Chandan Shetty: ಚಂದನ್ ನಿವೇದಿತಾ ಮಧ್ಯೆ ಬಿರುಕಿಗೆ ಕಾರಣ ಆ ಮೂರನೇ ವ್ಯಕ್ತಿ? ಚಂದನ್ ಶಾಕಿಂಗ್ ಮಾತು

Written by Soma Shekar

Published on:

---Join Our Channel---

Chandan Shetty: ಸ್ಯಾಂಡಲ್ವುಡ್ ನಲ್ಲಿ (Sandalwood) ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ ಸುದ್ದಿಗಳಲ್ಲಿ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Nivedita Gowda) ವಿಚ್ಛೇದನ ವಿಚಾರ ಸಹಾ ಒಂದಾಗಿತ್ತು. ಸದಾ ರೀಲ್ಸ್ ವೀಡಿಯೋಗಳನ್ನು ಮಾಡಿಕೊಂಡು ಟ್ರೋಲ್ ಗೆ ತಲೆ ಕೆಡಿಸಿಕೊಳ್ಳದೇ ಅನ್ಯೋನ್ಯವಾಗಿದ್ದ ಜೋಡಿ ಇದ್ದಕ್ಕಿದ್ದ ಹಾಗೆ ವಿಚ್ಚೇದನ ಪಡೆದು ಬೇರಾಗಿದ್ದು ಎಲ್ಲರಿಗೂ ಶಾಕ್ ನೀಡಿತ್ತು. ಪ್ರೀತಿಸಿ ಮದುವೆಯಾದ ಜೋಡಿ ಹೀಗೆ ಬೇರೆಯಾಗಿದ್ದು ಅಚ್ಚರಿಯನ್ನು ಮೂಡಿಸಿತ್ತು.

ಚಂದನ್ ಮತ್ತು ನಿವೇದಿತಾ ಒಬ್ಬರ ಮೇಲೆ ಮತ್ತೊಬ್ಬರು ಯಾವುದೇ ಆರೋಪಗಳನ್ನು ಮಾಡಲಿಲ್ಲ. ಅಲ್ಲದೇ ಇಬ್ಬರೂ ಸಹಾ ಜೊತೆಯಲ್ಲೇ ಕೋರ್ಟ್ ಗೆ ಹಾಜರಾಗಿ ವಿಚ್ಛೇದನ ಪಡೆದರು‌. ಬಹಳ ಗೌರವಯುತವಾಗಿಯೇ ಬೇರೆ ಬೇರೆಯಾದರು. ಮಾದ್ಯಮಗಳ ಮುಂದೆ ಮಾತನಾಡುವಾಗಲೂ ಜೊತೆಯಾಗಿದ್ದರು. ಪರಸ್ಪರ ಗೌರವದಿಂದ ಬೇರೆಯಾಗುವ ಮೂಲಕ ಮಾದರಿಯಾದರು.

ಸಾಮರಸ್ಯ ಮತ್ತು ಹೊಂದಾಣಿಕೆ ಕೊರತೆಯ ಕಾರಣದಿಂದಾಗಿ ತಾವು ಬೇರೆ ಆಗುತ್ತಿರುವುದಾಗಿ ಮಾದ್ಯಮಗಳಿಗೆ ಇಬ್ಬರೂ ತಿಳಿಸಿದರು. ಆದರೆ ಇವರ ವಿಚ್ಚೇದನಕ್ಕೆ ಬೇರೆಯದೇ ಕಾರಣಗಳಿವೆ ಎನ್ನುವ ಒಂದಷ್ಟು ಅನುಮಾನಗಳು ವ್ಯಕ್ತವಾದವು ಹಾಗೂ ಸುದ್ದಿಗಳು ಸಹಾ ಹರಿದಾಡಿದವು. ಮಗು ಮಾಡಿಕೊಳ್ಳಲು ನಿವೇದಿತಾ ಒಪ್ಪದ ಕಾರಣದಿಂದ ಇವರು ಬೇರೆ ಬೇರೆಯಾದರೆಂದೂ ಸಹಾ ಸುದ್ದಿಯಾಗಿತ್ತು.

ಆದರೆ ಇವೆಲ್ಲವುಗಳ ನಡುವೆಯೇ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆಯಲ್ಲಿ ಚಂದನ್ ಶೆಟ್ಟಿ, ತಮ್ಮ ಮತ್ತು ನಿವೇದಿತಾ ನಡುವೆ ವಿಚ್ಚೇದನಕ್ಕೆ ಮೂರನೇ ವ್ಯಕ್ತಿಯೊಬ್ಬರು ಕಾರಣ ಎಂದಿದ್ದು, ಅವರ ಈ ಮಾತು ಈಗ ಹೊಸ ಸಂಚಲನ ಮೂಡಿಸಿದೆ. ಹಾಗಾದರೆ ಆ ಮೂರನೇ ವ್ಯಕ್ತಿ ಯಾರು ಎನ್ನುವ ಅನುಮಾನ ಮೂಡಿದೆ. ಆದರೆ ಚಂದನ್ ಶೆಟ್ಟಿ ಅವರು ಆ ಮೂರನೇ ವ್ಯಕ್ತಿ ಬಗ್ಗೆ ಎಲ್ಲಿಯೂ ಬಾಯಿ ಬಿಡದೇ ಮಾರ್ಮಿಕವಾಗಿ ಮಾತನಾಡಿದ್ದಾರೆ.

ಕುಟುಂಬ ಒಡೆಯೋದಕ್ಕೆ ಮೂರನೇ ವ್ಯಕ್ತಿ ಕಾರಣವಾಗ್ತಾರೆ. ಅವರು ಯಾರು ಅನ್ನೋದು ಕೆಲವು ಸಲ ನಮಗೂ ಗೊತ್ತಿರೋದಿಲ್ಲ. ಆ ಮೂರನೇ ವ್ಯಕ್ತಿ ನಮ್ಮೊಳಗೂ ಇರಬಹುದು, ಕೆಲವರಿಗ ಎರಡೆರಡು ಮುಖಗಳಿರಬಹುದು. ಮುಂದೆ ಒಂದು ರೀತಿ, ಹಿಂದೆ ಒಂದು ರೀತಿ ಮಾತನಾಡ್ತಾರೆ. ಅಂತಹ ವ್ಯಕ್ತಿಗಳಿಗೆ ಎರಡು ವ್ಯಕ್ತಿತ್ವ ಇರುತ್ತವೆ ಎಂದು ಮಾರ್ಮಿಕವಾಗಿ ಹೇಳಿ ಚಂದನ್ ಶೆಟ್ಟಿ ಎಲ್ಲರ ತಲೆಗೆ ಹುಳು ಬಿಟ್ಟಿದ್ದಾರೆ.

Leave a Comment