Puttakkana Makkalu: ನಿರ್ಧಾರ ಬದಲಿಸಿದ ಸಹನಾ, ಅಕ್ಕನಿಗೆ ಗಟ್ಟಿ ವಾರ್ನಿಂಗ್ ಕೊಟ್ಟ ಕಾಳಿ, ಕಥೇಲಿ ಹೊಸ ಟ್ವಿಸ್ಟ್

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಸಹನಾ ಸಾವಿನ ನಂತರ ಪುಟ್ಟಕ್ಕನಿಗೆ ಅದೇ ನೋವು ಕಾಡುತ್ತಿದೆ. ಮಗಳನ್ನು ಮರೆಯಲಾಗದ ಪುಟ್ಟಕ್ಕ ಒಂದು ಸಲ ತಿಥಿ ಕಾರ್ಯವನ್ನು ಮಾಡುವಾಗ ನೋವಿನಿಂದ ಹುಷಾರು ತಪ್ಪಿದ್ದರಿಂದ ಆ ಕಾರ್ಯ ಅಲ್ಲಿಗೇ ನಿಂತಿತ್ತು. ಆದರೆ ಮಗಳು ಬದುಕಿರುವ ಸತ್ಯ ತಿಳಿಯದೇ, ಮಾಡಬೇಕಾಗಿರೋ ಕಾರ್ಯ ಮಾಡಿ ಮುಗಿಸಬೇಕೆಂದು ಮತ್ತೊಮ್ಮೆ ಎಲ್ಲರೂ ಸೇರಿ ಕಾರ್ಯವನ್ನ ಮಾಡೋಕೆ ಮುಂದಾಗಿದ್ದಾರೆ.

ಇದೇ ವೇಳೆ ಆಧಾರ್ ಕಾರ್ಡ್ ವಿಷಯವಾಗಿ ಸಹನಾ (Sahana) ದೇವಿಪುರಕ್ಕೆ ಬಂದಿದ್ದು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಯಾರ ಕಣ್ಣಿಗೂ ಬೀಳದ ಹಾಗೆ ಎಚ್ಚರಿಕೆ ವಹಿಸಿದ್ದಾಳೆ. ಆದರೂ ಮನೆಯವರು ಹೇಗಿದ್ದಾರೆ ಅಂತ ನೋಡೋಕೆ ಬಂದ ಅವಳಿಗೆ ಕಾರ್ಯ ಮಾಡ್ತಿರೋದು ಕಂಡಿದೆ ಅಲ್ಲಿ ತನ್ನ ಅವ್ವ ಪಡ್ತಿರೋ ದುಃಖ ನೋಡಿ ಎಲ್ಲರ ಮುಂದೆ ಹೋಗಿ ಬಿಡೋಣ ಅಂತ ಅವಳಿಗೆ ಅನಿಸಿದೆ.

ಕಾರ್ಯ ನಡೆಯೋ ಸಮಯದಲ್ಲೇ ಅಲ್ಲಿಗೆ ಬಂದ ರಾಜಿ (Raji) ಸಹನಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಳೆ. ಗಂಡನ ಮನೆಯವರಿಗೆ ತೊಂದರೆ ಕೊಟ್ಟು, ತವರು ಸೇರಿ ರಾತ್ರೋರಾತ್ರಿ ಯಾವೊನ ಜೊತೆ ಓಡಿಹೋದವಳು ಅಂದಿದ್ದು, ಇದರಿಂದ ಸಿಟ್ಟಿಗೆದ್ದ ಕಾಳಿ (Kali), ಹೀಗೆ ಮಾತಾಡಿದ್ರೆ ಇಲ್ಲಿ ನಡೆಯೋದು ಸಹನಾ ಕಾರ್ಯ ಅಲ್ಲ ನಿನ್ನ ಕಾರ್ಯ ಅಂತ ಎಚ್ಚರಿಕೆ ಕೊಟ್ಟಿದ್ದಾನೆ.

ಅಲ್ಲಿ ನಡೆಯೋದನ್ನೆಲ್ಲಾ ನೋಡಿದ ಸಹನಾ ತಾನು ಈಗಲೇ ಮನೆ ಅವರ ಮುಂದೆ ಹೋಗಬಾರದು ಅನ್ನೋ ಗಟ್ಟಿ ನಿರ್ಧಾರವನ್ನು ಮಾಡಿದ್ದಾಳೆ. ನಾನು ಈಗಲೇ ಎಲ್ಲರ ಮುಂದೆ ಹೋದರೆ ಆಡಿಕೊಳ್ಳೋರಿಗೆ ಇನ್ನಷ್ಟು ಮಾತಾಡೋಕೆ ಅವಕಾಶ ಸಿಗುತ್ತೆ, ಎಲ್ಲಾ ಸೇರಿ ಮತ್ತೆ ನನ್ನ ಹಳೆ ಸಹನಾ ಮಾಡಿಬಿಡ್ತಾರೆ. ನಾನು ಹಳೆ ಸಹನಾ ಆಗಿ ಇರಬಾರದು, ಹೊಸ ಸಹನಾ ಆಗಬೇಕು ಅಂತ ಅಲ್ಲಿಂದ ಹೊರಟು ಹೋಗೋ ನಿರ್ಧಾರ ಮಾಡಿದ್ದಾಳೆ.

Leave a Comment