SeethaRama Serial: ಕುತಂತ್ರ ಮಾಡುವ ಭಾರ್ಗವಿಗೆ ವಾರ್ನಿಂಗ್ ಕೊಟ್ಟ ಚಾಂದಿನಿ; ಶಾಕ್ ನಲ್ಲಿ ಭಾರ್ಗವಿ

Written by Soma Shekar

Published on:

---Join Our Channel---

SeethaRama Serial: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಸಾಲಿನಲ್ಲಿ ಒಂದು ಹೊಸ ಕಥಾಹಂದರದೊಂದಿಗೆ ಮೂಡಿ ಬಂದು, ಅಲ್ಪ ಸಮಯದಲ್ಲೇ ಅಪಾರ ಜನ ಮೆಚ್ಚುಗೆಯನ್ನು ಪಡೆದಿದೆ ಸೀತಾ ರಾಮ ಸೀರಿಯಲ್ (SeethaRama Serial). ಕಥೆಯಲ್ಲಿನ ಹೊಸ ತಿರುವುಗಳ ಮೂಲಕ ಇನ್ನಷ್ಟು ಮತ್ತಷ್ಟು ಎನ್ನುವಂತೆ ಮನರಂಜನೆಯನ್ನು ನೀಡುತ್ತಾ ಮುಂದೆ ಸಾಗಿರುವ ಸೀತಾ ರಾಮ ಸೀರಿಯಲ್ ನಲ್ಲಿ ಈಗ ಮತ್ತೊಂದು ಹೊಸ ಟ್ವಿಸ್ಟ್ ಎದುರಾಗಿದೆ. ಕುತಂತ್ರವನ್ನು ಕೂಲ್ ಆಗೇ ಪ್ಲಾನ್ ಮಾಡುವ ಭಾರ್ಗವಿಗೆ ತಲೆನೋವೊಂದು ಎದುರಾಗಿದೆ.

ರಾಮ್ ಮದುವೆ ಆಗಲೇಬಾರದೆನ್ನುವ ದುರುದ್ದೇಶದಿಂದ ರಾಮ್ ನ ಜೀವನಕ್ಕೆ ಚಾಂದಿನಿ (Chandini) ಪ್ರವೇಶಿಸುವಂತೆ ಮಾಡಿ, ಅವನನ್ನು ಚಾಂದಿನಿ ಪ್ರೀತಿಯಲ್ಲಿ ಬೀಳಿಸಿಕೊಂಡು, ಅನಂತರ ಅವನಿಂದ ದೂರ ಹೋಗುವಂತೆ ಪ್ಲಾನ್ ಮಾಡಿದ್ದ ಭಾರ್ಗವಿ (Bhargavi), ಯಾವಾಗ ರಾಮನ ಬದುಕಲ್ಲಿ ಸೀತಾಳ ಮೇಲೆ ಪ್ರೀತಿ ಇದೆಯೆಂದು ಗೊತ್ತಾಯ್ತೋ ಆಗ್ಲೇ ಚಾಂದನಿ ಯನ್ನು ಮತ್ತೆ ರಾಮನ ಬದುಕಿಗೆ ಎಂಟ್ರಿ ಕೊಡಿಸಿದ್ದಾಳೆ.

ಚಾಂದಿನಿಯ ಆಗಮನದಿಂದ ರಾಮನ ಮನಸ್ಸಿನಲ್ಲಿ ಹಳೆ ಪ್ರೇಮವು ಮತ್ತೆ ಅರಳಿಲ್ಲ. ಬದಲಾಗಿ ರಾಮ ಮತ್ತು ಸೀತಾ ತಮ್ಮ ಪ್ರೀತಿಯ ಭಾವನೆಗಳನ್ನು ಹಂಚಿಕೊಂಡಿದ್ದು, ರಾಮ್ ಸೀತಾಳನ್ನೇ ಮದುವೆಯಾಗುವ ನಿರ್ಧಾರವನ್ನು ಮಾಡಿದ್ದಾರೆ. ಆದರೆ ಅದನ್ನು ಇನ್ನೂ ಅವನು ಮನೆಯಲ್ಲಿ ಹೇಳಿಲ್ಲವಾದರೂ ಭಾರ್ಗವಿಗೆ ಮಾತ್ರ ಎಲ್ಲಾ ವಿಚಾರಗಳ ಅವಗಾಹನೆ ಇದ್ದು ತನ್ನ ಪ್ಲಾನ್ ಗಳನ್ನು ತಾನು ಮಾಡುತ್ತಿದ್ದಾಳೆ.

ಈಗ ರಾಮ್ ನ ಗೆಳೆಯ ಅಶೋಕ್ ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ. ಈ ವೇಳೆ ಚಾಂದಿನಿ ಭಾರ್ಗವಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾಳೆ. ರಾಮ್ ಜೊತೆ ನನ್ನ ಮದುವೇನಾ ನೀವೇ ಮಾಡಿಸಬೇಕು, ಋಣ ಎಲ್ಲಾ ಬೇಡ, ನಾನು ಇಲ್ಲಿ ಬಂದು ಇಷ್ಟೆಲ್ಲಾ ಮಾಡಿ ಕೊನೆಗೆ ಏನು ಪ್ರಯೋಜನ, ನೀವು ಏನ್ ಮಾಡ್ತಿರೋ ಗೊತ್ತಿಲ್ಲ , ನಾನು ಈ ಮನೆಗೆ ಸೊಸೆ ಆಗಬೇಕು ಇಲ್ಲಾಂದ್ರೆ ಅಂತ ಭಾರ್ಗವಿಗೆ ಚಾಂದಿನಿ ವಾರ್ನಿಂಗ್ ಕೊಟ್ಟಿದ್ದು, ಆಗ ಭಾರ್ಗವಿ ಇಲ್ಲಾಂದ್ರೆ ಏನು ಅಂತ ಕೇಳಿದ್ದಾಳೆ.

ಆಗ ಚಾಂದಿನಿ ಅಶೋಕ್ ಮದುವೆ ದಿನ ಹಿಂದಿನದೆಲ್ಲಾ ನಾನು ಎಲ್ಲರಿಗೂ ಹೇಳ್ತೀನಿ. ರಾಮ್ ಹಿಂದೆ ಹೋಗೋಕೆ ಹೇಳಿದ್ದು, ಅವನನ್ನ ಲವ್ ಮಾಡೋಕೆ ಹೇಳಿದ್ದು, ಎಲ್ಲಾ ಆದ್ಮೇಲೆ ಅವನಿಗೆ ನೋವಾಗ್ಲಿ ಅಂತ ಬಿಟ್ಟು ಹೋಗೋಕೆ ಹೇಳಿದ್ದು, ಇದೆಲ್ಲದನ್ನ ನನ್ನ ಕೈಯಲ್ಲಿ ನೀವೇ ಮಾಡ್ಸಿದ್ದು ಅನ್ನೋ ಸತ್ಯವನ್ನ ಹೇಳ್ತೀನಿ ಅಂತ ಎಚ್ಚರಿಕೆ ಕೊಟ್ಟಿದ್ದಾಳೆ. ಚಾಂದಿನಿಯ ಈ ಎಚ್ಚರಿಕೆಗೆ ಭಾರ್ಗವಿ ಹೇಗೆ ಉತ್ತರ ಕೊಡ್ತಾಳೆ? ಏನು ಪ್ಲಾನ್ ಮಾಡ್ತಾಳೆ? ಅನ್ನೋದು ಈಗ ಕುತೂಹಲದ ವಿಷಯವಾಗಿದೆ.

Leave a Comment