Actor Darshan: ಹೊರಗೆ ಬಂದ್ಮೇಲೆ ರೇಣುಕಾಸ್ವಾಮಿ ಕುಟುಂಬ…! ನಟ‌ ದರ್ಶನ್ ಧನ್ವೀರ್ ಹತ್ರ ಹೇಳಿದ್ದಾದ್ರು ಏನು?

Written by Soma Shekar

Published on:

---Join Our Channel---

Actor Darshan: ನಟಿ ಪವಿತ್ರಗೌಡ (Pavithra Gowda) ಅವರಿಗೆ ಅಶ್ಲೀಲಕರ ಸಂದೇಶಗಳನ್ನು ಕಳಿಸಿದ್ದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನ ಕೊ ಲೆ (Renukaswamy Murder Case) ಮಾಡಲಾಗಿತ್ತು. ಈ ವಿಚಾರ ಹೊರ ಬಂದ ಕೂಡಲೇ ಸ್ಯಾಂಡಲ್ವುಡ್ ನ ಸ್ಟಾರ್ ನಟ ದರ್ಶನ್ (Actor Darshan) ಮತ್ತು ಪವಿತ್ರಾಗೌಡ ಸೇರಿದಂತೆ ಒಟ್ಟು ಹದಿನೇಳು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಹೊರಗೆ ನಟನ ಪರವಾಗಿ ಮತ್ತು ವಿರೋಧವಾಗಿ ಮಾತುಗಳು ಕೇಳಿ ಬರುತ್ತಿದೆ.

ಆರಂಭದಲ್ಲಿ ಸೈಲೆಂಟ್ ಆಗಿದ್ದ ಸೆಲೆಬ್ರಿಟಿಗಳು ದಿನ ಕಳೆದಂತೆ ಒಬ್ಬೊಬ್ಬರಾಗಿ ದರ್ಶನ್ ಅವರ ಪರವಾಗಿ ದನಿ ಎತ್ತಲು ಆರಂಭಿಸಿದ್ದಾರೆ.‌ ಕಳೆದ ಕೆಲವು ದಿನಗಳಿಂದಲೂ ಸಹಾ ನಟನನ್ನು ಭೇಟಿ ಮಾಡೋದಕ್ಕೆ ಅವರ ಕುಟುಂಬಸ್ಥರು ಜೈಲಿಗೆ ಬರುತ್ತಿದ್ದಾರೆ. ಸ್ಯಾಂಡಲ್ವುಡ್ ನಲ್ಲಿರುವ ದರ್ಶನ್ ಅವರ ಆಪ್ತರು ಮತ್ತು ಸ್ನೇಹಿತರೂ ಸಹಾ ಒಬ್ಬೊಬ್ಬರೇ ಪರಪ್ಪನ ಅಗ್ರಹಾರದ ಕಡೆ ಮುಖ ಮಾಡಿದ್ದಾರೆ.

ಹೀಗೆ ದರ್ಶನ್ ಅವರನ್ನು ಭೇಟಿ ಮಾಡಲು ಇಂದು ಸ್ಯಾಂಡಲ್ವುಡ್ ನ ಯುವ ನಟನಾದಂತಹ ಧನ್ವೀರ್‌ ಗೌಡ (Dhanveer Gowda) ಅವರು ಜೈಲಿಗೆ ಭೇಟಿ‌ನೀಡಿದ್ದು, ದರ್ಶನ್ ಅವರ ಜೊತೆಗೆ ಸುಮಾರು 20 ನಿಮಿಷಗಳ ಕಾಲ ಮಾತನಾಡಿದ್ದಾರೆನ್ನಲಾಗಿದೆ. ಅಲ್ಲಿ ಅವರ ನಡುವೆ ನಡೆದ ಮಾತುಕತೆಯ ವಿಚಾರವಾಗಿ ಇದೀಗ ಮಾದ್ಯಮವೊಂದು ಸುದ್ದಿ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.

ಧನ್ವೀರ್ ಮತ್ತು ದರ್ಶನ್ ಅವರ ಭೇಟಿಯ ವೇಳೆಯಲ್ಲಿ ನಟ ಸ್ಯಾಂಡಲ್ವುಡ್ ನಲ್ಲಿ ಯಾವ ಸಿನಿಮಾ ರಿಲೀಸ್ ಆಗ್ತಿದೆ? ಏನೆಲ್ಲಾ ನಡೀತಿದೆ ಎಂದು ಕೇಳಿದ್ದಾರೆನ್ನಲಾಗಿದೆ. ಅಲ್ಲದೇ ಧನ್ವೀರ್ ಗೆ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುವಂತೆಯೂ ಹೇಳಿದ್ದಾರಂತೆ. ಜೈಲು ಊಟ ಒಗ್ಗದ ಕಾರಣದಿಂದ ದರ್ಶನ್ ಅವರು ತೂಕ ಕಡಿಮೆಯಾಗಿದ್ದಾರೆ, ಸಣ್ಣ ಆಗಿದ್ದಾರೆನ್ನಲಾಗಿದೆ.

ಇಷ್ಟು ಮಾತ್ರವಲ್ಲದೇ ಜೈಲಿನಿಂದ ಹೊರ ಬಂದ ಮೇಲೆ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಹಾ ನೆರವು ನೀಡುವ ಚಿಂತನೆಯಲ್ಲಿ ದರ್ಶನ್ ಇದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಸಂಕಟದಲ್ಲೇ ಮಾತನಾಡಿದ್ದಾರೆ ಎನ್ನಲಾಗಿದೆ. ತಾವು ಸಂಕಟದಲ್ಲಿ ಇದ್ದರೂ ಸಹಾ ಅಭಿಮಾನಿಗಳಿಗೆ ಮೌನವಾಗಿ ಇರುವಂತೆ ಕೋರಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

Leave a Comment