Ganesh: ಅದೊಂದು ಕಾರಣಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಮದ್ವೆ ರಾತ್ರೋರಾತ್ರಿ ನಡೆದಿತ್ತು

Written by Soma Shekar

Published on:

---Join Our Channel---

Ganesh: ಸ್ಯಾಂಡಲ್ವುಡ್ ನಲ್ಲಿ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೇ, ಗಾಡ್ ಫಾದರ್ ಇಲ್ಲದೇ ತನ್ನ ಪರಿಶ್ರಮದಿಂದ ಸ್ಟಾರ್ ಆಗಿ ಬೆಳೆದ ನಟರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರು ಸಹಾ ಒಬ್ಬರಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು.

ಗಣೇಶ್ ಅವರು ಮುಂಗಾರು ಮಳೆ ಸಿನಿಮಾದ ಮೂಲಕ ಬಹಳ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡರು ಮತ್ತು ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡರು.

ಹೀಗೆ ಸಿನಿಮಾರಂಗದಲ್ಲಿ ಸ್ಟಾರ್ ನಟನಾಗಿ ಬೆಳೆಯುತ್ತಿರುವಾಗಲೇ ಗಣೇಶ್ ಅವರು ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ವಿಚಾರ ಸುದ್ದಿ ಆದಾಗ ಎಲ್ಲರಿಗೂ ಅಚ್ಚರಿಯನ್ನ ಮೂಡಿಸಿತ್ತು. ಗಣೇಶ್ ಅವರ ಮದುವೆ ಮಧ್ಯರಾತ್ರಿಯ ವೇಳೆಯಲ್ಲಿ ನಡೆದಿತ್ತು.

ಸ್ಟಾರ್ ನಟನಾಗಿರುವ ಒಬ್ಬ ಕಲಾವಿದನ ಮದುವೆ ಈ ರೀತಿ ನಡೆದದ್ದು ಸಹಜವಾಗಿಯೇ ಆಶ್ಚರ್ಯವನ್ನು ಉಂಟು ಮಾಡುವುದರ ಜೊತೆಗೆ ಹೀಗೆ ಮದುವೆಯಾಗಿದ್ದಾದ್ರೂ ಏಕೆ ಎನ್ನುವ ಪ್ರಶ್ನೆಯೊಂದು ಎಲ್ಲರನ್ನೂ ಕಾಡಿತ್ತು.

ಗಣೇಶ್ ಅವರ ಮದುವೆಯ ವಿಚಾರ ಹೊರಬಂದ ಮೇಲೆ ಈ ಕುರಿತಾಗಿ ಒಂದಷ್ಟು ಗಾಸಿಪ್ ಗಳು ಹರಿದಾಡಿತವು. ಆದರೆ ವಾಸ್ತವದಲ್ಲಿ ಗಣೇಶ್ ಅವರ ಮದುವೆಗೆ ಅವರು ಪಡೆದುಕೊಂಡಿದ್ದಂತಹ ಜನಪ್ರಿಯತೆಯ ಮುಳುವಾಗಿತ್ತು ಎಂದು ಹೇಳಲಾಗಿದೆ.

ಈ ಮಾತನ್ನು ಸ್ವತಃ ಗಣೇಶ್ ಅವರೇ ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದಾರೆ. ಗಣೇಶ್ ಪಡೆದಿದ್ದ ಜನಪ್ರಿಯತೆ ಅವರಿಗೆ ಆ ಸಂದರ್ಭದಲ್ಲಿ ನೋವನ್ನ ನೀಡಿದಂತೆ. ಸಿನಿಮಾದಲ್ಲಿ (Sandalwood) ಜನಪ್ರಿಯತೆ ಪಡೆದಿದ್ದು ಅವರ ಪ್ರೀತಿಯ ಪಾಲಿಗೆ ಮುಳ್ಳಾಗಿತ್ತಂತೆ.

ಒಂದು ಹಂತದಲ್ಲಿ ಅವರು ಸಿನಿಮಾ ರಂಗವನ್ನು ಬಿಡುವ ಆಲೋಚನೆ ಕೂಡಾ ಮಾಡಿದ್ದರಂತೆ. ಆದರೆ ಆನಂತರ ಎಲ್ಲವನ್ನು ಧೈರ್ಯವಾಗಿ ನಿಭಾಯಿಸಿಕೊಂಡರು ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಅವರು. ಈಗ ಸುಖ ದುಃಖದಲ್ಲಿ ಜೊತೆಯಾಗಿ ನಿಂತಿರುವ ಈ ಜೋಡಿ ನೆಮ್ಮದಿಯ ಬದುಕನ್ನ ಸಾಗಿಸುತ್ತಾ ಸಂತೋಷವಾಗಿದ್ದಾರೆ.

Leave a Comment