Amruthadhaare: ಮಧುಚಂದ್ರಕ್ಕೆ ಗೌತಮ್ ಭೂಮಿಕಾ; ಶುಕುಂತಲಾ ಕುತಂತ್ರವೇ ಜೋಡಿ ಹಕ್ಕಿಗಳಿಗೆ ವರವಾಯ್ತಾ?

Written by Soma Shekar

Published on:

---Join Our Channel---

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ಬೇರೆಲ್ಲಾ ಸೀರಿಯಲ್ ಗಳಿಗಿಂತ ಕೂಲ್ ಮತ್ತು ಕಾಮ್ ಆಗಿ ಮುಂದೆ ಸಾಗುತ್ತಾ ಟಿ ಆರ್ ಪಿ ವಿಚಾರದಲ್ಲಿ ಆರಕ್ಕೇರದೇ ಮೂರಕ್ಕಿಳಿಯದೇ ತನ್ನದೇ ಆಗಿರೋ ಒಂದು ಸಮತೋಲವನ್ನು ಕಾಯ್ದುಕೊಂಡು ಮುಂದೆ ಸಾಗ್ತಿರೋವಂತಹ ಕಥೆಯಾಗಿದೆ. ಗೌತಮ್ ದಿವಾನ್ (Gowtham Deewan) ಮತ್ತು ಭೂಮಿಕಾ ಸದಾಶಿವ (Bhumika) ಎನ್ನುವ ಇಬ್ಬರು ಪ್ರಬುದ್ಧರ ನಡುವಿನ ಪ್ರೇಮದ ಕಥೆ ಇದಾಗಿದ್ದು, ಈ ಕಥೆಯನ್ನು ಬಹಳ ಪ್ರಬುದ್ಧತೆಯಿಂದಲೇ ಪ್ರೇಕ್ಷಕರ ಮುಂದೆ ಇಡಲಾಗಿರುವುದು ಈ ಧಾರಾವಾಹಿಯ ಮತ್ತೊಂದು ವಿಶೇಷವಾಗಿದೆ.

ಕೆಲವೊಂದು ಪರಿಸ್ಥಿತಿಗಳ ಕಾರಣದಿಂದ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಗೌತಮ್ ಮತ್ತು ಭೂಮಿಕಾ ಒಬ್ಬರನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡು, ಒಬ್ಬರಿಗೊಬ್ಬರು ಜೊತೆಯಾಗಿ ಹೆಜ್ಜೆ ಹಾಕ್ತಾ ಇದ್ದಾರೆ. ಭೂಮಿಕ ಕೆಲವೊಂದು ವಿಷಯಗಳಲ್ಲಿ ಸ್ವಂತ ನಿರ್ಧಾರ, ಅತಿಯಾದ ಸ್ವಾವಲಂಬನೆಯಿಂದ ಮಾಡುವ ಕೆಲಸಗಳಿಂದ ಆಗೋ ತೊಂದರೆಗಳನ್ನು ಸಹಾ ಗೌತಮ್ ಬಹಳ ನಾಜೂಕಾಗಿ ನಿಭಾಯಿಸುವ ಪರಿ ಸುಂದರವಾಗಿದೆ.

ಮದುವೆಯಾಗಿದೆ, ಇಬ್ಬರ ನಡುವೆ ಪ್ರೀತಿ ಮೂಡಿದೆ, ಆದರೆ ಏಕಾಂತ ದಲ್ಲಿ ಅವರು ಸಮಯ ಕಳೆಯುವ, ಇನ್ನಷ್ಟು ಅರಿತುಕೊಳ್ಳುವ ಅವಕಾಶ ಇನ್ನೂ ಸಿಕ್ಕಿಲ್ಲ‌. ಗೌತಮ್ ದೀವಾನ್ ನ ಚಿಕ್ಕಮ್ಮ ಶಕುಂತಲಾ ಗೌತಮ್ ಮತ್ತು ಭೂಮಿಕಾ ಹತ್ತಿರ ಆಗಬಾರದು ಅಂತಾನೇ ಕುತಂತ್ರಗಳನ್ನು ಮಾಡ್ತಾನೇ ಇದ್ದಾಳೆ. ಆದ್ರೆ ಈಗ ಅವಳು ಮಾಡಲು ಹೊರಟಿರೋ ಹೊಸ ಕುತಂತ್ರವೇ ಗೌತಮ್ ಮತ್ತು ಭೂಮಿಕಾ ಪಾಲಿಗೆ ವರವಾಗುತ್ತಾ ಅನ್ನೋ ಹಾಗಿದೆ ಪರಿಸ್ಥಿತಿ.

ಚಿಕ್ಕಮಗಳೂರಿನ ಬಳಿ ಇರೋ ಗೌತಮ್ ಅವರ ಅರವತ್ತು ಎಕರೆ ಜಮೀನನ್ನು ಅಲ್ಲಿರುವವರೇ ತಮ್ಮ ಹೆಸರಿಗೆ ಮಾಡಿಸಿಕೊಳ್ಳೋ ಪ್ರಯತ್ನಕ್ಕೆ ಮುಂದಾಗಿದ್ದು, ಗೌತಮ್ ಅವರ ಅಜ್ಜಿ ಅದನ್ನು ಪ್ರಶ್ನೆ ಮಾಡಿದಾಗ ಆ ವ್ಯಕ್ತಿಗಳು ಮಚ್ಚು ತೋರಿಸಿ ಹೆದರಿಸಿದ್ದು ಮಾತ್ರವೇ ಅಲ್ಲದೇ ನಾವು ಶ್ರೀಮಂತರಾಗೋದು ಬೇಡ್ವಾ ಅಂತ ಪ್ರಶ್ನೆ ಮಾಡಿ ಹೋಗಿದ್ದಾರೆ. ಅಜ್ಜಿ ಇದನ್ನು ಗೌತಮ್ ಗೆ ಹೇಳಬಾರದು ಅಂತ ಅನ್ಕೊಂಡಿದ್ದಾರೆ.

ಆದ್ರೆ ಶಕುಂತಲಾ ಇದನ್ನ ತನ್ನ ಅನುಕೂಲಕ್ಕೆ ಬಳಸಿಕೊಂಡು, ಜಮೀನಿನ ವಿಚಾರವಾಗಿ ಎದ್ದಿರೋ ಸಮಸ್ಯೆಯನ್ನ ಬಗೆಹರಿಸೋದಕ್ಕೆ ಹೇಗೂ ಗೌತಮ್ ಅಲ್ಲಿಗೆ ಹೋಗಬೇಕು, ಜೊತೇಲಿ ಹೆಂಡ್ತೀನ ಕೂಡಾ ಕರ್ಕೊಂಡು ಹೋಗು ಅಂತ ಹೇಳಿದ್ರೆ ಆಯ್ತು. ಹನಿಮೂನ್ ಅನ್ನೋದು ಈಗ ನಮಗೆ ಉಪಯೋಗ ಆಗುತ್ತೆ ಅಂತ ತನ್ನ ತಮ್ಮನ ಬಳಿ ಹೇಳಿದ್ದಾಳೆ. ಹೀಗೆ ಗೌತಮ್ ಮತ್ತು ಭೂಮಿಕಾನ ಅಪಾಯಕ್ಕೆ ದೂಡೋದಕ್ಕೆ ಪ್ಲಾನ್ ಮಾಡಿದ್ದಾಳೆ.

ಆದ್ರೆ ಶಕುಂತಲಾ ಮಾಡಿರೋ ಪ್ಲಾನ್ ಈಗ ಉಲ್ಟಾ ಹೊಡೆಯುತ್ತೆ ಅನ್ನೋದು ಪ್ರೇಕ್ಷಕರ ಊಹೆ ಆಗಿದೆ. ಜೊತೆಯಾಗಿ ಹೋಗೋ ಗೌತಮ್ ಮತ್ತು ಭೂಮಿಕಾ ಇಬ್ಬರೂ ಸಹಾ ಮನೆಯ ಜಂಜಾಟದಿಂದ ದೂರ ಒಳ್ಳೆ ಸುಂದರವಾದ ಪ್ರಕೃತಿಯ ನಡುವೆ ಇನ್ನಷ್ಟು ಹತ್ತಿರ ಆಗ್ತಾರಾ? ಶಕುಂತಲಾ ದೇವಿ ಮಾಡಿದ ಪ್ಲಾನ್ ಅವರಿಗೆ ಸಹಾಯ ಆಗುತ್ತಾ ಕಾದು ನೋಡಬೇಕಾಗಿದೆ.

Leave a Comment