Naga Chaitanya: ಈಗ ಆ ವಿಷ್ಯ ಬೇಡ, ಮಾದ್ಯಮಗಳ ಮುಂದೆ ಆ ವಿಷಯ ಮಾತಾಡೋಕೆ ನಾಗಚೈತನ್ಯ ಹಿಂದೇಟು

Written by Soma Shekar

Published on:

---Join Our Channel---

Naga Chaitanya : ಕೆರೆ ಮತ್ತು ಕಾಲುವೆಗಳನ್ನು ರಕ್ಷಣೆ ಮಾಡುವ ಸಲುವಾಗಿ ಸಿಎಂ ರೇವಂತ್ ರೆಡ್ಡಿ ಆರಂಭಿಸಿರುವ ಹೈಡ್ರಾ (HYDRA) ಸಂಸ್ಥೆಯು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುತ್ತಿರುವ ವಿಚಾರವು ಈಗಾಗಲೇ ಸುದ್ದಿಗಳಾಗಿವೆ. ಅದರ ಭಾಗವಾಗಿಯೇ ಇತ್ತೀಚಿಗೆ ಸ್ಟಾರ್ ನಟ ನಾಗಾರ್ಜುನ (Nagarjuna) ಅವರ ಅವರ ಮಾಲಿಕತ್ವದ ಮಾದಾಪುರದಲ್ಲಿನ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಹೈಡ್ರಾ ತಂಡ ಕೆಡವಿ ಹಾಕಿ ದೊಡ್ಡ ಸುದ್ದಿಯಾಗಿದೆ.

ಈ ವಿಚಾರವಾಗಿ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ (Naga Chaitanya) ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸಮಾರಂಭವೊಂದರಲ್ಲಿ ಕಾಣಿಸಿಕೊಂಡ‌ ನಾಗಚೈತನ್ಯ ಅವರನ್ನು ಕನ್ವೆಷನ್ ಹಾಲ್ ಅನ್ನು ಕೆಡವಿದ ವಿಚಾರವಾಗಿ ಮಾದ್ಯಮಗಳು ಪ್ರಶ್ನೆಯನ್ನು ಮಾಡಿದ್ದು, ಈ ವೇಳೆ ನಾಗಚೈತನ್ಯ ತಮ್ಮ ಉತ್ತರವನ್ನು ನೀಡಿದ್ದಾರೆ.

ನಾಗಚೈತನ್ಯ ಮಾತನಾಡುತ್ತಾ, ನನಗೆ ಆ ವಿಷಯ ಈಗ ಬೇಡ.. ಎನ್ ಕನ್ವೆನ್ಷನ್ ಧ್ವಂಸಕ್ಕೆ ಸಂಬಂಧಿಸಿದಂತೆ ನನ್ನ ತಂದೆ ಟ್ವಿಟರ್ ವೇದಿಕೆಯಲ್ಲಿ ಎಲ್ಲ ವಿವರಗಳನ್ನು ಹೇಳಿದ್ದಾರೆ ಎಂದು ಉತ್ತರಿಸುವ ಮೂಲಕ ಆ ವಿಷಯದ ಕುರತಾಗಿ ತಮಗೆ ಹೆಚ್ಚು ಮಾತನಾಡುವ ಆಸಕ್ತಿಯಿಲ್ಲ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಅವರ ಎರಡನೇ ಮದುವೆ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ನಟ, ಮದುವೆ ಎಲ್ಲಿ ನಡೆಯಲಿದೆ ಎನ್ನುವುದನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದಿದ್ದು, ಒಳ್ಳೆ ಕಥೆ ಸಿಕ್ಕಿದರೆ ತಾನು ಮತ್ತು ಶೋಭಿತಾ (Shobhita Dhulipala) ಜೊತೆಯಾಗಿ ನಟಿಸುವುದಾಗಿಯೂ ನಾಗಚೈತನ್ಯ ಹೇಳಿದ್ದಾರೆ.‌

Leave a Comment