Bhagylakshmi Serial: ಅಮ್ಮನ ಕೈಗೆ ಸಿಕ್ಕಿ ಬಿದ್ದ ತಾಂಡವ್; ಮಗನಿಗೆ ಯಾವ ಶಿಕ್ಷೆ ಕೊಡ್ತಾಳೆ ಕುಸುಮಾ ದೇವಿ ?

Written by Soma Shekar

Published on:

---Join Our Channel---

Bhagyalakshmi Serial: ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ (Bhagyalakshmi Serial) ಏನೇ ಆಗ್ಲಿ ಶ್ರೇಷ್ಠಾಳ ಮದುವೆ ನಿಲ್ಲಿಸಲೇಬೇಕು ಅಂತ ಭಾಗ್ಯ ಮತ್ತು ಕುಸುಮಾ ಇಬ್ಬರೂ ಗಟ್ಟಿ ನಿರ್ಧಾರವನ್ನು ಮಾಡಿದ್ದಾರೆ. ಅದಕ್ಕಾಗಿಯೇ ಅತ್ತೆ ಸೊಸೆ ಇಬ್ಬರೂ ಶ್ರೇಷ್ಠ ಮದುವೆ ನಡೆಯೋ ಕಡೆ ಹಾಜರಾಗಿದ್ದಾರೆ. ಕುಸುಮಾ ತಮ್ಮ ಸುಪುತ್ರ ತಾಂಡವ್ ನ ಮನೆಯಲ್ಲಿ ರೂಮ್ ನಲ್ಲಿ ಕೂಡಿ ಹಾಕಿ ಬಂದಿದ್ದಾರೆ. ಆದ್ರೂ ತಾಂಡವ್ ಅಲ್ಲಿಂದ ತಪ್ಪಿಸಿಕೊಂಡು ಮದುವೆಗೆ ಬಂದಿದ್ದಾನೆ.‌

ಕುಸುಮಾ (Kusuma) ಒಂದು ಕಡೆ ಹೆಂಡ್ತಿ ಮಕ್ಕಳಿಗೆ ಮೋಸ ಮಾಡಿ ಎರಡನೇ ಮದುವೆ ಆಗೋಕೆ ಸಿದ್ಧವಾಗಿರೋ ಮದುವೆ ಗಂಡನ್ನ ಹಿಡಿದು ಬುದ್ಧಿ ಹೇಳೋಕೆ ಅವನನ್ನ ಹುಡುಕೋವಾಗ್ಲೇ ಸುಂದರಿ ಕಾಣ್ಸಿದ್ದಾಳೆ. ಅಲ್ಲದೇ ಮಗನ ಮದ್ವೆ ದಿನ ಸುಂದರಿ ಸಿಂಪಲ್ ಆಗಿರೋದು ನೋಡಿ ಶಾಕ್ ಆಗಿದ್ದಾಳೆ. ಅಲ್ಲದೇ ನಿನ್ನ ಮಗ ಎಲ್ಲಿ ತೋರ್ಸು ಅಂತ ಹಿಡ್ಕೊಂಡಿದ್ದಾಳೆ.

ಭಾಗ್ಯ ಬರ್ತಾ ಇರೋದನ್ನ ನೋಡಿದ ಸುಂದ್ರಿ ತಾನು ಅಲ್ಲೇ ಇದ್ರೆ ತನ್ನ ಕಥೆ ಮುಗೀತು ಅಂತ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ.‌ ಇನ್ನು ಹೇಗೋ ಮಾಡಿ ಮದುವೆ ಮಂಟಪಕ್ಕೆ ಬಂದ ತಾಂಡವ್ ಮದುವೆಗೆ ಸಿದ್ಧವಾಗಿರುವಾಗ್ಲೇ ಶ್ರೇಷ್ಠ ಅವರ ತಾಯಿ ಕುಸುಮಾಗೆ ಕಾಲ್ ಮಾಡಿ ವರ ಬಂದಿರೋ ವಿಷಯ ಹೇಳಿದಾಗ, ಭಾಗ್ಯ ಮತ್ತು ಕುಸುಮಾ ಅತ್ತ ಕಡೆ ಬಂದಿದ್ದಾರೆ.

ಅವರ ಕೈಗೆ ಸಿಗಬಾರದಂತ ತಾಂಡವ್ (Tandav) ಓಡಿ ಹೋಗೋ ಪ್ರಯತ್ನ ಮಾಡಿದ್ದಾನೆ ಆದರೆ ಕುಸುಮಾ ಕೈಗೆ ಸಿಕ್ಕಿ ಬಿದ್ದಿದ್ದಾನೆ. ತಾಂಡವ್ ಕೊರಳಿಗೆ ಹಾಕಿದ್ದ ಬಟ್ಟೆಯನ್ನು ಹಿಡಿದು ಎಳೆದಿದ್ದಾಳೆ. ಆದರೆ ಇನ್ನೂ ಮುಖ ನೋಡಿಲ್ಲ. ಈಗ ಕುಸುಮಾ ತನ್ನ ಮಗನೇ ಮದುವೆ ಗಂಡು ಅಂತ ತಿಳ್ಕೊಳ್ತಾಳಾ? ಮಗನಿಗೆ ಏನ್ ಮಾಡ್ತಾಳೆ? ಕಾದು ನೋಡಬೇಕಾಗಿದೆ.

Spinach Juice: ಅಂದ, ಆರೋಗ್ಯ ಎರಡೂ ನಿಮ್ಮದಾಗಲು ಈ ಒಂದು ಜ್ಯೂಸ್ ಸಾಕು, ಸದಾ ಯಂಗ್ ಆಗಿರಲು ಇದೇ ಸೂಕ್ತ

Leave a Comment