News

Thalapathi Vijay: ಸ್ಟಾರ್ ನಟ ದಳಪತಿ ವಿಜಯ್ ಮೇಲೆ ದೂರು ದಾಖಲು ಮಾಡಿದ ಸಾಮಾನ ವ್ಯಕ್ತಿ

Thalapathi Vijay: ಪ್ರಸ್ತುತ ದೇಶದ ಎಲ್ಲಾ ಕಡೆಗಳಲ್ಲೂ ಸಹಾ ಲೋಕಸಭಾ ಚುನಾವಣೆಯ (Lok Sabha Elections) ಕಾವು ಬಹಳ ಜೋರಾಗಿದೆ. ಹಲವು ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆದಿದ್ದು ಇದರಲ್ಲಿ ತಮಿಳುನಾಡು ಕೂಡಾ ಸೇರಿದೆ. ಈ ಬಾರಿಯ ಚುನಾವಣೆಯಲ್ಲಿ ತಮಿಳಿನ ಸ್ಟಾರ್ ನಟರೆಲ್ಲರೂ ತಮ್ಮ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಇದರಲ್ಲಿ ದಳಪತಿ ವಿಜಯ್ (Thalapathi Vijay) ಅವರು ಕೂಡಾ ಸೇರಿದ್ದಾರೆ. ಆದರೆ ವಿಜಯ್ ನಿಂದ ತಮಗೆ ತೊಂದರೆಯಾಗಿದೆ ಎನ್ನುವ ಕಾರಣಕ್ಕೆ ಸಾಮಾನ್ಯ ವ್ಯಕ್ತಿಯೊಬ್ಬರು ನಟನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.

ತಮಿಳು ಸಿನಿಮಾ ರಂಗದಲ್ಲಿ ಸ್ಟಾರ್ ಹೀರೋ ಆಗಿ ಗುರ್ತಿಸಿಕೊಂಡಿರೋ ನಟ ದಳಪತಿ ವಿಜಯ್ ಕೆಲವೇ ದಿನಗಳ ಹಿಂದೆಯಷ್ಟೇ ತಮ್ಮದೇ ಆದ ಹೊಸ ಪಕ್ಷವನ್ನು ಕಟ್ಟಿದ್ದು, ಇದಕ್ಕೆ ‘ತಮಿಳ್ ವೆಟ್ರಿ ಕಳಗಂ’ ಎನ್ನುವ ಹೆಸರನ್ನು ನೀಡಿದ್ದಾರೆ. ಇದೇ ಶುಕ್ರವಾರ ತಮಿಳುನಾಡು (Tamilnadu) ಮತ್ತು ಪುದುಚೇರಿಯಲ್ಲಿ ಒಟ್ಟು 40 ಸಂಸದೀಯ ಸ್ಥಾನಗಳಿಗೆ ಚುನಾವಣೆ ನಡೆದಿದೆ. ದಳಪತಿ ವಿಜಯ್ ಅವರು ರಷ್ಯಾದಲ್ಲಿ ಶೂಟಿಂಗ್ ನಲ್ಲಿ ಇದ್ದವರು, ಬಿಡುವು ಮಾಡಿಕೊಂಡು ಮತದಾನ ಮಾಡುವುದಕ್ಕಾಗಿ ಚೆನ್ನೈಗೆ ಬಂದಿದ್ದರು.

ಅವರು ಸ್ಥಳೀಯ ನೀಲಂಗರಾಯಿ ಮತಗಟ್ಟೆಗೆ ಮತವನ್ನು ಚಲಾಯಿಸಲು ತಮ್ಮ ಬಳಗ ಮತ್ತು ಹಿಂಬಾಲಕರ ಜೊತೆಗೆ ಬಂದಿದ್ದಾರೆ. ವಿಜಯ್ ಅವರು ಮತದಾನವನ್ನು ಮಾಡಲು ಬಂದಾಗ ಅವರ ಜೊತೆಗೆ ಸುಮಾರು 200ಕ್ಕೂ ಹೆಚ್ಚು ಹಿಂಬಾಲಕರು ಮತ್ತು ಬೆಂಬಲಿಗರು ಸಹಾ ಏಕಕಾಲಕ್ಕೆ ಮತಗಟ್ಟೆಗೆ ಆಗಮಿಸಿದ ಕಾರಣ ಇದು ಸಾಮಾನ್ಯ ಮತದಾರರಿಗೆ ತೊಂದರೆಯನ್ನು ಉಂಟು ಮಾಡಿದೆ.

ಈ ಹಿನ್ನೆಲೆಯಲ್ಲಿ ಚೈನ್ನೈನ (Chennai) ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ನಟರ ವಿರುದ್ಧ ದೂರನ್ನು ದಾಖಲು ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬರು ಸೆಲೆಬ್ರಿಟಿ ಇಂದ ಸಮಸ್ಯೆ ಉಂಟಾಯಿತು ಎಂದು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೋಲಿಸರು ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಈಗ ತಮಿಳುನಾಡಿನ ರಾಜಕೀಯ ವಲಯದಲ್ಲಿ ಕುತೂಹಲವನ್ನು ಮೂಡಿಸಿದೆ.

Soma Shekar

Recent Posts

Prabhas: ಅವರಿಬ್ಬರು ಸಲಿಂಗಕಾಮಿಗಳು, ಲಂಡನ್ ನಲ್ಲಿ ನನ್ನ ಗಂಡನ ಜೊತೆ, ಸುಚಿತ್ರಾ ಶಾಕಿಂಗ್ ಹೇಳಿಕೆ

Suchithra : ಗಾಯಕಿ ಸುಚಿತ್ರಾ ರಾಮದುರೈ (Suchithra) ಅವರು ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ತಮಿಳು ನಟ ಕಾರ್ತಿಕ್…

13 hours ago

Prabhas: ವಿಶೇಷ ವ್ಯಕ್ತಿ, ವೈರಲ್ ಆಗ್ತಿದೆ ಪ್ರಭಾಸ್ ಪೋಸ್ಟ್, ಥ್ರಿಲ್ ಆದ ಫ್ಯಾನ್ಸ್ , ಶೀಘ್ರದಲ್ಲೇ ತಿಳಿಸ್ತೀನಿ ಅಂದ ನಟ

Prabhas : ಬಾಹುಬಲಿ (Bahubali) ಸಿನಿಮಾ ಖ್ಯಾತಿಯ ನಟ ಪ್ರಭಾಸ್ (Prabhas) ವಿಚಾರ ಬಂದಾಗಲೆಲ್ಲಾ ಅಲ್ಲಿ ಒಂದು ವಿಷಯ ಹೆಚ್ಚು…

15 hours ago

Puttakkana Makkalu: ಸಹನಾ ಸತ್ತಿಲ್ಲ, ಕೊನೆಗೂ ಸಿಕ್ಕೇ ಬಿಡ್ತು ಸುಳಿವು; ಸುಮ ಮಾತಿಗೆ ಎಲ್ಲರೂ ಶಾಕ್ !

Puttakkana Makkalu: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಕಳೆದ ಕೆಲವು ದಿನಗಳಿಂದಲೂ ಸಹಾ ಸಹನಾ…

17 hours ago

Kangana Ranaut: ಎಮೆರ್ಜೆನ್ಸಿ ಸಿನಿಮಾಕ್ಕಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ದೊಡ್ಡ ಶಾಕ್ ಕೊಟ್ಟ ಕಂಗನಾ ರಣಾವತ್

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದ್ಯಕ್ಕೆ ರಾಜಕೀಯದ ವಿಚಾರವಾಗಿ ಭರ್ಜರಿ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟಿ…

20 hours ago

SeethaRama: ಭಾರ್ಗವಿಯ ಕುತಂತ್ರಕ್ಕೆ ಬಲಿಯಾದ ಅಶೋಕ; ಪ್ರಜ್ಞೆ ತಪ್ಪಿದ ಅಶೋಕನ ರಕ್ಷಣೆಗೆ ಯಾರು ಬರ್ತಾರೆ?

SeethaRama : ಸೀತಾಳ ಮನೆಗೆ ದೇಸಾಯಿ ಕುಟುಂಬದವರೆಲ್ಲರೂ ಆಗಮಿಸಿದ್ದಾರೆ. ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಬಹಳ ಖುಷಿಯಿಂದ ಮಾಡುತ್ತಿದ್ದಾರೆ ಸೂರ್ಯ…

22 hours ago

Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…

2 days ago

This website uses cookies.