Ganesh: ಸ್ಯಾಂಡಲ್ವುಡ್ ನಲ್ಲಿ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೇ, ಗಾಡ್ ಫಾದರ್ ಇಲ್ಲದೇ ತನ್ನ ಪರಿಶ್ರಮದಿಂದ ಸ್ಟಾರ್ ಆಗಿ ಬೆಳೆದ ನಟರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರು ಸಹಾ ಒಬ್ಬರಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು.
![](https://news9kannada.com/wp-content/uploads/2024/04/images-2024-04-05T113236.188-jpeg.webp)
ಗಣೇಶ್ ಅವರು ಮುಂಗಾರು ಮಳೆ ಸಿನಿಮಾದ ಮೂಲಕ ಬಹಳ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡರು ಮತ್ತು ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡರು.
![](https://news9kannada.com/wp-content/uploads/2024/04/images-2024-04-05T113253.771-jpeg.webp)
ಹೀಗೆ ಸಿನಿಮಾರಂಗದಲ್ಲಿ ಸ್ಟಾರ್ ನಟನಾಗಿ ಬೆಳೆಯುತ್ತಿರುವಾಗಲೇ ಗಣೇಶ್ ಅವರು ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ವಿಚಾರ ಸುದ್ದಿ ಆದಾಗ ಎಲ್ಲರಿಗೂ ಅಚ್ಚರಿಯನ್ನ ಮೂಡಿಸಿತ್ತು. ಗಣೇಶ್ ಅವರ ಮದುವೆ ಮಧ್ಯರಾತ್ರಿಯ ವೇಳೆಯಲ್ಲಿ ನಡೆದಿತ್ತು.
![](https://news9kannada.com/wp-content/uploads/2024/04/395168-5-jpg.webp)
ಸ್ಟಾರ್ ನಟನಾಗಿರುವ ಒಬ್ಬ ಕಲಾವಿದನ ಮದುವೆ ಈ ರೀತಿ ನಡೆದದ್ದು ಸಹಜವಾಗಿಯೇ ಆಶ್ಚರ್ಯವನ್ನು ಉಂಟು ಮಾಡುವುದರ ಜೊತೆಗೆ ಹೀಗೆ ಮದುವೆಯಾಗಿದ್ದಾದ್ರೂ ಏಕೆ ಎನ್ನುವ ಪ್ರಶ್ನೆಯೊಂದು ಎಲ್ಲರನ್ನೂ ಕಾಡಿತ್ತು.
![](https://news9kannada.com/wp-content/uploads/2024/04/images-2024-04-05T121840.713.jpeg)
ಗಣೇಶ್ ಅವರ ಮದುವೆಯ ವಿಚಾರ ಹೊರಬಂದ ಮೇಲೆ ಈ ಕುರಿತಾಗಿ ಒಂದಷ್ಟು ಗಾಸಿಪ್ ಗಳು ಹರಿದಾಡಿತವು. ಆದರೆ ವಾಸ್ತವದಲ್ಲಿ ಗಣೇಶ್ ಅವರ ಮದುವೆಗೆ ಅವರು ಪಡೆದುಕೊಂಡಿದ್ದಂತಹ ಜನಪ್ರಿಯತೆಯ ಮುಳುವಾಗಿತ್ತು ಎಂದು ಹೇಳಲಾಗಿದೆ.
![](https://news9kannada.com/wp-content/uploads/2024/04/images-2024-04-05T121855.227-jpeg.webp)
ಈ ಮಾತನ್ನು ಸ್ವತಃ ಗಣೇಶ್ ಅವರೇ ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದಾರೆ. ಗಣೇಶ್ ಪಡೆದಿದ್ದ ಜನಪ್ರಿಯತೆ ಅವರಿಗೆ ಆ ಸಂದರ್ಭದಲ್ಲಿ ನೋವನ್ನ ನೀಡಿದಂತೆ. ಸಿನಿಮಾದಲ್ಲಿ (Sandalwood) ಜನಪ್ರಿಯತೆ ಪಡೆದಿದ್ದು ಅವರ ಪ್ರೀತಿಯ ಪಾಲಿಗೆ ಮುಳ್ಳಾಗಿತ್ತಂತೆ.
![](https://news9kannada.com/wp-content/uploads/2024/04/images-2024-04-05T122443.566.jpeg)
ಒಂದು ಹಂತದಲ್ಲಿ ಅವರು ಸಿನಿಮಾ ರಂಗವನ್ನು ಬಿಡುವ ಆಲೋಚನೆ ಕೂಡಾ ಮಾಡಿದ್ದರಂತೆ. ಆದರೆ ಆನಂತರ ಎಲ್ಲವನ್ನು ಧೈರ್ಯವಾಗಿ ನಿಭಾಯಿಸಿಕೊಂಡರು ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಅವರು. ಈಗ ಸುಖ ದುಃಖದಲ್ಲಿ ಜೊತೆಯಾಗಿ ನಿಂತಿರುವ ಈ ಜೋಡಿ ನೆಮ್ಮದಿಯ ಬದುಕನ್ನ ಸಾಗಿಸುತ್ತಾ ಸಂತೋಷವಾಗಿದ್ದಾರೆ.