಚ್ಚು…

19 mins ago

Puttakkana Makkalu: ಸಹನಾ ಸತ್ತಿಲ್ಲ, ಕೊನೆಗೂ ಸಿಕ್ಕೇ ಬಿಡ್ತು ಸುಳಿವು; ಸುಮ ಮಾತಿಗೆ ಎಲ್ಲರೂ ಶಾಕ್ !

Puttakkana Makkalu: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಕಳೆದ ಕೆಲವು ದಿನಗಳಿಂದಲೂ ಸಹಾ ಸಹನಾ…

3 hours ago

Kangana Ranaut: ಎಮೆರ್ಜೆನ್ಸಿ ಸಿನಿಮಾಕ್ಕಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ದೊಡ್ಡ ಶಾಕ್ ಕೊಟ್ಟ ಕಂಗನಾ ರಣಾವತ್

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದ್ಯಕ್ಕೆ ರಾಜಕೀಯದ ವಿಚಾರವಾಗಿ ಭರ್ಜರಿ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟಿ…

5 hours ago

SeethaRama: ಭಾರ್ಗವಿಯ ಕುತಂತ್ರಕ್ಕೆ ಬಲಿಯಾದ ಅಶೋಕ; ಪ್ರಜ್ಞೆ ತಪ್ಪಿದ ಅಶೋಕನ ರಕ್ಷಣೆಗೆ ಯಾರು ಬರ್ತಾರೆ?

SeethaRama : ಸೀತಾಳ ಮನೆಗೆ ದೇಸಾಯಿ ಕುಟುಂಬದವರೆಲ್ಲರೂ ಆಗಮಿಸಿದ್ದಾರೆ. ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಬಹಳ ಖುಷಿಯಿಂದ ಮಾಡುತ್ತಿದ್ದಾರೆ ಸೂರ್ಯ…

8 hours ago

Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…

1 day ago

Chandini: ‘ಎ’ ನನ್ನ ಜೀವನ ಬದಲಿಸಿದ ಸಿನಿಮಾ: ರೀ ರಿಲೀಸ್ ವೇಳೆ ಎ ಸಿನಿಮಾ ನಟಿ ಚಾಂದಿನಿ ಮನಸ್ಸಿನ ಮಾತು

Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು…

1 day ago

This website uses cookies.