Crime News : ವಿದ್ಯಾರ್ಥಿ ಜೊತೆ ಶಿಕ್ಷಕಿ ಕಾಮದಾಟ, ಅ ತ್ಯಾ ಚಾರ; ಕೊನೆಗೆ ಯುವಕನಿಗೆ ಆಗಿದ್ದೇ‌ನು?

Written by Soma Shekar

Published on:

---Join Our Channel---

Crime News: ಪ್ರೇಮ ಹಾಗೂ ಕಾಮದ ಹುಚ್ಚಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ (Crime News) ಏರಿಕೆ ಆಗುತ್ತಲೇ ಇದೆ.‌ ಇಂತಹುದೇ ಒಂದು ಅಪರಾಧ ಪ್ರಕರಣದಲ್ಲಿ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡಬೇಕಾದ ಶಿಕ್ಷಕಿಯೇ (Teacher) ವಿದ್ಯಾರ್ಥಿಯನ್ನು ತನ್ನ ಕಾಮಕ್ಕಾಗಿ ಬಳಸಿಕೊಂಡು, ಅನಂತರ ಅವರ ಜೀವಕ್ಕೆ ಕುತ್ತು ತಂದಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

ಇಂದೋರ್‌ನ 19 ವರ್ಷ ವಯಸ್ಸಿನ ಫಾರ್ಮಸಿ ವಿದ್ಯಾರ್ಥಿ ಗೌರವ್ ಎನ್ನುವ ಯುವಕ ಕಳೆದ  ಮಂಗಳವಾರ ರಾತ್ರಿ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಗೌರವ್ ಮತ್ತು ಆತನ ಇಂಗ್ಲಿಷ್ ಶಿಕ್ಷಕಿ ಗೌರಿ ತಿವಾರಿ ಕಳೆದ 11 ತಿಂಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಇವೆಲ್ಲವುಗಳ ನಡುವೆಯೇ ಶಿಕ್ಷಕಿ ಗೌರವ್ ಮೇಲೆ ಅ ತ್ಯಾ ಚಾ ರ ಪ್ರಕರಣವನ್ನು ದಾಖಲು ಮಾಡಿದ್ದಳು.

ಆಕೆಯ ದೂರಿನ ಆಧಾರದ ಮೇಲೆ ಇಂದೋರ್ ಪೊಲೀಸರು ಗೌರವ್ ನನ್ನು ಬಂಧಿಸಿದ್ದರು ಎನ್ನಲಾಗಿದ್ದು, ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಹಿಂಪಡೆಯುವುದಕ್ಕೆ  ಪೊಲೀಸರು 3 ಲಕ್ಷ ರೂ. ಗಳ ಡಿಮ್ಯಾಂಡ್ ಮಾಡಿದ್ದರೆಂಬುದಾಗಿ ಗೌರವ್ ನ ತಂದೆ ಹೇಳಿದ್ದು, ಅವರು 45 ಸಾವಿರ ಕೊಟ್ಟು ಮಗನನ್ನು ಬಿಡಿಸಿದ್ದರಂತೆ.

ಆದರೆ ಠಾಣೆಯಿಂದ ಮರಳಿದ ಮೇಲೆ ತನ್ನ ಕೋಣೆ ಸೇರಿದ್ದ ಗೌರವ್ ಹೊರಗೆ ಬಂದಿಲ್ಲ, ಕೊನೆಗೆ ಆತನ ತಂಗಿ ಹೋಗಿ ನೋಡಿದಾಗ ಗೌರವ್ ಸಾವಿಗೆ ಶರಣಾಗಿರುವುದು ಕಂಡಿದೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಹೋದರೂ ಅಲ್ಲಿ ವೈದ್ಯರು ಗೌರವ್ ಮೃತಪಟ್ಟಿದ್ದಾನೆಂದು ದೃಢಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರು ಮಹಿಳಾ ಪೊಲೀಸ್ ಠಾಣೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಅಲ್ಲದೇ ಅಲ್ಲಿನ  ಸಿಐ ಕೌಶಲ್ಯ ಚೌಹಾಣ್ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಇನ್ನು ಇಂಗ್ಲಿಷ್ ಶಿಕ್ಷಕಿ ಗೌರವ್ ತನಗೆ ಬೆದರಿಕೆ ಹಾಕಿದ್ದ ಎಂದು ಆರೋಪ ಮಾಡಿದ್ದಾಳೆ. ತಮ್ಮ ಖಾಸಗಿ ವೀಡಿಯೊಗಳನ್ನು ಗೌರವ್ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಬೆದರಿಸಿದ್ದ ಎಂದು ಹೇಳಿದ್ದಾಳೆ.

ಗೌರವ್ ತಂದೆ ಆಕೆ ಹೇಳುತ್ತಿರುವುದು ಸುಳ್ಳು. ಕಳೆದ ಹನ್ನೊಂದು ತಿಂಗಳಿನಿಂದ ಮಗ ಆಕೆಯ ಬಳಿ ಕೋಚಿಂಗ್ ಗೆ ಹೋಗ್ತಿದ್ದ, ಆಕೆ ಹಣಕ್ಕಾಗಿ ಪೀಡಿಸುತ್ತಿದ್ದಳು. ಗೌರವ್ ಆಕೆಗೆ ಹಣ ನೀಡಲು ಮನೆಯಲ್ಲಿ ಹಣ ಕದಿಯುವಾಗ ಸಿಕ್ಕಿ ಬಿದ್ದಿದ್ದ, ಶಿಕ್ಷಕಿ ಹಣದ ಬೇಡಿಕೆ ಇಟ್ಟಿರುವ ವಿಚಾರವನ್ನು ಹೇಳಿದ್ದ ಎಂದಿದ್ದಾರೆ.

Sarabjot Singh: ನನಗೆ ಸರ್ಕಾರಿ ಉದ್ಯೋಗ ಬೇಡ, ಒಲಂಪಿಕ್ಸ್ ಪದಕ ವಿಜೇತನ ಶಾಕಿಂಗ್ ಘೋಷಣೆ, ಕಾರಣ ಏನು ಗೊತ್ತಾ?

Leave a Comment