Kannada Serial: ಅಕ್ಕನೇ ಸರ್ವಸ್ವ ಎಂದುಕೊಂಡ ತಂಗಿ: ಹೊಸ ಸೀರಿಯಲ್ ಪ್ರೊಮೋ ನೋಡಿಯೇ ಸಿಟ್ಟಾದ್ರ ಪ್ರೇಕ್ಷಕರು

Written by Soma Shekar

Published on:

---Join Our Channel---

Kannada Serial : ಸೀರಿಯಲ್ ಗಳ ವಿಚಾರದಲ್ಲಿ ಜೀ ಕನ್ನಡ ವಾಹಿನಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಹೊಸ ಹೊಸ ಸೀರಿಯಲ್ ಗಳನ್ನು (Kannada Serial) ಪ್ರೇಕ್ಷಕರ ಮುಂದೆ ತರುವ ಈ ವಾಹಿನಿಯ ಸೀರಿಯಲ್ ಗಳೇ ಟಾಪ್ ಐದರಲ್ಲಿ ಸ್ಥಾನವನ್ನು ಪಡೆದಿರುತ್ತವೆ ಎನ್ನುವುದು ಸಹಾ ನಿಜವಾಗಿದೆ. ಈಗ ಮತ್ತೊಂದು ಹೊಸ ಸೀರಿಯಲ್ ಪ್ರಸಾರಕ್ಕೆ ಸಜ್ಜಾಗಿದ್ದು, ಈಗಾಗಲೇ ಪ್ರೊಮೊವನ್ನು ಬಿಡುಗಡೆ ಮಾಡಿದೆ.

ಹೌದು, ಇದೇ ಮೇ 17 ರಿಂದ ಜೀ ಕನ್ನಡದಲ್ಲಿ ಪ್ರತಿ ರಾತ್ರಿ ಹತ್ತು ಗಂಟೆಗೆ ಬ್ರಹ್ಮಗಂಟು (Brahmagantu Serial) ಸೀರಿಯಲ್ ತನ್ನ ಪ್ರಸಾರವನ್ನು ಆರಂಭಿಸುತ್ತಿದೆ. ವಾಹಿನಿ ಪ್ರೊಮೋ ಬಿಡುಗಡೆ ಆದ ಮೇಲೆ ಪ್ರೇಕ್ಷಕರು ಇದನ್ನು ನೋಡಿ ಖುಷಿ ಪಟ್ಟರೋ ಇಲ್ಲವೋ ಪ್ರೊಮೋ ಬಗ್ಗೆ ನೆಗೆಟಿವ್ ಕಾಮೆಂಟ್ ಗಳಂತೂ ಹರಿದು ಬರುವುದಕ್ಕೆ ಆರಂಭವಾಗಿದೆ. ಹಳೆಯ ಕಥೆಯೊಂದನ್ನು ನೋಡಿದಂತೆ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಪ್ರೊಮೊ ನೋಡಿದಾಗ ಅದರಲ್ಲಿ ಚಿಕ್ಕ ವಯಸ್ಸಿನಿಂದಲೇ ತನ್ನ ಅಕ್ಕನಿಗಾಗಿ ಎಲ್ಲವನ್ನೂ ಬಿಟ್ಟು ಕೊಡುವ ತಂಗಿ, ತಾನು ಅಂದವಾಗಿಲ್ಲ ಎಂದು ಜನರು ಹೀಗಳೆದರೂ, ತನ್ನ ಅಕ್ಕ ಅಂದವಾಗಿದ್ದಾಳೆಂದು ಖುಷಿ ಪಡುವ ತಂಗಿ ಅಕ್ಕನ ಮದುವೆಯಲ್ಲಿ ಸಂತೋಷದಿಂದ ಸಂಭ್ರಮಿಸಿ ಕೊನೆಗೆ ತಾನೇ ಅಕ್ಕನ ಜಾಗದಲ್ಲಿ ವಧುವಾಗಿ ಹೊಸ ಮನೆಗೆ ಹೋಗಿ ಅಲ್ಲಿ ನಿಂದನೆಗೆ ಗುರಿಯಾಗುತ್ತಾಳೆ.‌

ಅಕ್ಕ‌ನ ಜಾಗದಲ್ಲಿ ತಾನೇ ವಧುವಾಗಿ ಗಂಡನ ಮನೆ ಸೇರುವವಳನ್ನು ನೋಡಿದ ನಾಯಕನ ಅಕ್ಕ ಆತನ ಜೊತೆಗಿರೋದು ತಂಗಿ ಎನ್ನುವುದನ್ನ ನೋಡಿ, ನಿನ್ನ ಅಕ್ಕನ ಸೌಂದರ್ಯ ನೋಡಿ ಮದುವೆಗೆ ಒಪ್ಪಿಗೆ ಕೊಟ್ಟಿದ್ದು, ನಿನ್ನಂತವಳು ನಮಗೆ ಬೇಕಾಗಿಲ್ಲ, ಅವಳ ತಾಳಿ ತೆಗೆದು ನೀನೋಬ್ಬನೇ ಒಳಗೆ ಬಾ ಎಂದು ತಮ್ಮನಿಗೆ ಆದೇಶವನ್ನು ಕೊಡ್ತಾಳೆ.

ಪ್ರೊಮೊದಲ್ಲಿ ಇದೆಲ್ಲಾ ನೋಡಿದ ಪ್ರೇಕ್ಷಕರು ಕಥೆಯನ್ನು ಊಹೆ ಮಾಡಿದ್ದಾರೆ. ಅಲ್ಲದೇ ಕನ್ನಡದಲ್ಲಿ ಬಂದಿದ್ದ ಸಿನಿಮಾವೊಂದರ ಕಥೆಯೇ ಸ್ವಲ್ಪ ಬದಲಾವಣೆ ಆಗಿದೆ ಎಂದಿದ್ದಾರೆ. ಇನ್ನೂ ಕೆಲವರು ಈಗಾಗಲೇ ತೆಲುಗಿನಲ್ಲಿ ಬರುತ್ತಿರುವ ಸೀರಿಯಲ್ ನ ರಿಮೇಕ್ ಆಗಿದೆ. ಜೀ ವಾಹಿನಿ ಸ್ವಮೇಕ್ ಸೀರಿಯಲ್ ಗಳನ್ನು ಮಾಡೋದಿಲ್ವಾ ಎಂದು ಸಹಾ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಮಾಡಿದ್ದಾರೆ.

ಕೆಟ್ಟ ಕಾನ್ಸೆಪ್ಟ್ ಗಳು ಯುವ ಜನರ ಮೇಲೆ ಪರಿಣಾಮ ಬೀರುತ್ತೆ ಎಂದಿದ್ದಾರೆ ನೆಟ್ಟಿಗರು. ಕನ್ನಡದ ಯಾರೇ ನೀ ಅಭಿಮಾನಿ ಸಿನಿಮಾದಂತೆ ಅಕ್ಕ ಓಡಿ ಹೋಗ್ತಾಳೆ ತಂಗಿ ಮದುವೆ ಮಾಡ್ಕೊಂಡು ಬರ್ತಾಳೆ, ಆಮೇಲೆ ಅಕ್ಕ ಬಂದು ಟಾರ್ಚರ್ ಕೊಡ್ತಾಳೆ, ಗಂಡ ಮತ್ತು ಉಳಿದವರ ಮನಸ್ಸು ಗೆಲ್ಲೋಕೆ ನಾಯಕಿ ಪ್ರಯತ್ನಗಳನ್ನು ಮಾಡೋದೇ ಆಗಿರುತ್ತೆ ಕಥೆ ಎಂದಿದ್ದಾರೆ ನೆಟ್ಟಿಗರು.

Leave a Comment